ಆ್ಯಪ್ನಗರ

ಕಾರಾಗೃಹದಲ್ಲಿ ಮೊಬೈಲ್‌ಗೆ ಕಡಿವಾಣ:: ಟವರ್‌ ಡಂಪ್‌ ಆಧರಿಸಿ ತನಿಖೆ

ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ವ್ಯಾಪಕವಾಗಿ ಮೊಬೈಲ್‌ ಬಳಸುತ್ತಿರುವುದಕ್ಕೆ ಕಡಿವಾಣ ಹಾಕಲು ನಿರ್ಧರಿಸಿರುವ ಅಧಿಕಾರಿಗಳು ಜೈಲಿನ ಮೊಬೈಲ್‌ ಟವರ್‌ ಡಂಪ್‌ ತೆಗೆದು ತನಿಖೆ ನಡೆಸಲು ನಿರ್ಧರಿಸಿದ್ದಾರೆ.

ವಿಕ ಸುದ್ದಿಲೋಕ 19 Jul 2017, 11:37 am
ಬೆಂಗಳೂರು: ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ವ್ಯಾಪಕವಾಗಿ ಮೊಬೈಲ್‌ ಬಳಸುತ್ತಿರುವುದಕ್ಕೆ ಕಡಿವಾಣ ಹಾಕಲು ನಿರ್ಧರಿಸಿರುವ ಅಧಿಕಾರಿಗಳು ಜೈಲಿನ ಮೊಬೈಲ್‌ ಟವರ್‌ ಡಂಪ್‌ ತೆಗೆದು ತನಿಖೆ ನಡೆಸಲು ನಿರ್ಧರಿಸಿದ್ದಾರೆ.
Vijaya Karnataka Web mobile restriction at jail
ಕಾರಾಗೃಹದಲ್ಲಿ ಮೊಬೈಲ್‌ಗೆ ಕಡಿವಾಣ:: ಟವರ್‌ ಡಂಪ್‌ ಆಧರಿಸಿ ತನಿಖೆ


ಡಿಐಜಿ ರೂಪಾ, ಡಿಜಿಪಿ ಸತ್ಯನಾರಾಯಣರಾವ್‌ ಮತ್ತು ಅಧೀಕ್ಷಕ ಕೃಷ್ಣಕುಮಾರ್‌ ವರ್ಗಾವಣೆಯಿಂದ ಉಂಟಾಗಿದ್ದ ಪರ ವಿರೋಧ ಪ್ರತಿಭಟನೆಗಳ ವೇಳೆ ಜೈಲಿನ ಒಳಗೆ ವ್ಯಾಪಕವಾಗಿ ಮೊಬೈಲ್‌ ಬಳಕೆ ಮಾಡಿ ಬೇರೆ ಬೇರೆ ಬ್ಯಾರಕ್ಕುಗಳಿರುವ ಕೈದಿಗಳು ಸಂಘಟಿತರಾಗಿದ್ದರು ಎನ್ನುವ ಮಾಹಿತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದಾರೆ.

ಪೊಲೀಸರು ದಾಳಿ ಮಾಡಿದರೂ ಮೊಬೈಲ್‌ ಸಿಗದಂತೆ ಬಚ್ಚಿಡಲು ಕೈದಿಗಳು ಜಾಗಗಳನ್ನು ಸೃಷ್ಟಿಸಿಕೊಂಡಿರುವುದರಿಂದ ಪೊಲೀಸರು ಟವರ್‌ ಡಂಪ್‌ ತೆಗೆಯಲು ಮುಂದಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಜೈಲಿನ ಒಳಗಿನಿಂದ ಬಳಕೆ ಆಗಿರುವ ಮೊಬೈಲ್‌ ನಂಬರ್‌ಗಳು, ಆ ನಂಬರ್‌ಗಳಿಂದ ಹೊರ ಹೋಗಿರುವ ಮತ್ತು ಒಳ ಬಂದಿರುವ ಕರೆಗಳನ್ನು ಗುರುತಿಸಿ ತನಿಖೆ ಕೈಗೊಳ್ಳಲಿದ್ದಾರೆ.

ಚಾಪೆ ಕೆಳಗೆ ನುಸುಳಿದ್ದ ಕೈದಿಗಳು

ಅಧಿಕಾರಿಗಳ ತನಿಖೆಗೂ ಸಿಗಬಾರದು ಎಂದು ಕೈದಿಗಳು ವಾಟ್ಸಾಪ್‌ ಕಾಲ್‌ಗಳ ಮೂಲಕ ತಮ್ಮ ತಮ್ಮ ಗ್ಯಾಂಗ್‌ಗಳನ್ನು ಸಂಘಟಿಸಿದ್ದರು. ಆದರೆ ರಂಗೋಲಿ ಕೆಳಗೆ ನುಸುಳಿದ ಅಧಿಕಾರಿಗಳು ಟವರ್‌ ಡಂಪ್‌ ಮೂಲಕ ನಂಬರ್‌ಗಳ ಪಟ್ಟಿ ಸಂಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ