ಆ್ಯಪ್ನಗರ

ಮುಂದಿನ ಚುನಾವಣೆಯಲ್ಲಿ ಗೆದ್ದು ಮೋದಿ ಪ್ರಧಾನಿ ಆಗ್ತಾರೆ, ದೇವೇಗೌಡರು ಪ್ರಧಾನಿ ಆಗಲ್ಲ

ಮಂಡ್ಯದಲ್ಲಿ ಶ್ರೀರಾಮುಲು ಹೇಳಿಕೆ.

Vijaya Karnataka Web 9 Jul 2018, 9:21 pm
ಮಂಡ್ಯ: ಈ ಬಾರಿ ಜನರು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿ ಕಳುಹಿಸಿದ್ದಾರೆ. ನಾನು ಶಾಸಕನಾಗಿಯೇ ಮುಂದುವರಿಯುವೆ. ಮತ್ತೆ ಲೋಕಸಭೆಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಶ್ರೀರಾಮುಲು ತಿಳಿಸಿದ್ದಾರೆ.
Vijaya Karnataka Web ಶ್ರೀರಾಮುಲು
ಶ್ರೀರಾಮುಲು


ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಲೋಕಸಭಾ ಸದಸ್ಯನಾಗಿದ್ದ ನನಗೆ ಪಕ್ಷ ಶಾಸಕನಾಗೋ ಅವಕಾಶ ನೀಡಿದೆ.
ರಾಜ್ಯ ಸರ್ಕಾರದ ಆಡಳಿತ ಗಮನಿಸ್ತಿದ್ದೇನೆ. ವಿರೋಧ ಪಕ್ಷದಲ್ಲಿ ಕುಳಿತು ಸರ್ಕಾರದ ವಿರುದ್ಧ ಹೋರಾಟ ಮಾಡ್ತೀನಿ ಎಂದರು.

ಹಿಂದಿನಿಂದಲೂ ಪಕ್ಷ ಸಂಘಟನೆ ಮಾಡ್ತಿದ್ದೇವೆ. ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಆರಂಭವಾಗಿದೆ. ಯಾವ ಸಂಸದರನ್ನ ಮುಂದುವರಿಸಬೇಕು.
ಯಾರನ್ನ ಅಭ್ಯರ್ಥಿ ಮಾಡಬೇಕೆಂಬ ಎಂಬ ಬಗ್ಗೆ ಅಂತಿಮ ಚರ್ಚೆ ನಡೀತ್ತಿದೆ ಎಂದರು.

ನಾವೇನು ಮಾಡಬೇಕೆಂಬ ಯೋಜನೆ ಹಮ್ಮಿಕೊಂಡಿದ್ದೇವೆ. ಈಗಾಗಲೇ ತೃತೀಯ ರಂಗ ಸಂಘಟನೆಯಾಗಿದೆ. ಅವರೆಲ್ಲ ಏನೇ ಮಾಡಿದ್ರು ಪ್ರಯೋಜನ ಆಗಲ್ಲ. ಮತ್ತೆ ನರೇಂದ್ರ ಮೋದಿ ಪ್ರಧಾನಿ ಆಗ್ತಾರೆ ಹೊರತು ದೇವೇಗೌಡರು ಪ್ರಧಾನಿ ಆಗಲು ಸಾಧ್ಯವಿಲ್ಲ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ