ಆ್ಯಪ್ನಗರ

ಎಪಿಎಂಸಿ ಕಾಯ್ದೆ ವಿರುದ್ಧ ಲೋಕಸಭೆಯಲ್ಲಿ ಧ್ವನಿಯೆತ್ತಿದ ಸಂಸದ ಪ್ರಜ್ವಲ್ ರೇವಣ್ಣ

ಸರ್ಕಾರ WTO, ಕೆಲ ಮುಂದುವರೆದ ದೇಶ, ಬಹು ರಾಷ್ಟ್ರೀಯ ಕಂಪನಿಗಳು ಹಾಗೂ ದೊಡ್ಡ ಖಾಸಗಿ ಕಂಪನಿಗಳ ಒತ್ತಡಕ್ಕೆ ಮಣಿದು ಈ ರೈತ ವಿರೋದಿ ಕಾಯ್ದೆ ಜಾರಿಗೆ ತರಲು ಹೊರಟಿದೆಯಾ ಎಂಬ ಪ್ರಬಲ ಸಂಶಯ ಕೂಡ ಮೂಡಿದೆ ಎಂದು ಪ್ರಜ್ವಲ್ ರೇವಣ್ಣ ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 18 Sep 2020, 5:06 pm
ಹೊಸದಿಲ್ಲಿ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಎಪಿಎಂಸಿ ಕಾಯ್ದೆಗೆ ಸಂಸದ ಪ್ರಜ್ವಲ್ ರೇವಣ್ಣ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಲೋಕಸಭೆಯಲ್ಲಿ ಮಾತನಾಡಿರುವ ಅವರು, ಎಪಿಎಂಸಿ ಕಾಯ್ದೆ ವಿಷಯ ಪ್ರಸ್ತಾಪಿಸಿ ತಿದ್ದುಪಡಿ ಜಾರಿಗೆ ವಿರೋದ ವ್ಯಕ್ತಪಡಿಸಿ ಮಾತನಾಡಿದ್ದಾರೆ.
Vijaya Karnataka Web Prajwal Revanna


ಅಲ್ಲದೇ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಹೇಳಿರುವ ಪ್ರಜ್ವಲ್ ರೇವಣ್ಣ, ಕೆಲ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿ ಸ್ಪಷ್ಟನೆ ಕೋರಿದ್ದೇನೆ, ಸರ್ಕಾರ ಈ ರೈತ ವಿರೋಧಿ ಕಾಯ್ದೆ ಜಾರಿಗೆ ತರುವುದನ್ನು ಕೈಬಿಡಬೇಕೆಂದು ಆಗ್ರಹಿಸಿದ್ದೇನೆ ಎಂದು ತಿಳಿಸಿದ್ದಾರೆ ಸರಣಿ ಟ್ವೀಟ್ ಮಾಡಿರುವ ಅವರು, ಕಾಯ್ದೆ ತಿದ್ದುಪಡಿಯಾಗಿ ಜಾರಿಯಾದರೆ ರೈತರು ಬೆಳೆದ ಫಸಲನ್ನು ದೇಶಾದ್ಯಂತ ಮಾರಾಟ ಮಾಡಬಹುದು ಎಂದು ಹೇಳುತ್ತಿದ್ದೀರಿ, ಆದರೆ ಈಗಾಗಲೇ ರೈತ ತಾನು ಬೆಳೆದ ಬೆಲೆಯನ್ನು ಸ್ವತಂತ್ರವಾಗಿ ಬೇರೆ ಕಡೆ ಕೂಡ ಮಾರಾಟ ಮಾಡುತ್ತಿದ್ದಾರೆ, ಉದಾಹರಣೆಗೆ ಹಾಸನದಲ್ಲಿ ಬೆಳೆದ ಆಲೂಗೆಡ್ಡೆ ಬೇರೆ ರಾಜ್ಯಗಳಲ್ಲೂ ಮಾರಾಟವಾಗುತ್ತಿದೆ, ಇದರಲ್ಲಿ ಹೊಸತೇನು ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೃಷಿ ವಿಧೇಯಕ ವಿರೋಧಿಸಿ ಹರ್ಸಿಮ್ರತ್ ಬಾದಲ್ ರಾಜೀನಾಮೆ ನಿರ್ಧಾರ ಬೆಂಬಲಿಸಿದ ಕಾಂಗ್ರೆಸ್!

ಜೊತೆಗೆ ಕಾಯ್ದೆಗೆ ತಿದ್ದುಪಡಿ ತಂದು ಜಾರಿಗೆ ತರುವ ಮೂಲಕ ಮದ್ಯಮ ವರ್ಗದ ರೈತರನ್ನ ಆದಾಯ ತೆರಿಗೆ ಅಡಿಯಲ್ಲಿ ತರುವ ಬಗ್ಗೆ ಸರ್ಕಾರವೇನಾದರೂ ಯೋಚಿಸುತ್ತಿದೆಯಾ ಎಂಬ ಸಂಶಯ ಮೂಡುತ್ತಿದೆ ಎಂದಿರುವ ಪ್ರಜ್ವಲ್ ರೇವಣ್ಣ, ಈ ಕಾಯ್ದೆ ತಿದ್ದುಪಡಿ ನಂತರ ಹಂತ ಹಂತವಾಗಿ ದೇಶಾದ್ಯಂತ ಎಪಿಎಂಸಿ ಮಾರುಕಟ್ಟೆಗಳನ್ನು ಮುಚ್ಚಲಾಗುತ್ತದೆ ಎಂಬ ಸುದ್ದಿ ತೀವ್ರವಾಗಿ ಹರಿದಾಡುತ್ತಿದೆ, ಹಾಗಾದಲ್ಲಿ ಮಳೆ ಹವಾಮಾನ ಏರುಪೇರಿನಿಂದ ಬೆಳೆ ಹಾನಿಯಿಂದ ಪೆಟ್ಟು ತಿಂದ ಸಣ್ಣ ಹಾಗೂ ಅತೀ ಸಣ್ಣ ವ್ಯವಸಾಯಗಾರರಿಗೆ ತಾವು ಬೆಳೆದ ಫಸಲನ್ನು ದೂರದ ಊರುಗಳಿಗೆ ಸಾಗಿಸಲಾಗದೆ ಪರದಾಡಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ನಿಮ್ಮ ನಾಯಕರ ಎದೆಯಳತೆಯ ಮುಂದೆ ಮಣಿಯದೆ ಧೈರ್ಯದಿಂದ ರಾಜ್ಯದ ಪಾಲು ಕೇಳಿ’; ಸಿಎಂಗೆ

ಇನ್ನು ಸರ್ಕಾರ WTO, ಕೆಲ ಮುಂದುವರೆದ ದೇಶ, ಬಹು ರಾಷ್ಟ್ರೀಯ ಕಂಪನಿಗಳು ಹಾಗೂ ದೊಡ್ಡ ಖಾಸಗಿ ಕಂಪನಿಗಳ ಒತ್ತಡಕ್ಕೆ ಮಣಿದು ಈ ರೈತ ವಿರೋದಿ ಕಾಯ್ದೆ ಜಾರಿಗೆ ತರಲು ಹೊರಟಿದೆಯಾ ಎಂಬ ಪ್ರಬಲ ಸಂಶಯ ಕೂಡ ಮೂಡಿದೆ ಎಂದಿರುವ ಪ್ರಜ್ವಲ್ ರೇವಣ್ಣ, ಜೂನ್ 3 ರಂದು ಸಚಿವ ಸಂಪುಟದಲ್ಲಿ ಅಂಗೀಕರಿಸಲಾದ ಈ ಕಾಯ್ದೆ ಕೃಷಿ ಕ್ಷೇತ್ರದಲ್ಲಿ ಐತಿಹಾಸಿಕ ನಿರ್ಣಯವೆಂದು ಸರ್ಕಾರ ಬಣ್ಣಿಸಿತು, ಆದರೆ ವಾಸ್ತವವಾಗಿ ಈ ಕಾಯ್ದೆ ರೈತ ವಿರೋಧಿಯಾಗಿದ್ದು ಕೃಷಿ ಕ್ಷೇತ್ರಕ್ಕೆ ಮಾರಕವಾಗಲಿದೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ