ಆ್ಯಪ್ನಗರ

ಗೋಬ್ಯಾಕ್‌ಮೋದಿ ಅಭಿಯಾನ ನಡೆಸಿದ ಕಾಂಗ್ರೆಸ್‌

ಪ್ರಧಾನಿ ಮೋದಿಯವರು ಹುಬ್ಬಳ್ಳಿಯಲ್ಲಿ ರಾರ‍ಯಲಿ ನಡೆಸಿದ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ 'ಗೋಬ್ಯಾಕ್‌ಮೋದಿ' ಎಂಬ ಅಭಿಯಾನ ವಿಚಾರದಲ್ಲಿ ಕೆಪಿಸಿಸಿ ಅಧಿಕೃತ ಟ್ವಿಟರ್‌ ...

Vijaya Karnataka 11 Feb 2019, 5:00 am
ಬೆಂಗಳೂರು : ಪ್ರಧಾನಿ ಮೋದಿಯವರು ಹುಬ್ಬಳ್ಳಿಯಲ್ಲಿ ರಾರ‍ಯಲಿ ನಡೆಸಿದ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ 'ಗೋಬ್ಯಾಕ್‌ಮೋದಿ' ಎಂಬ ಅಭಿಯಾನ ವಿಚಾರದಲ್ಲಿ ಕೆಪಿಸಿಸಿ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ನಿಂದ ಸರಣಿ ಟ್ವೀಟ್‌ ಮಾಡಲಾಗಿದೆ.
Vijaya Karnataka Web twitter-logo-vector-download


ಇದನ್ನು ಬೆಂಬಲಿಸಿ ಡಿಸಿಎಂ ಜಿ.ಪರಮೇಶ್ವರ್‌ ಹಾಗೂ ಇತರರು ಟ್ವೀಟ್‌ ಮಾಡಿದ್ದಾರೆ. ಮಹದಾಯಿ ಸಂಬಂಧದಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯವಾಗಿದೆಯೆಂದು ಆರೋಪಿಸಲಾಗಿದೆ.

''ಮೋದಿಯವರೇ, ನಿಮಗೂ ಸತ್ಯಕ್ಕೂ ಹೊಂದಾಣಿಕೆ ಆಗುವುದಿಲ್ಲವೇ? ನಿಮ್ಮ ಬಾಯಿಯಿಂದ ಸತ್ಯ ಮತ್ತು ವಾಸ್ತವತೆ ಹೊರಡುವುದೇ ಇಲ್ಲವೇ? ರಾಜ್ಯದ ಸಿಎಂ ಅಸಹಾಯಕರಲ್ಲ. ಸರಕಾರವೂ ಅಸಹಾಯಕವಲ್ಲ. ಬಿಎಸ್‌ವೈ ಮತ್ತು ತಂಡ ಮಾತ್ರ ಅಸಹನೆ, ಅಸತ್ಯ, ಅಧರ್ಮದ ದಾರಿಯಲ್ಲಿದೆ. ಪ್ರಜಾಪ್ರಭುತ್ವ ವಿರೋಧಿ ಆಪರೇಷನ್‌ ಕಮಲದ ಬಗ್ಗೆ ಚಕಾರವೆತ್ತಲಿಲ್ಲವೇಕೆ,'' ಎಂದು ಕೆಪಿಸಿಸಿ ಪ್ರಶ್ನಿಸಿದೆ.

ಬರ ಪರಿಹಾರದಲ್ಲಿ ತಾರತಮ್ಯ. ನರೇಗ ಹಣ ನೀಡುವುದರಲ್ಲಿ ವಿಳಂಬ. ಧಾರವಾಡ ಐಐಟಿ ಸ್ಥಾಪನೆಗೆ ರಾಜ್ಯ ಸರಕಾರ ನೀಡಿದ ಕೊಡುಗೆ ಕಡೆಗಣನೆ. ರಾಫೇಲ್‌ ಡೀಲ್‌ನಲ್ಲಿ ಎಚ್‌ಎಲ್‌ ನಿರ್ಲಕ್ಷ್ಯ. ರಾಜ್ಯಕ್ಕೆ ಮಾಡಿರುವ ಅನ್ಯಾಯದ ಪಟ್ಟಿಯನ್ನು ಒಂದೇ ಟ್ವೀಟ್‌ನಲ್ಲಿ ಹೇಳಲು ಸಾಧ್ಯವಿಲ್ಲ. ಇಷ್ಟೆಲ್ಲ ಇದ್ದರೂ ರಾಜ್ಯದ ಜನರನ್ನು ನೀವು ಹೇಗೆ ಎದುರಿಸುತ್ತೀರಿ?

-ಜಿ.ಪರಮೇಶ್ವರ್‌, ಡಿಸಿಎಂ

ಸೌಥ್‌ಇಂಡಿಯಫಾರ್‌ನಮೋ
ಬಿಜೆಪಿಯಿಂದ 'ಸೌಥ್‌ಇಂಡಿಯಫಾರ್‌ನಮೋ' ಅಭಿಯಾನ ನಡೆಸಲಾಯಿತು. ರಾಜ್ಯ ಬಿಜೆಪಿಯ ಟ್ವಿಟರ್‌ ಹ್ಯಾಂಡಲ್‌ನಿಂದ ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ಮೋದಿ ಸರಕಾರದ ಕಾರ್ಯಕ್ರಮಗಳ ವಿವರ ಹಂಚಿಕೊಳ್ಳಲಾಯಿತು. ರಾಜ್ಯಕ್ಕೆ ಕೇಂದ್ರದ ಕೊಡುಗೆಯೂ ಬಗ್ಗೆಯೂ ಟ್ವೀಟ್‌ ಮಾಡಲಾಯಿತು. ಪಕ್ಷದ ಹಲವು ಮುಖಂಡರೂ ಇದನ್ನು ಅನುಸರಿಸಿ ಟ್ವೀಟ್‌ ಮಾಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ