ಆ್ಯಪ್ನಗರ

ಮಿಸ್ಟರ್‌ ಮೋದಿ, ಮುಂದಿನ ಚುನಾವಣೆವರೆಗೆ ಕಾದುನೋಡಿ: ಸಿದ್ದರಾಮಯ್ಯ ಖಡಕ್‌ ಎಚ್ಚರಿಕೆ!

ರಾಜ್ಯದ ಬಿಜೆಪಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಸರ್ಕಾರಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇದೆಯೇ? ಎಂದು ಪ್ರಶ್ನಿಸಿದ್ದಾರೆ.

Vijaya Karnataka Web 16 Sep 2019, 12:27 pm

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರವನ್ನು ತೀವ್ರವಾಗಿ ಟೀಕಿಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಮೋದಿ ಸರ್ಕಾರಕ್ಕೂ ಪರೋಕ್ಷ ಎಚ್ಚರಿಕೆ ನೀಡಿದ್ದು, ನೆರೆ ಸಂತ್ರಸ್ತರಿಗೆ ಪರಿಹಾರ ನೀಡದಿದ್ದರೆ, ಮುಂದಿನ ಚುನಾವಣೆಯಲ್ಲಿ ನಿಮಗೆ ಉಳಿಗಾಲವಿಲ್ಲ ಎಂದಿದ್ದಾರೆ. ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇದೆಯೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
Vijaya Karnataka Web siddaramaih


ನರೇಂದ್ರ ಮೋದಿ ಅವರಿಗೆ ಚುನಾವಣೆ ಸಮಯದಲ್ಲಿ, ದಿನದಲ್ಲಿ ಮೂರು ಪ್ರದೇಶಗಳಿಗೆ ಹೋಗಲು ಸಾಧ್ಯವಿದೆ. ಆದರೆ ಈ 45 ದಿನಗಳಲ್ಲಿ ನೆರೆಪೀಡಿತ ಒಂದು ಪ್ರದೇಶಕ್ಕೂ ಭೇಟಿ ನೀಡಲಾಗಿಲ್ಲ. ಮಿಸ್ಟರ್‌ ಮೋದಿ, ಮುಂದಿನ ಚುನಾವಣೆವರೆಗೂ ಕಾದುನೋಡಿ, ಇದೇ ರೀತಿ ಮುಂದುವರಿದರೆ ನಿಮ್ಮ ಜುಮ್ಲಾ ಮೆರೆವಣಿಗೆಗೆ ಯಾರೊಬ್ಬರೂ ಬರುವುದಿಲ್ಲ ಎಂದು ಟ್ವೀಟ್‌ ಮೂಲಕ ಅಣಕಿಸಿದ್ದಾರೆ.



ಮಂಡ್ಯ ಮಣ್ಣಿನ ಸ್ವಾಭಿಮಾನ-ಗಡಸುತನ ಯಡಿಯೂರಪ್ಪನವರಲ್ಲಿ ಇಲ್ಲ: ಸಿದ್ದರಾಮಯ್ಯ

ನೆರೆಸಂತ್ರಸ್ತರಿಗೆ ಪರಿಹಾರ ದೊರಕುವವರೆಗೂ ನಾನು ಮತ್ತಷ್ಟು ಗುಂಡುಗಳನ್ನು ಹಾರಿಸುತ್ತಲೇ ಇರುತ್ತೇನೆ. ಸಂತ್ರಸ್ತರು ಆರೋಗ್ಯ ಕಳೆದುಕೊಂಡಿದ್ದಾರೆ, ಮನೆಗಳು ನಾಶವಾಗಿವೆ, ಆಹಾರ ಇಲ್ಲದಂತಾಗಿದೆ, ಆದರೆ ಈಗಿನ ದುರಾಡಳಿತ ಇದೆಲ್ಲವನ್ನು ನಿರ್ಲಕ್ಷಿಸಿದೆ ಎಂದಿದ್ದಾರೆ.


ಇದೊಳ್ಳೆ ಆಶ್ಚರ್ಯ! ನಾನು, ನೆರೆ ಸಂತ್ರಸ್ತರಿಗೆ ಅನುದಾನ ಬಿಡುಗಡೆ ಮಾಡದ ಕೇಂದ್ರ ಸರ್ಕಾರವನ್ನು ಟೀಕಿಸಿದರೆ, ರಾಜ್ಯದ ಇಜೆಪಿ ನಾಯಕರು ನನ್ನ ಮೇಲೆ ಎಗರಿ ಬೀಳ್ತಿದ್ದಾರೆ. ಅವರೇನು ಮಾನವೀಯತೆಯನ್ನೇ ಕಳೆದುಕೊಂಡಿದ್ದಾರಾ? ಕೇಂದ್ರ ಸರ್ಕಾರದ ಮೇಲೆ ಯಾಕಿಷ್ಟು ಮೃದು ಧೋರಣೆ ತಾಳಿದ್ದಾರೆ? 45 ದಿನ ಕಳೆದರೂ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದಾರೆ.



ಬಿಜೆಪಿಒ ನಾಯಕರು ಪುಕ್ಕಲರು ಎಂದು ಭಾನುವಾರ ಟ್ವೀಟ್‌ ಮೂಲಕ ಬಿಜೆಪಿ ನಾಯಕರ ಕಾಲೆಳೆದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ