ಬೆಂಗಳೂರು: ವಿಧಾನಸಭೆಯಲ್ಲಿ ಕೆಲವು ಶಾಸಕರ ನೀಲಿಚಿತ್ರ ವೀಕ್ಷಣೆ ಪ್ರಕರಣದ ಬಳಿಕ ಸದನದೊಳಗೆ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣ ನಿಷೇಧಿಸಿದ್ದರೂ ಹಲವರ ಮೊಬೈಲ್ ಬಳಕೆ ಆಸಕ್ತಿ ಮಾತ್ರ ತಗ್ಗಿಲ್ಲ.
ವರುಣ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿ ಬಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಅವರು ಸದನದೊಳಗೆ ಫೇಸ್ಬುಕ್ ಅಪ್ಟೇಡ್ ವೀಕ್ಷಣೆಯಲ್ಲಿ ನಿರತರಾಗಿದ್ದರು. ಶಾಸಕ ಬಿ.ಸಿ.ಪಾಟೀಲ್ ಅವರೂ ಮೊಬೈಲ್ ವೀಕ್ಷಣೆಯಲ್ಲಿ ತೊಡಗಿದ್ದ ದೃಶ್ಯಗಳು ಮಾಧ್ಯಮಗಳ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಕೆಲವು ಹೊಸ ಶಾಸಕರು ಸದನದೊಳಗೇ ಮೊಬೈಲ್ ಸಂಭಾಷಣೆಯನ್ನೂ ನಡೆಸಿದರು.
ಸದನದೊಳಗೆ ಮೊಬೈಲ್ ಬಳಕೆ ನಿಷೇಧ ಮಾಡಿದ ಬಳಿಕ ಮೊಗಸಾಲೆಯಲ್ಲಿರುವ ಲಾಕರ್ಗಳಲ್ಲಿ ಇಡಲು ವ್ಯವಸ್ಥೆ ಮಾಡಿದ್ದರೂ ಕೆಲವು ಶಾಸಕರು ಮೊಬೈಲ್ಗಳನ್ನು ಸದನದೊಳಗೆ ಕೊಂಡೊಯ್ಯುತ್ತಿದ್ದಾರೆ. ಸದನದಲ್ಲಿ ಮೊಬೈಲ್ ಸಂಪರ್ಕ ಸಿಗದಂತೆ ಜಾಮರ್ ಅಳವಡಿಸಲಾಗಿದ್ದರೂ ಕೆಲವು ಕಂಪನಿಗಳ ಮೊಬೈಲ್ ಸಂಪರ್ಕ ಹಾಗೂ ಇಂಟರ್ನೆಟ್ ಸಂಪರ್ಕ ಸದನದೊಳಗೆ ಸಿಗುತ್ತಿದೆ.
ವರುಣ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿ ಬಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಅವರು ಸದನದೊಳಗೆ ಫೇಸ್ಬುಕ್ ಅಪ್ಟೇಡ್ ವೀಕ್ಷಣೆಯಲ್ಲಿ ನಿರತರಾಗಿದ್ದರು. ಶಾಸಕ ಬಿ.ಸಿ.ಪಾಟೀಲ್ ಅವರೂ ಮೊಬೈಲ್ ವೀಕ್ಷಣೆಯಲ್ಲಿ ತೊಡಗಿದ್ದ ದೃಶ್ಯಗಳು ಮಾಧ್ಯಮಗಳ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಕೆಲವು ಹೊಸ ಶಾಸಕರು ಸದನದೊಳಗೇ ಮೊಬೈಲ್ ಸಂಭಾಷಣೆಯನ್ನೂ ನಡೆಸಿದರು.
ಸದನದೊಳಗೆ ಮೊಬೈಲ್ ಬಳಕೆ ನಿಷೇಧ ಮಾಡಿದ ಬಳಿಕ ಮೊಗಸಾಲೆಯಲ್ಲಿರುವ ಲಾಕರ್ಗಳಲ್ಲಿ ಇಡಲು ವ್ಯವಸ್ಥೆ ಮಾಡಿದ್ದರೂ ಕೆಲವು ಶಾಸಕರು ಮೊಬೈಲ್ಗಳನ್ನು ಸದನದೊಳಗೆ ಕೊಂಡೊಯ್ಯುತ್ತಿದ್ದಾರೆ. ಸದನದಲ್ಲಿ ಮೊಬೈಲ್ ಸಂಪರ್ಕ ಸಿಗದಂತೆ ಜಾಮರ್ ಅಳವಡಿಸಲಾಗಿದ್ದರೂ ಕೆಲವು ಕಂಪನಿಗಳ ಮೊಬೈಲ್ ಸಂಪರ್ಕ ಹಾಗೂ ಇಂಟರ್ನೆಟ್ ಸಂಪರ್ಕ ಸದನದೊಳಗೆ ಸಿಗುತ್ತಿದೆ.