ಆ್ಯಪ್ನಗರ

ಎಲ್ಲೆಡೆ ಹರಡಿದೆ ಚೈನ್‌ಲಿಂಕ್‌ ಜಾಲ..! ಹಣ ದುಪ್ಪಟ್ಟಾಗುವ ಆಸೆಗೆ ಬಲಿಯಾಗಿದ್ದಾರೆ ಸರ್ಕಾರಿ ನೌಕರರು..!

ನಾನಾ ಕಂಪನಿಗಳಿಂದ ಚೈನ್‌ ಲಿಂಕ್‌ ವ್ಯವಹಾರ ನಾನಾ ಆಮಿಷಗಳೊಂದಿಗೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನಡೆಯುತ್ತಿದ್ದು, ಇದಿಗೀ ಚೈನ್‌ಲಿಂಕ್ ವ್ಯವಹಾರದ ಕೂಪಕ್ಕೆ ಶಿಕ್ಷಕರೇ ಬಲಿಯಾಗಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ಶಿಕ್ಷಕರು ಹಣ ದುಪ್ಪಟ್ಟಾಗುವ ಆಸೆಯಿಂದ ಖಾಸಗಿ ಕಂಪನಿಗಳು ನಡೆಸುವ ಚೈನ್‌ಲಿಂಕ್‌ ವ್ಯವಹಾರಕ್ಕೆ ಸೇರಿದ್ದು, ಈಗ ಹಾಕಿದ ಹಣವನ್ನೂ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

Vijaya Karnataka Web 26 Nov 2020, 1:03 pm
ಬೆಂಗಳೂರು: ಚೈನ್‌ ಲಿಂಕ್‌ ವ್ಯವಹಾರವನ್ನು ಸಾಮಾನ್ಯವಾಗಿ ನಮ್ಮ ರಾಜ್ಯದಲ್ಲಂತೂ ಹಳ್ಳಿಹಳ್ಳಿಯಲ್ಲೂ ಕೇಳಿರುತ್ತಾರೆ. ಖಾಸಗಿ ಕಂಪನಿಗಳು ನಡೆಸುವ ಈ ಹಣದ ವ್ಯವಹಾರದಲ್ಲಿ ಬಡಜನರಿಗೆ ತಮ್ಮ ದುಡ್ಡನ್ನು ದುಪ್ಪಟ್ಟು ಮಾಡುವ ಆಮೀಷ ಒಡ್ಡಿ ನಂತರ ದುಡ್ಡು ಸಮೇತ ಪರಾರಿಯಾಗಿರೋ ಘಟನೆಗಳು ಹಲವೆಡೆ ನಡೆದಿದೆ.
Vijaya Karnataka Web money


ಇದೀಗ ಇಂತಹ ಜಾಲಗಳು ರಾಜ್ಯದ ವಿವಿಧೆಡೆ ಹಬ್ಬಿದೆ ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಅಚ್ಚರಿಯ ವಿಷಯ ಅಂದರೆ, ನಾನಾ ಆಮಿಷಗಳೊಂದಿಗೆ ನಡೆಯುವ ಈ ಚೈನ್‌ ಲಿಂಕ್‌ ವ್ಯವಹಾರಕ್ಕೆ ಪೊಲೀಸರು, ಶಿಕ್ಷಕರು ಮತ್ತು ಸರಕಾರಿ ನೌಕರರೇ ಈ ಲಾಭದ ಆಸೆಗೆ ಬಿದ್ದವರಲ್ಲಿ ಪ್ರಮುಖರಾಗಿದ್ದಾರೆ. ಮೂಲತಃ ಧಾರವಾಡ ಜಿಲ್ಲೆಯ ಮುಕ್ಕಲ ಗ್ರಾಮದ ಯಾದಗಿರಿ ಜಿಲ್ಲೆಯ ಸರಕಾರಿ ಶಾಲೆ ಶಿಕ್ಷಕರಾದ ದ್ಯಾಮಣ್ಣ ಮೇಟಿ ಹಾಗೂ ಲಕ್ಷ್ಮೇ ಮೇಟಿ ದಂಪತಿ ಸೇರಿದಂತೆ 20ಕ್ಕೂ ಹೆಚ್ಚು ಶಿಕ್ಷಕರು ವಂಚನೆಗೊಳಗಿದ್ದರು. ಒಂದೇ ವರ್ಷದಲ್ಲಿ ಹಣ ದುಪ್ಪಟ್ಟು ಮಾಡುವ ಆಸೆ ತೋರಿಸಿದ ಕಲಘಟಗಿ ಮೂಲದ ಸುರಭಿ ಟ್ರೇಡರ್ಸ್‌ಗೆ 1.5 ಕೋಟಿ ರೂ.ಗೂ ಅಧಿಕ ಹಣ ಹೂಡಿಕೆ ಮಾಡಿದ್ದರು. ಆರಂಭದಲ್ಲಿ ದ್ಯಾಮಣ್ಣ ಅವರಿಗೆ ಉತ್ತಮ ಲಾಭಾಂಶ ನೀಡಿ ನಂಬಿಸಿದ್ದರು. ಹೀಗಾಗಿ ಇವರಿಂದ ಪ್ರೇರಣೆಗೊಂಡ 20ಕ್ಕೂ ಹೆಚ್ಚು ಶಿಕ್ಷಕರು ಇವರ ಮಧ್ಯಸ್ಥಿಕೆಯಲ್ಲಿ ಹಣ ಹೂಡಿಕೆ ಮಾಡಿದ್ದರು.

ಬೀದಿಗೆ ಬಿದ್ದ ಶಿಕ್ಷಣ ಇಲಾಖೆ ಅಧಿಕಾರಿಗಳ ಆಂತರಿಕ ಕಲಹ; ಧಾರವಾಡದಲ್ಲಿಂದು ಬೃಹತ್ ಹೋರಾಟ

ಕೊನೆಗೆ ಸುರಭಿ ಟ್ರೇಡರ್ಸ್‌ನ ಫಾಹೀದ್‌ ನಚ್ಚಕನ್‌ ಹೂಡಿದ ಹಣ ಹಾಕಿಕೊಂಡು ಹೋಗಿದ್ದರಿಂದ ಮೇಟಿ ಶಿಕ್ಷಕ ದಂಪತಿ ತೀವ್ರ ಪಡಿಪಾಟಲು ಪಡಬೇಕಾಯಿತು. ಅಲ್ಲದೇ, ಕಿರಿಕಿರಿ ತಾಳಲಾರದೇ ಶಿಕ್ಷಕ ದ್ಯಾಮಣ್ಣ ಮೇಟಿ ಹೆಂಡತಿ ಮಕ್ಕಳನ್ನು ಬಿಟ್ಟು ಮನೆ ತೊರೆದು ಹೋಗಿ ಈಗ ವಾಪಸ್‌ ಬಂದಿದ್ದಾರೆ. ಈಗಲೂ ಸಹ ದ್ಯಾಮಣ್ಣ ಚೆಕ್‌ಬೌನ್ಸ್‌ ಕೇಸ್‌ ಎದುರಿಸುತ್ತಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಕಂಪನಿಯೊಂದರ 10 ಸಾವಿರ ರೂ. ಸಾಮಗ್ರಿ ಖರೀದಿಸುವ ವ್ಯವಹಾರ ನಡೆದಿತ್ತು. ಒಬ್ಬರು 10 ಸಾವಿರ ರೂ. ಪಾವತಿಸಿದ ಬಳಿಕ ಇಬ್ಬರಿಗೆ ಲಿಂಕ್‌ ಕೊಟ್ಟರೆ, ಮೊದಲು ಪಾವತಿಸಿದ ಹಣ ವಾಪಸ್‌ ಬರುತ್ತಿತ್ತು.

ಬೆಂಗಳೂರಿನಲ್ಲಿ ಪತ್ತೆಯಾಗಿರೋ 3 ಕೋಟಿ ರೂ. ಮೌಲ್ಯದ 6 ಕೆ.ಜಿ ಚಿನ್ನಕ್ಕೆ ವಾರಸುದಾರರೇ ಇಲ್ಲ..!

ಆರಂಭದಲ್ಲಿ10000 ರೂ.ಗಳ ವಸ್ತುಗಳು ಸಿಗುತ್ತದೆ ಎಂಬ ಕಾರಣಕ್ಕೆ ಜನರೆಲ್ಲ ಮುಗಿಬಿದ್ದರು. ಒಳ್ಳೆಯ ಸಂದರ್ಭ ನೋಡಿ ಅಂಗಡಿ ಮಾಲೀಕ ಬೀಗ ಹಾಕಿದ್ದಾನೆ! ಇದರಿಂದ ಕೊನೆಯ ಹಂತದಲ್ಲಿ ಹಣ ಕಟ್ಟಿದವರಿಗೆ ಮೋಸ ಆಗಿದೆ. ಕೆಲ ದಿನದಿಂದ ಹಣ ಬರುತ್ತಿಲ್ಲ. ರಾಯಚೂರು ಜಿಲ್ಲೆಯಲ್ಲಿ ನಿವೃತ್ತ ಶಿಕ್ಷಕರೊಬ್ಬರು ಈ ಚೈನ್‌ ಲಿಂಕ್‌ ಹಣದ ವಹಿವಾಟು ಪರಿಚಯಿಸಿದ್ದು ಮೊದಲಿಗೆ 12 ಸಾವಿರ ರೂ. ಹೂಡಬೇಕೆಂದು ಹೇಳಿದ್ದು ಅದಕ್ಕೆ ಅವರು ಭದ್ರತಾ ರೀತಿಯಲ್ಲಿ ಚೆಕ್‌ ನೀಡಿದ್ದಾರೆ. ಅನೇಕರು ಹಣ ಹೂಡಿದ್ದಾರೆ. ದಿನವೂ ಅವರಿಗೆ ಹಣ ಬಂದಿದೆ. ಎರಡನೇ ಕಂತಿನ ಹಣವಾಗಿ 35 ಸಾವಿರ ರೂ. ಪಾವತಿಸಲು ಇದೇ ನಿವೃತ್ತ ಶಿಕ್ಷಕರು ತಿಳಿಸಿದ್ದು, ಅದಕ್ಕೆ ತಾವು ಭದ್ರತೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಅದರಂತೆ ಅನೇಕರು ಹಣ ಹಾಕಿದ್ದಾರೆ. ಕಳೆದ ನಾಲ್ಕು ದಿನಗಳಿಂಗ ಹಣ ದಿನವೂ ಬರುವುದು ನಿಂತಿದೆ.

ದುಬಾರಿಯಾದ ಕರಿಬೇವು..! ಐದು ರೂಪಾಯಿಗೆ ಸಿಗ್ತಿದ್ದ ಒಗ್ಗರಣೆ ಸೊಪ್ಪಿನ ಈಗಿನ ಬೆಲೆ ಎಷ್ಟು ಗೊತ್ತಾ?

ಇತ್ತ ಕೊಡಗಿನ ಮೂಲದ ವ್ಯಕ್ತಿಯೊಬ್ಬರು ಈ ಚೈಲ್‌ ಲಿಂಕ್‌ ಹಣದ ವ್ಯವಹಾರದ ರೂವಾರಿಯೆಂದು ಇಲ್ಲಿನ ಶಿಕ್ಷಕರು ಹೇಳಿದ್ದು, ಈ ಬಗ್ಗೆ ಮಾಹಿತಿ ನೀಡಲೂ ಶಿಕ್ಷಕರು ಹಿಂದೇಟು ಹಾಕಿದ್ದಾರೆ. ದಾಖಲಾಗದ ದೂರು ಶಿವಮೊಗ್ಗದಲ್ಲೂ ಚೈನ್‌ಲಿಂಕ್‌ ವ್ಯವಹಾರ ಇತ್ತೀಚಿನವರೆಗೆ ಇತ್ತು. ಸರಕಾರಿ ನೌಕರರು, ಶಿಕ್ಷಕರು, ಜನ ಸಾಮಾನ್ಯರು ತುಂಬ ಹಣ ಕಳೆದುಕೊಂಡಿದ್ದಾರೆ. ಸಂಸ್ಥೆಗಳನ್ನು ನಂಬಿ ತಮ್ಮ ಸ್ನೇಹಿತರು, ಬಂಧು ಬಳಗದವರನ್ನು ಮನವೊಲಿಸಿ ಹಣ ಹಾಕಿಸಿದವರು ಬಳಿಕ ತಮ್ಮ ಕೈಲಿಂದಲೆ ಹಣ ಕೊಟ್ಟು ಬರಿಗೈಯಾದ ಉದಾಹರಣೆಗಳಿವೆ.

ಸ್ನೇಹಿತನ ಪತ್ನಿಯ ಜೊತೆ ಚೆಲ್ಲಾಟವಾಡಿದ ಕಿರಾತಕ ಆಕೆಯ ಗಂಡನನ್ನೇ ಮುಗಿಸಿ ಬಿಟ್ಟ..!

ಆದರೆ, ಹಣ ಕಳೆದುಕೊಂಡ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಚಿಕ್ಕಮಗಳೂರಿನಲ್ಲಿ ಚೈನ್‌ ಲಿಂಕ್‌ ಬ್ಯುಸಿನೆಸ್‌ನಲ್ಲಿ ಕೆಲವು ಪೊಲೀಸರು ಕೂಡ ಹಣ ಹಾಕಿ ಕಳೆದುಕೊಂಡಿದ್ದರು. ಮಹಿಳೆಯೊಬ್ಬರು ನಡೆಸುತ್ತಿದ್ದ ಆನ್‌ ಲೈನ್‌ ಚೈನ್‌ ಲಿಂಕ್‌ನಲ್ಲಿ ಕೆಲವು ಪೊಲೀಸರು ಹಣ ಹಾಕಿ ದಿಢೀರ್‌ ಹಣ ಗಳಿಸಲು ಪ್ರಯತ್ನಿಸಿದ್ದರು. ಆದರೆ, ಚೈನ್‌ ಲಿಂಕ್‌ ನಡೆಸುತ್ತಿದ್ದ ಮಹಿಳೆ ವಿರುದ್ಧ ಪ್ರಕರಣ ದಾಖಲಾಯಿತೇ ವಿನಾ ಹಣ ಹಾಕಿದವರ ವಿರುದ್ಧ ಯಾವುದೇ ಕ್ರಮ ಜರುಗಿಸಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ