ಆ್ಯಪ್ನಗರ

ರಾಜ್ಯದಲ್ಲಿ 6 ರಿಂದ 8 ದಿನ ತಡವಾಗಿ ಮುಂಗಾರು ಆಗಮನ, ಈ ಬಾರಿ ಮಳೆ ಕಡಿಮೆ

ಒಟ್ಟಾರೆ ಮಳೆಯ ದಿನಗಳು ಕಡಿಮೆ ಆಗಿವೆ. ಹೀಗಾಗಿ ರೈತರು ಪರ್ಯಾಯ ಬೆಳೆಗಳನ್ನು ಬೆಳೆಯಬೇಕೆಂದು ಆರ್.ಎಚ್.ಪಾಟೀಲ ಮಾಹಿತಿ ನೀಡಿದರು.

Vijaya Karnataka Web 21 May 2019, 2:03 pm
ಧಾರವಾಡ: ರಾಜ್ಯದಲ್ಲಿ 6 ರಿಂದ 8 ದಿನಗಳವರೆಗೆ ತಡವಾಗಿ ಮುಂಗಾರು ಮಳೆ ಬರಲಿದೆ. . ಆರಂಭದ ಮುಂಗಾರು ಮಳೆಗಳು ದುರ್ಬಲವಾಗಲಿದೆ. ರೈತರು ಮಳೆಯಾಗದೇ ಇದ್ದ ಪರಿಣಾಮ ಹೊಲದಲ್ಲಿ ಚೌಕು ಮಡಿಗಳನ್ನು ಮಾಡಿ ಮಣ್ಣಿನ ತೇವಾಂಶ ಹೆಚ್ಚಿಸಬೇಕು ಎಂದು ಹವಾಮಾನ ಇಲಾಖೆ ಮುಖ್ಯಸ್ಥ ಆರ್.ಎಚ್.ಪಾಟೀಲ ಸಲಹೆ ನೀಡಿದರು.
Vijaya Karnataka Web ಮುಂಗಾರು ಮಳೆ
ಮುಂಗಾರು ಮಳೆ


ಧಾರವಾಡದ ಕೃಷಿ ವಿವಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹವಾಮಾನ ಇಲಾಖೆ ಮುಖ್ಯಸ್ಥ ಆರ್.ಎಚ್.ಪಾಟೀಲ ಮಾಹಿತಿ ಹಂಚಿಕೊಂಡರು.

ಧಾರವಾಡ ಜಿಲ್ಲೆಯಲ್ಲಿ ಬಿಸಿಲು 40 ಡಿಗ್ರಿ ದಾಟಿದೆ. ಉತ್ತರ ಕರ್ನಾಟಕದಲ್ಲಿಯೂ ಬಿಸಿಲು ಹೆಚ್ಚಾಗಿದೆ. ಮಾರ್ಚ್‌ , ಏಪ್ರಿಲ್‌, ಮೇ ತಿಂಗಳ ಮುಂಗಾರು ಮಳೆ ಗಮನಿಸಿದಾಗ ದಕ್ಷಿಣ ಒಳನಾಡಿನಲ್ಲಿ 106.5 ಮಿಮೀ ವಾಡಿಕೆ ಇದ್ದರೆ, 80.3 ಮಿ.ಮೀ, ಉತ್ತರ ಒಳನಾಡು 59.7 ಮಿಮೀ ವಾಡಿಕೆ ಇದ್ದರೆ, 23.5 ಮಿಮೀ, ಮಲೆನಾಡು 108.2 ಮಿ.ಮೀ ವಾಡಿಕೆ ಮಳೆ ಇದ್ದರೆ, 51.4 ಕರಾವಳಿ ವಾಡಿಕೆ ಮಳೆ 118.5 ಮಿ.ಮೀ ಇದ್ದರೆ 51.4 ಕಡಿಮೆ ಮಳೆ ಆಗಿದೆ.

ಒಟ್ಟಾರೆ ಮಳೆಯ ದಿನಗಳು ಕಡಿಮೆ ಆಗಿವೆ. ಹೀಗಾಗಿ ರೈತರು ಪರ್ಯಾಯ ಬೆಳೆಗಳನ್ನು ಬೆಳೆಯಬೇಕೆಂದು ಆರ್.ಎಚ್.ಪಾಟೀಲ ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ