ಬೆಂಗಳೂರು: ವಿಪ್ರ ಬಾಂಧವರ ಶ್ರೇಯೋಭಿವೃದ್ಧಿಗಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಬಡ ಬ್ರಾಹ್ಮಣರಿಗೆ ಸೇವೆಯನ್ನು ನೀಡುವಂತಹ ಅನೇಕ ಯೋಜನೆಗಳನ್ನು ಈ ಅಡಿಯಲ್ಲಿ ಜಾರಿಗೆ ತರಲಾಗುವುದು. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡುವ ಕುರಿತು ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ನಿರ್ಧರಿಸಲಾಯಿತು.
ಬೆಂಗಳೂರಿನಲ್ಲಿ ಬುಧವಾರ ಕರ್ನಾಟಕ ಬ್ರಾಹ್ಮಣರ ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ಮಹಾಸಭೆ ನಡೆಯಿತು. ಪ್ರಾಧಿಕಾರದ ಅಧ್ಯಕ್ಷರಾದ ಸಚ್ಚಿದಾನಂದ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಮತ್ತು ಭಾನುಮತಿ, ಲಕ್ಷ್ಮಿ, ಶ್ರೀಧರ್ ಅವರು ಹಾಜರಿದ್ದರು.
ಒಟ್ಟು 16 ಸದಸ್ಯರು ನಡೆಸಿದ ಮಹಾ ಸಭೆ ಇದಾಗಿದೆ. ಈ ಹಿಂದೆ ಒಂದೆರಡು ಸಣ್ಣಪುಟ್ಟ ಸಭೆ ನಡೆಸಿದ್ದರೂ ಇದು ಅತ್ಯಂತ ಪ್ರಮುಖ ಸಭೆಯಾಗಿತ್ತು. ಈ ಸಂದರ್ಭದಲ್ಲಿ ರಶ್ಮಿ ಅವರು ಸಂಪೂರ್ಣ ಪರಿವಿಡಿ ಮಂಡಿಸಿದರು. ಬ್ರಾಹ್ಮಣರಿಗೆ ನೆರವಾಗುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸರಕಾರದ ಸೌಲಭ್ಯಗಳು, ಜಾತಿ ಪ್ರಮಾಣ ಪತ್ರಗಳು ಮತ್ತು ಕಷ್ಟದಲ್ಲಿರುವವರಿಗೆ ವಿದ್ಯೆ, ಶಾಲೆ, ವಸತಿ ನಿಲಯ ಒದಗಿಸುವ ಕುರಿತು ಚರ್ಚಿಸಲಾಯಿತು. ವೇದ ಪಾಠಶಾಲೆಗಳು, ಅಂತ್ಯಸಂಸ್ಕಾರಕ್ಕೆ ಸಹಾಯ, ಬಡವರಿಗೆ ಕಡಿಮೆ ವೆಚ್ಚದಲ್ಲಿ ವಿವಾಹ ಮಾಡಿಸುವುದು, ಸಂಸ್ಕೃತ ವೇದಾಧ್ಯಯನ ಶಿಬಿರ, ಆಗಮ ದೇವಸ್ಥಾನಗಳ ವಿಚಾರ ಸಭೆಯಲ್ಲಿ ಮಂಡಿಸಲಾಗಿದೆ.
ಸರಕಾರದಿಂದ ಕೆಲವು ಅನುದಾನಗಳನ್ನು ತೆಗೆದುಕೊಂಡು ಐಎಎಸ್ ಮತ್ತು ಕೆಎಎಸ್ ಓದುವವರಿಗೆ ಉಚಿತ ಶಿಕ್ಷಣಗಳನ್ನು, ತರಬೇತಿ ನೀಡುವ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈಗಾಗಲೇ ಮನವಿ ಮಾಡಿದ್ದೇವೆ. ಬಡ ಬ್ರಾಹ್ಮಣರು ಸೇರಿ ಎಲ್ಲರಿಗೂ ಸಹಾಯ ಮಾಡೋಣ ಅಂತ ಆಶ್ವಾಸನೆಯನ್ನು ಕೊಟ್ಟಿದ್ದಾರೆ. ಅನುದಾನವನ್ನು ಬಿಡುಗಡೆ ಮಾಡುವು ಭರವಸೆ ನೀಡಿದ್ದಾರೆ ಎಂದು ಅಧ್ಯಕ್ಷರಾದ ಸಚ್ಚಿದಾನಂದಮೂರ್ತಿ ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ಬುಧವಾರ ಕರ್ನಾಟಕ ಬ್ರಾಹ್ಮಣರ ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ಮಹಾಸಭೆ ನಡೆಯಿತು. ಪ್ರಾಧಿಕಾರದ ಅಧ್ಯಕ್ಷರಾದ ಸಚ್ಚಿದಾನಂದ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಮತ್ತು ಭಾನುಮತಿ, ಲಕ್ಷ್ಮಿ, ಶ್ರೀಧರ್ ಅವರು ಹಾಜರಿದ್ದರು.
ಒಟ್ಟು 16 ಸದಸ್ಯರು ನಡೆಸಿದ ಮಹಾ ಸಭೆ ಇದಾಗಿದೆ. ಈ ಹಿಂದೆ ಒಂದೆರಡು ಸಣ್ಣಪುಟ್ಟ ಸಭೆ ನಡೆಸಿದ್ದರೂ ಇದು ಅತ್ಯಂತ ಪ್ರಮುಖ ಸಭೆಯಾಗಿತ್ತು. ಈ ಸಂದರ್ಭದಲ್ಲಿ ರಶ್ಮಿ ಅವರು ಸಂಪೂರ್ಣ ಪರಿವಿಡಿ ಮಂಡಿಸಿದರು. ಬ್ರಾಹ್ಮಣರಿಗೆ ನೆರವಾಗುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸರಕಾರದ ಸೌಲಭ್ಯಗಳು, ಜಾತಿ ಪ್ರಮಾಣ ಪತ್ರಗಳು ಮತ್ತು ಕಷ್ಟದಲ್ಲಿರುವವರಿಗೆ ವಿದ್ಯೆ, ಶಾಲೆ, ವಸತಿ ನಿಲಯ ಒದಗಿಸುವ ಕುರಿತು ಚರ್ಚಿಸಲಾಯಿತು. ವೇದ ಪಾಠಶಾಲೆಗಳು, ಅಂತ್ಯಸಂಸ್ಕಾರಕ್ಕೆ ಸಹಾಯ, ಬಡವರಿಗೆ ಕಡಿಮೆ ವೆಚ್ಚದಲ್ಲಿ ವಿವಾಹ ಮಾಡಿಸುವುದು, ಸಂಸ್ಕೃತ ವೇದಾಧ್ಯಯನ ಶಿಬಿರ, ಆಗಮ ದೇವಸ್ಥಾನಗಳ ವಿಚಾರ ಸಭೆಯಲ್ಲಿ ಮಂಡಿಸಲಾಗಿದೆ.
ಸರಕಾರದಿಂದ ಕೆಲವು ಅನುದಾನಗಳನ್ನು ತೆಗೆದುಕೊಂಡು ಐಎಎಸ್ ಮತ್ತು ಕೆಎಎಸ್ ಓದುವವರಿಗೆ ಉಚಿತ ಶಿಕ್ಷಣಗಳನ್ನು, ತರಬೇತಿ ನೀಡುವ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈಗಾಗಲೇ ಮನವಿ ಮಾಡಿದ್ದೇವೆ. ಬಡ ಬ್ರಾಹ್ಮಣರು ಸೇರಿ ಎಲ್ಲರಿಗೂ ಸಹಾಯ ಮಾಡೋಣ ಅಂತ ಆಶ್ವಾಸನೆಯನ್ನು ಕೊಟ್ಟಿದ್ದಾರೆ. ಅನುದಾನವನ್ನು ಬಿಡುಗಡೆ ಮಾಡುವು ಭರವಸೆ ನೀಡಿದ್ದಾರೆ ಎಂದು ಅಧ್ಯಕ್ಷರಾದ ಸಚ್ಚಿದಾನಂದಮೂರ್ತಿ ಮಾಹಿತಿ ನೀಡಿದರು.