ಆ್ಯಪ್ನಗರ

ಸುಪ್ರೀಂಕೋರ್ಟ್ ತಡೆಯಾಜ್ಞೆಯೊಂದೇ ಗುಟುಕು ಜೀವ: ಸೋಮವಾರವೇ ಅನರ್ಹರಿಗೆ ನಿರ್ಣಾಯಕ ದಿನ

ಶಾಸಕರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ತೆರವಾಗಿರುವ ಕರ್ನಾಟಕದ 17 ವಿಧಾನಸಭಾ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿದೆ.

Vijaya Karnataka 22 Sep 2019, 6:51 am
ಬೆಂಗಳೂರು: ಪ್ರಸಕ್ತ ವಿಧಾನಸಭೆಯ ಅವಧಿ ಮುಕ್ತಾಯವಾಗುವ ತನಕ ಚುನಾವಣೆಗೆ ಸ್ಪರ್ಧಿಸುವಂತಿಲ್ಲಎಂಬ ಸ್ಪೀಕರ್‌ ಆದೇಶಕ್ಕೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿದರೆ ಮಾತ್ರ ಅನರ್ಹರ ರಾಜಕೀಯ ಭವಿಷ್ಯಕ್ಕೆ ಗುಟುಕು ಜೀವ ಬಂದಂತೆ ಆಗುತ್ತದೆ, ಇಲ್ಲದಿದ್ದರೆ ಸ್ಪರ್ಧೆಗೆ ಪರ್ಯಾಯ ವ್ಯಕ್ತಿಗಳ ಶೋಧ ಅನಿವಾರ್ಯವಾಗಲಿದೆ.
Vijaya Karnataka Web mlas


ಸ್ಪೀಕರ್‌ ಆದೇಶ ಪ್ರಶ್ನಿಸಿ ಅನರ್ಹ ಶಾಸಕರು ಕಳೆದ ಒಂದೂವರೆ ತಿಂಗಳ ಹಿಂದೆಯೇ ಸಲ್ಲಿಸಿದ್ದ ಅರ್ಜಿ ಸೋಮವಾರ ಸುಪ್ರೀಂಕೋರ್ಟ್‌ನಲ್ಲಿವಿಚಾರಣೆಗೆ ಬರಲಿದೆ. ಅನರ್ಹತೆಗೆ ತಡೆ ಕೊಡಬೇಕೆಂಬುದೇ ಅರ್ಜಿಯಲ್ಲಿಪ್ರಮುಖವಾಗಿ ಕೋರಲಾಗಿರುವ ಅಂಶ. ಈ ಮಧ್ಯೆ ಸೋಮವಾರವೇ ಚುನಾವಣೆಗೆ ಅಧಿಸೂಚನೆ ಹೊರಬೀಳಲಿದೆ. ಹೀಗಾಗಿ ಅನರ್ಹರ ಪಾಲಿಗೆ ಸೋಮವಾರ ಅತ್ಯಂತ ನಿರ್ಣಾಯಕ ದಿನ. ಸ್ಪೀಕರ್‌ ಆದೇಶಕ್ಕೆ ತಡೆ ಪಡೆಯಬೇಕು ಇಲ್ಲವೇ ಪ್ರಕರಣ ಇತ್ಯರ್ಥವಾಗುವ ತನಕ ಚುನಾವಣೆ ಘೋಷಣೆಗೆ ತಡೆ ಹಿಡಿಯಬೇಕು. ಒಂದು ವೇಳೆ ಇವೆರಡಕ್ಕೂ ಕೋರ್ಟ್‌ನಿಂದ ಪುರಸ್ಕಾರ ಸಿಗದಿದ್ದರೆ ಅನರ್ಹರು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ.

ಕುಟುಂಬ ಸದಸ್ಯರ ಸ್ಪರ್ಧೆ ಸುಲಭವಲ್ಲ

ಸ್ಪರ್ಧಿಸಲು ಅವಕಾಶ ಸಿಗದಿದ್ದರೆ ತಮ್ಮ ಕುಟುಂಬ ಸದಸ್ಯರನ್ನು ಕಣಕ್ಕಿಳಿಸಲು ಅನರ್ಹ ಶಾಸಕರು ಯೋಚಿಸಬಹುದು. ಆದರೆ ಇದು ಸುಲಭವಲ್ಲ. ''ಮತದಾರರು ನಮ್ಮನ್ನು ಒಪ್ಪಿಕೊಂಡಂತೆ ಕುಟುಂಬ ಸದಸ್ಯರನ್ನು ಒಪ್ಪಿಕೊಳ್ಳುತ್ತಾರೆಂಬ ವಿಶ್ವಾಸವಿಲ್ಲ. ಸಾರ್ವಜನಿಕರಿಗೆ ನಮ್ಮ ಪತ್ನಿ, ಪುತ್ರ, ಪುತ್ರಿ, ಸೊಸೆ, ಅಳಿಯಂದಿರು ಚಿರಪರಿಚಿತರಲ್ಲ, ಅವರನ್ನು ಜನ ಒಪ್ಪಿಕೊಳ್ಳುತ್ತಾರೆಂಬ ಗ್ಯಾರಂಟಿಯೂ ಇಲ್ಲ,'' ಎಂಬುದು ಅನರ್ಹರ ಆತಂಕವಾಗಿದೆ. ಹೀಗಾಗಿ ನಾವೇ ಚುನಾವಣೆಗೆ ಸ್ಪರ್ಧಿಸಬೇಕೆಂದು ಪಣತೊಟ್ಟಿರುವ ಅನರ್ಹರು ಸೋಮವಾರ ಕೋರ್ಟ್‌ನಿಂದ ತಡೆಯಾಜ್ಞೆ ತರುವಲ್ಲಿಯಶಸ್ವಿಯಾಗುವರೇ ಎಂಬುದನ್ನು ಕಾದು ನೋಡಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ