ಎಂ. ಕೀರ್ತಿ ಪ್ರಸಾದ್
ಬೆಂಗಳೂರು: ಭಾರೀ ಮಳೆ, ನೆರೆ, ಭೂಕುಸಿತದಿಂದ ಬೆಂಗಳೂರು- ಮಂಗಳೂರು ಸಂಪರ್ಕಿಸುವ ಶಿರಾಡಿ, ಚಾರ್ಮಾಡಿ ಘಾಟಿ ಆಗಾಗ್ಗೆ ಹಾಳಾಗುತ್ತಿದ್ದು, ಈ ರಸ್ತೆಯಲ್ಲಿ ಸಂಚರಿಸುವುದು ಪ್ರಯಾಸಕರವಾಗಿದೆ. ಆದರೆ ಇದರ ಉಸಾಬರಿಯೇ ಬೇಡವೆಂಬಂತೆ ಕರಾವಳಿಯ ಬಹುತೇಕ ಜನಪ್ರತಿನಿಧಿಗಳು ಘಾಟಿ ಮಾರ್ಗ ಬಿಟ್ಟು ಫ್ಲೈಟ್ ಹತ್ತಿ ಪ್ರಯಾಣಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಗುಂಡಿಮಯ ರಸ್ತೆ, ಗುಡ್ಡ ಕುಸಿತ ಭೀತಿಯ ನಡುವೆ ಜನ ಜೀವ ಕೈಯಲ್ಲಿ ಹಿಡಿದು ಘಾಟಿ ರಸ್ತೆಗಳಲ್ಲಿ ಅನಿವಾರ್ಯವಾಗಿ ಪ್ರಯಾಣಿಸುತ್ತಿದ್ದಾರೆ. ಸಾಮಾನ್ಯ ಸಂದರ್ಭಕ್ಕಿಂತ ಎರಡು- ಮೂರು ಗಂಟೆ ಹೆಚ್ಚುವರಿ ಪ್ರಯಾಣ ಅವಧಿಯ ಸಂಚಾರ ಪ್ರಯಾಸಕರವಾಗಿದೆ. ಪರಿಸ್ಥಿತಿ ಹೀಗಿರುವಾಗ ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ಹೇರಿ ರಸ್ತೆ ದುರಸ್ತಿಪಡಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂಬುದು ಜನರ ಆಗ್ರಹ. ಆದರೆ ಆ ರಸ್ತೆ ಕಡೆಗೆ ಮುಖವನ್ನೇ ಹಾಕದ ಬಹುಪಾಲು ಜನಪ್ರತಿನಿಧಿಗಳು ಆಕಾಶ ಮಾರ್ಗವಾಗಿ ಸಂಚರಿಸುತ್ತಿರುವುದು ಜನರಲ್ಲಿ ಹತಾಶೆಯ ಜತೆಗೆ ಆಕ್ರೋಶವನ್ನೂ ಹುಟ್ಟುಹಾಕಿದೆ.
ರಾಜ್ಯದಲ್ಲಿ ಮುಂಗಾರು ಆರಂಭದಿಂದಲೂ ಬಹುತೇಕ ಕಡೆ ಬಿಟ್ಟು ಬಿಡದೆ ಕಾಡುತ್ತಿರುವ ಮಳೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಮೂಲಸೌಕರ್ಯ ಹಾಳಾಗಿದೆ. ಅದರಲ್ಲೂ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು ಭಾಗದಲ್ಲಿ ಭಾರಿ ಮಳೆ, ನೆರೆಯಿಂದ ರಸ್ತೆ, ಹೆದ್ದಾರಿ, ಸೇತುವೆಗಳಿಗೆ ಹಾನಿಯಾಗಿದೆ. ಮುಖ್ಯವಾಗಿ ಬೆಂಗಳೂರು- ಮಂಗಳೂರು ಸಂಪರ್ಕ ಕೊಂಡಿಯಾದ ಚಾರ್ಮಾಡಿ, ಶಿರಾಡಿ ಘಾಟಿ ರಸ್ತೆಗಳಲ್ಲಿ ಸಂಚಾರ ಸವಾಲಾಗಿ ಪರಿಣಮಿಸಿದೆ.
ಶಿರಾಡಿ ಘಾಟಿಯಲ್ಲಿ ಸುಮಾರು 12 ಕಿ.ಮೀ. ಉದ್ದದ ಮಾರ್ಗ ಸಂಪೂರ್ಣ ಹಾಳಾಗಿದೆ. ಚಾರ್ಮಾಡಿ ಘಾಟಿಯ ರಸ್ತೆ ಸುಸ್ಥಿತಿಯಲ್ಲಿದ್ದರೂ ದಟ್ಟ ಮಂಜು, ಮಳೆಯಾಗುವಾಗ ಗುಡ್ಡ ಕುಸಿತ ಭೀತಿಯಿಂದ ಜನ ಜೀವವನ್ನು ಕೈಯಲ್ಲೇ ಹಿಡಿದು ಪ್ರಯಾಣಿಸುವಂತಾಗಿದೆ. ಗುಂಡ್ಯದಿಂದ ಸಕಲೇಶಪುರದವರೆಗಿನ ಮಾರ್ಗದ ಹಲವೆಡೆಯೂ ರಸ್ತೆ ಹಾಳಾಗಿದೆ. ಮತ್ತೆ ಭಾರೀ ವಾಹನಗಳ ಸಂಚಾರಕ್ಕೂ ಅವಕಾಶ ಕಲ್ಪಿಸಿರುವುದರಿಂದ ಸಂಚಾರ ಕಷ್ಟಕರಕವಾಗಿದೆ.
ಈ ಎಲ್ಲ ಬೆಳವಣಿಗೆ ನಡುವೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಬಹುತೇಕ ಸಚಿವರು, ಜನಪ್ರತಿನಿಧಿಗಳು ಮಂಗಳೂರು- ಬೆಂಗಳೂರು ನಡುವೆ ರಸ್ತೆ ಮಾರ್ಗಕ್ಕೆ ಬದಲಾಗಿ ವಿಮಾನದಲ್ಲಿ ಪ್ರಯಾಣಿಸುತ್ತಿರುವುದು ಸಾಮಾನ್ಯವಾಗಿದೆ. ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರೊಬ್ಬರೇ ಮಂಗಳೂರಿನಿಂದ ಬೆಂಗಳೂರಿಗೆ ವೋಲ್ವೊ ಬಸ್ನಲ್ಲಿ ಸಂಚರಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ವಿಧಾನಮಂಡಲ ಅಧಿವೇಶನ ಮಾತ್ರವಲ್ಲದೆ ಉಳಿದ ಸಂದರ್ಭದಲ್ಲಿಯೂ ಆ ಭಾಗದ ಬಹುತೇಕ ಜನಪ್ರತಿನಿಧಿಗಳು ಫ್ಲೈಟ್ನಲ್ಲೇ ಸಂಚರಿಸುತ್ತಿದ್ದಾರೆ. ಕೆಟ್ಟ ರಸ್ತೆಗಳಲ್ಲಿ ಜನ ಸಂಚರಿಸಲು ಪ್ರಾಯಾಸ ಪಡುತ್ತಾ ಹೈರಾಣಾಗುತ್ತಿದ್ದಂತೆ ಜನಪ್ರತಿನಿಧಿಗಳು ಆಕಾಶ ಮಾರ್ಗದಲ್ಲಿ ಆರಾಮದಾಯಕವಾಗಿ ಪ್ರಯಾಣಿಸುತ್ತಿರುವ ಬಗ್ಗೆ ವಿಧಾನಮಂಡಲದ ಉಭಯ ಸದನಗಳ ಮೊಗಸಾಲೆಯಲ್ಲಿ ಆಗಾಗ್ಗೆ ಸಣ್ಣದಾಗಿ ಚರ್ಚೆಯಾಗುತ್ತಿರುತ್ತದೆ.
ಎರಡು ಗಂಟೆ ಹೆಚ್ಚುವರಿ ಪ್ರಯಾಣ
ಹಾಸನದಿಂದ ಮಂಗಳೂರಿನವರೆಗಿನ ಮಾರ್ಗ ಅಲ್ಲಲ್ಲಿ ಹಾಳಾಗಿರುವುದು, ಚಾರ್ಮಾಡಿ ಘಾಟಿ ಹದಗೆಟ್ಟಿರುವ ಪರಿಣಾಮ ಬೆಂಗಳೂರು- ಮಂಗಳೂರು ನಡುವಿನ ಪ್ರಯಾಣ ಸಮಯ ಎರಡು ಗಂಟೆಯಷ್ಟು ಹೆಚ್ಚಾಗಿದೆ. ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವವರು ಹೆಚ್ಚುವರಿ ಪ್ರಯಾಣ ಸಮಯವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಿಕೊಳ್ಳಲು ಸಾಧ್ಯವಾಗಬಹುದು. ಆದರೆ ಬಸ್ಗಳಲ್ಲಿ ಸಂಚರಿಸುವವರು ಅನಿವಾರ್ಯವಾಗಿ ಎರಡು ಗಂಟೆ ಹೆಚ್ಚುವರಿ ಸಮಯವನ್ನು ವಾಹನದಲ್ಲೇ ಕಳೆಯುವಂತಾಗಿದೆ. ಬೆಂಗಳೂರು- ಮಂಗಳೂರು ನಡುವಿನ ರೈಲು ಸಂಚಾರ ಸಮಯ, ಅವಧಿ ಪ್ರಯಾಣಿಕ ಸ್ನೇಹಿಯಾಗಿರದ ಕಾರಣ ಜನ ಅನಿವಾರ್ಯವಾಗಿ ಬಸ್ಗಳನ್ನೇ ಅವಲಂಬಿಸುವಂತಾಗಿದೆ.
ಸಕಲೇಶಪುರ ಭಾಗದಲ್ಲಿ ರಾಷ್ಟ್ರೀಯ ಹಾಳಾಗಿರುವ ಪರಿಣಾಮ 47 ಕಿ.ಮೀ. ಕ್ರಮಿಸಲು ಒಂದೂ ಮುಕ್ಕಾಲು ಗಂಟೆ ಹಿಡಿಯುತ್ತಿದೆ. ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ಕೂಡಲೇ ದುರಸ್ತಿಪಡಿಸಿಬೇಕು ಎಂದು ಜೆಡಿಎಸ್ ಶಾಸಕ ಎಚ್.ಕೆ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಇತ್ತೀಚೆಗೆ ಒತ್ತಾಯಿಸಿದ್ದರು. ಮಳೆ ಮುಂದುವರಿಕೆ ಕಾರಣದಿಂದ ಮಳೆಗಾಲ ಮುಗಿಯುವವರೆಗೆ ರಸ್ತೆ ದುರಸ್ತಿ ಮರೀಚಿಕೆ ಎನಿಸಿದೆ. ಆದ್ಯತೆ ಮೇರೆಗೆ ರಸ್ತೆ ದುರಸ್ತಿಗೆ ಒತ್ತಾಯದ ಕೂಗು ಹೆಚ್ಚಾಗುತ್ತಿದೆ.
ಪ್ರಧಾನಿ ಸಂಚಾರಕ್ಕೆ ಒತ್ತಾಯ
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಅವರು ಪ್ರಯಾಣಿಸುವ ರಸ್ತೆಗಳು ಹಾಗೂ ಅವುಗಳನ್ನು ಸಂಪರ್ಕಿಸುವ ರಸ್ತೆಗಳು ರಾತ್ರೋರಾತ್ರಿ ಅಭಿವೃದ್ಧಿಯಾಗಿ ಹೊಳೆಯಲಾರಂಭಿಸಿದ್ದವು. ಆ ಹಿನ್ನೆಲೆಯಲ್ಲಿ ಪ್ರಧಾನಿಯವರು ಶಿರಾಡಿ ಘಾಟಿ ಮಾರ್ಗವಾಗಿ ಮಂಗಳೂರಿಗೆ ಭೇಟಿ ನೀಡಬೇಕು ಎಂದು ಮನವಿಪೂರ್ವಕ ಒತ್ತಾಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಮೋದಿಯವರು ಶಿರಾಡಿ ಘಾಟಿ ಮಾರ್ಗವಾಗಿ ಬರುವುದಾದರೆ ಆ ಹೆದ್ದಾರಿಗಳು ಅಭಿವೃದ್ಧಿಯಾಗಿ ಸಂಚಾರ ಸುಗಮವಾಗುವ ನಿರೀಕ್ಷೆಯಲ್ಲಿ ಈ ರೀತಿಯ ಒತ್ತಾಯ ಕೇಳಿಬಂದಿತ್ತು. ಆ ನಂತರವೂ ಈ ಮಾರ್ಗದ ರಸ್ತೆ ದುರಸ್ತಿ ಕಾರ್ಯಕ್ಕೆ ಒತ್ತು ಸಿಕ್ಕಿಲ್ಲ.
ಬೆಂಗಳೂರು: ಭಾರೀ ಮಳೆ, ನೆರೆ, ಭೂಕುಸಿತದಿಂದ ಬೆಂಗಳೂರು- ಮಂಗಳೂರು ಸಂಪರ್ಕಿಸುವ ಶಿರಾಡಿ, ಚಾರ್ಮಾಡಿ ಘಾಟಿ ಆಗಾಗ್ಗೆ ಹಾಳಾಗುತ್ತಿದ್ದು, ಈ ರಸ್ತೆಯಲ್ಲಿ ಸಂಚರಿಸುವುದು ಪ್ರಯಾಸಕರವಾಗಿದೆ. ಆದರೆ ಇದರ ಉಸಾಬರಿಯೇ ಬೇಡವೆಂಬಂತೆ ಕರಾವಳಿಯ ಬಹುತೇಕ ಜನಪ್ರತಿನಿಧಿಗಳು ಘಾಟಿ ಮಾರ್ಗ ಬಿಟ್ಟು ಫ್ಲೈಟ್ ಹತ್ತಿ ಪ್ರಯಾಣಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದಲ್ಲಿ ಮುಂಗಾರು ಆರಂಭದಿಂದಲೂ ಬಹುತೇಕ ಕಡೆ ಬಿಟ್ಟು ಬಿಡದೆ ಕಾಡುತ್ತಿರುವ ಮಳೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಮೂಲಸೌಕರ್ಯ ಹಾಳಾಗಿದೆ. ಅದರಲ್ಲೂ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು ಭಾಗದಲ್ಲಿ ಭಾರಿ ಮಳೆ, ನೆರೆಯಿಂದ ರಸ್ತೆ, ಹೆದ್ದಾರಿ, ಸೇತುವೆಗಳಿಗೆ ಹಾನಿಯಾಗಿದೆ. ಮುಖ್ಯವಾಗಿ ಬೆಂಗಳೂರು- ಮಂಗಳೂರು ಸಂಪರ್ಕ ಕೊಂಡಿಯಾದ ಚಾರ್ಮಾಡಿ, ಶಿರಾಡಿ ಘಾಟಿ ರಸ್ತೆಗಳಲ್ಲಿ ಸಂಚಾರ ಸವಾಲಾಗಿ ಪರಿಣಮಿಸಿದೆ.
ಶಿರಾಡಿ ಘಾಟಿಯಲ್ಲಿ ಸುಮಾರು 12 ಕಿ.ಮೀ. ಉದ್ದದ ಮಾರ್ಗ ಸಂಪೂರ್ಣ ಹಾಳಾಗಿದೆ. ಚಾರ್ಮಾಡಿ ಘಾಟಿಯ ರಸ್ತೆ ಸುಸ್ಥಿತಿಯಲ್ಲಿದ್ದರೂ ದಟ್ಟ ಮಂಜು, ಮಳೆಯಾಗುವಾಗ ಗುಡ್ಡ ಕುಸಿತ ಭೀತಿಯಿಂದ ಜನ ಜೀವವನ್ನು ಕೈಯಲ್ಲೇ ಹಿಡಿದು ಪ್ರಯಾಣಿಸುವಂತಾಗಿದೆ. ಗುಂಡ್ಯದಿಂದ ಸಕಲೇಶಪುರದವರೆಗಿನ ಮಾರ್ಗದ ಹಲವೆಡೆಯೂ ರಸ್ತೆ ಹಾಳಾಗಿದೆ. ಮತ್ತೆ ಭಾರೀ ವಾಹನಗಳ ಸಂಚಾರಕ್ಕೂ ಅವಕಾಶ ಕಲ್ಪಿಸಿರುವುದರಿಂದ ಸಂಚಾರ ಕಷ್ಟಕರಕವಾಗಿದೆ.
ಈ ಎಲ್ಲ ಬೆಳವಣಿಗೆ ನಡುವೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಬಹುತೇಕ ಸಚಿವರು, ಜನಪ್ರತಿನಿಧಿಗಳು ಮಂಗಳೂರು- ಬೆಂಗಳೂರು ನಡುವೆ ರಸ್ತೆ ಮಾರ್ಗಕ್ಕೆ ಬದಲಾಗಿ ವಿಮಾನದಲ್ಲಿ ಪ್ರಯಾಣಿಸುತ್ತಿರುವುದು ಸಾಮಾನ್ಯವಾಗಿದೆ. ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರೊಬ್ಬರೇ ಮಂಗಳೂರಿನಿಂದ ಬೆಂಗಳೂರಿಗೆ ವೋಲ್ವೊ ಬಸ್ನಲ್ಲಿ ಸಂಚರಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ವಿಧಾನಮಂಡಲ ಅಧಿವೇಶನ ಮಾತ್ರವಲ್ಲದೆ ಉಳಿದ ಸಂದರ್ಭದಲ್ಲಿಯೂ ಆ ಭಾಗದ ಬಹುತೇಕ ಜನಪ್ರತಿನಿಧಿಗಳು ಫ್ಲೈಟ್ನಲ್ಲೇ ಸಂಚರಿಸುತ್ತಿದ್ದಾರೆ. ಕೆಟ್ಟ ರಸ್ತೆಗಳಲ್ಲಿ ಜನ ಸಂಚರಿಸಲು ಪ್ರಾಯಾಸ ಪಡುತ್ತಾ ಹೈರಾಣಾಗುತ್ತಿದ್ದಂತೆ ಜನಪ್ರತಿನಿಧಿಗಳು ಆಕಾಶ ಮಾರ್ಗದಲ್ಲಿ ಆರಾಮದಾಯಕವಾಗಿ ಪ್ರಯಾಣಿಸುತ್ತಿರುವ ಬಗ್ಗೆ ವಿಧಾನಮಂಡಲದ ಉಭಯ ಸದನಗಳ ಮೊಗಸಾಲೆಯಲ್ಲಿ ಆಗಾಗ್ಗೆ ಸಣ್ಣದಾಗಿ ಚರ್ಚೆಯಾಗುತ್ತಿರುತ್ತದೆ.
ಎರಡು ಗಂಟೆ ಹೆಚ್ಚುವರಿ ಪ್ರಯಾಣ
ಹಾಸನದಿಂದ ಮಂಗಳೂರಿನವರೆಗಿನ ಮಾರ್ಗ ಅಲ್ಲಲ್ಲಿ ಹಾಳಾಗಿರುವುದು, ಚಾರ್ಮಾಡಿ ಘಾಟಿ ಹದಗೆಟ್ಟಿರುವ ಪರಿಣಾಮ ಬೆಂಗಳೂರು- ಮಂಗಳೂರು ನಡುವಿನ ಪ್ರಯಾಣ ಸಮಯ ಎರಡು ಗಂಟೆಯಷ್ಟು ಹೆಚ್ಚಾಗಿದೆ. ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವವರು ಹೆಚ್ಚುವರಿ ಪ್ರಯಾಣ ಸಮಯವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಿಕೊಳ್ಳಲು ಸಾಧ್ಯವಾಗಬಹುದು. ಆದರೆ ಬಸ್ಗಳಲ್ಲಿ ಸಂಚರಿಸುವವರು ಅನಿವಾರ್ಯವಾಗಿ ಎರಡು ಗಂಟೆ ಹೆಚ್ಚುವರಿ ಸಮಯವನ್ನು ವಾಹನದಲ್ಲೇ ಕಳೆಯುವಂತಾಗಿದೆ. ಬೆಂಗಳೂರು- ಮಂಗಳೂರು ನಡುವಿನ ರೈಲು ಸಂಚಾರ ಸಮಯ, ಅವಧಿ ಪ್ರಯಾಣಿಕ ಸ್ನೇಹಿಯಾಗಿರದ ಕಾರಣ ಜನ ಅನಿವಾರ್ಯವಾಗಿ ಬಸ್ಗಳನ್ನೇ ಅವಲಂಬಿಸುವಂತಾಗಿದೆ.
ಸಕಲೇಶಪುರ ಭಾಗದಲ್ಲಿ ರಾಷ್ಟ್ರೀಯ ಹಾಳಾಗಿರುವ ಪರಿಣಾಮ 47 ಕಿ.ಮೀ. ಕ್ರಮಿಸಲು ಒಂದೂ ಮುಕ್ಕಾಲು ಗಂಟೆ ಹಿಡಿಯುತ್ತಿದೆ. ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ಕೂಡಲೇ ದುರಸ್ತಿಪಡಿಸಿಬೇಕು ಎಂದು ಜೆಡಿಎಸ್ ಶಾಸಕ ಎಚ್.ಕೆ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಇತ್ತೀಚೆಗೆ ಒತ್ತಾಯಿಸಿದ್ದರು. ಮಳೆ ಮುಂದುವರಿಕೆ ಕಾರಣದಿಂದ ಮಳೆಗಾಲ ಮುಗಿಯುವವರೆಗೆ ರಸ್ತೆ ದುರಸ್ತಿ ಮರೀಚಿಕೆ ಎನಿಸಿದೆ. ಆದ್ಯತೆ ಮೇರೆಗೆ ರಸ್ತೆ ದುರಸ್ತಿಗೆ ಒತ್ತಾಯದ ಕೂಗು ಹೆಚ್ಚಾಗುತ್ತಿದೆ.
ಪ್ರಧಾನಿ ಸಂಚಾರಕ್ಕೆ ಒತ್ತಾಯ
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಅವರು ಪ್ರಯಾಣಿಸುವ ರಸ್ತೆಗಳು ಹಾಗೂ ಅವುಗಳನ್ನು ಸಂಪರ್ಕಿಸುವ ರಸ್ತೆಗಳು ರಾತ್ರೋರಾತ್ರಿ ಅಭಿವೃದ್ಧಿಯಾಗಿ ಹೊಳೆಯಲಾರಂಭಿಸಿದ್ದವು. ಆ ಹಿನ್ನೆಲೆಯಲ್ಲಿ ಪ್ರಧಾನಿಯವರು ಶಿರಾಡಿ ಘಾಟಿ ಮಾರ್ಗವಾಗಿ ಮಂಗಳೂರಿಗೆ ಭೇಟಿ ನೀಡಬೇಕು ಎಂದು ಮನವಿಪೂರ್ವಕ ಒತ್ತಾಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಮೋದಿಯವರು ಶಿರಾಡಿ ಘಾಟಿ ಮಾರ್ಗವಾಗಿ ಬರುವುದಾದರೆ ಆ ಹೆದ್ದಾರಿಗಳು ಅಭಿವೃದ್ಧಿಯಾಗಿ ಸಂಚಾರ ಸುಗಮವಾಗುವ ನಿರೀಕ್ಷೆಯಲ್ಲಿ ಈ ರೀತಿಯ ಒತ್ತಾಯ ಕೇಳಿಬಂದಿತ್ತು. ಆ ನಂತರವೂ ಈ ಮಾರ್ಗದ ರಸ್ತೆ ದುರಸ್ತಿ ಕಾರ್ಯಕ್ಕೆ ಒತ್ತು ಸಿಕ್ಕಿಲ್ಲ.