ಆ್ಯಪ್ನಗರ

ಮಕ್ಕಳನ್ನು ಬಚಾವ್‌ ಮಾಡಿ ಸಿಡಿಲಿಗೆ ಬಲಿಯಾದ ತಾಯಿ

ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಸಿಡಿಲಿನ ಹೊಡೆತಕ್ಕೆ ಬಲಿಯಾಗಿದ್ದಾರೆ ಅವರ ಜತೆಗೇ ಇದ್ದ ಪುಟ್ಟ ಮಕ್ಕಳಿಬ್ಬರು ಅದೃಷ್ಟವಶಾತ್‌ ಸಿಡಿಲಿಗೆ ಸಿಲುಕದೆ ಬಚಾವಾಗಿದ್ದಾರೆ

Vijaya Karnataka Web 31 May 2020, 12:04 am
ಬಾದಾಮಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಸಿಡಿಲಿನ ಹೊಡೆತಕ್ಕೆ ಬಲಿಯಾಗಿದ್ದಾರೆ. ಅವರ ಜತೆಗೇ ಇದ್ದ ಪುಟ್ಟ ಮಕ್ಕಳಿಬ್ಬರು ಅದೃಷ್ಟವಶಾತ್‌ ಸಿಡಿಲಿಗೆ ಸಿಲುಕದೆ ಬಚಾವಾಗಿದ್ದಾರೆ.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಬಾದಾಮಿ ತಾಲೂಕಿನ ಹೊಸೂರ ಗ್ರಾಮದ ಶಾಂತವ್ವ ಬೋವಿ (25) ಸಿಡಿಲಿಗೆ ಬಲಿಯಾದ ಮಹಿಳೆ. ಹೊಲದಲ್ಲಿಕೆಲಸ ಮಾಡುತ್ತಿದ್ದ ವೇಳೆ ಒಮ್ಮಿಂದೊಮ್ಮೆ ಗುಡುಗು ಸಿಡಿಲು ಅಬ್ಬರಿಸಲು ಆರಂಭವಾಯಿತು.

ಇದರಿಂದ ಅಪಾಯದ ಸುಳಿವು ಪಡೆದ ಶಾಂತವ್ವ ತಕ್ಷಣ ತನ್ನ ಜತೆಗಿದ್ದ 1 ವರ್ಷದ ಶ್ರಾವಣಿ ಮತ್ತು 4 ವರ್ಷದ ಸೃಷ್ಟಿಯನ್ನು ಬೇಗನೆ ಹೊಲದಿಂದ ಹೊರಡೋಣ ಎಂದು ಹೊರಡಿಸುತ್ತಾ ದೂರ ತಳ್ಳಿದರು ಎನ್ನಲಾಗಿದೆ.

ಅಷ್ಟು ಹೊತ್ತಿಗೆ ಸಿಡಿಲು ನೇರವಾಗಿ ಶಾಂತವ್ವಳಿಗೆ ಬಡಿದು ಮೃತಪಟ್ಟಿದ್ದಾರೆ. ಮಕ್ಕಳ ಕಿರುಚಾಟ ಕೇಳಿ ಅಕ್ಕಪಕ್ಕದಲ್ಲಿದ್ದವರು ಬಂದು ಮಕ್ಕಳನ್ನು ರಕ್ಷಿಸಿದರು. ಬಾದಾಮಿ ಪೊಲೀಸ್‌ ಠಾಣೆಯ ಪಿಎಸ್‌ಐ ಪ್ರಕಾಶ ಬಣಕಾರ ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ