ಆ್ಯಪ್ನಗರ

ಬಿಜೆಪಿ ಆಫರ್‌ಗಾಗಿ ಕಾಯುತ್ತಿದ್ದೇನೆ ಎಂದ ಪಕ್ಷೇತರ ಶಾಸಕ ನಾಗೇಶ್

ಬಿಜೆಪಿಯಿಂದ ಆಹ್ವಾನ ಬಂದು ಸೂಕ್ತ ಸ್ಥಾನಮಾನ ದೊರೆತರೆ, ಆ ಪಕ್ಷವನ್ನು ಬೆಂಬಲಿಸಲು ತುದಿಗಾಲ ಮೇಲೆ ನಿಂತಿದ್ದೇನೆ ಎಂದು ಮುಳಬಾಗಲು ಪಕ್ಷೇತರ ಶಾಸಕ ಎಚ್‌.ನಾಗೇಶ್‌ ಹೇಳಿದ್ದಾರೆ.

Vijaya Karnataka 18 Sep 2018, 8:02 am
ಕೋಲಾರ: ಬಿಜೆಪಿಯಿಂದ ಆಹ್ವಾನ ಬಂದು ಸೂಕ್ತ ಸ್ಥಾನಮಾನ ದೊರೆತರೆ, ಆ ಪಕ್ಷವನ್ನು ಬೆಂಬಲಿಸಲು ತುದಿಗಾಲ ಮೇಲೆ ನಿಂತಿದ್ದೇನೆ ಎಂದು ಮುಳಬಾಗಲು ಪಕ್ಷೇತರ ಶಾಸಕ ಎಚ್‌.ನಾಗೇಶ್‌ ಹೇಳಿದ್ದಾರೆ.
Vijaya Karnataka Web KLR-MULABAGILU CONGRESS BENBALITA  CANDIDATE NAGESH


ಆಪರೇಷನ್‌ ಕಮಲ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ''ಇಂತಹ ಮಾತು ಕೇಳಿಕೇಳಿ ಜನರಿಗೂ ಬೇಸರವಾಗಿದೆ. ಬೇಗನೇ ಏನಾದರೊಂದು ಇತ್ಯರ್ಥವಾಗಬೇಕು. ನನ್ನ ಮಟ್ಟಿಗೆ ಹೇಳಬೇಕೆಂದರೆ ಬಿಜೆಪಿಯವರು ಇದುವರೆಗೂ ನನ್ನನ್ನು ಸಂಪರ್ಕಿಸಿಲ್ಲ, ಆದರೆ ಅವರು ಯಾವ ಭರವಸೆ ನೀಡುತ್ತಾರೆ ಎಂಬ ಕುತೂಹಲದಿಂದ ಕಾಯುತ್ತಿದ್ದೇನೆ,'' ಎಂದು ಹೇಳಿದರು.

ಕಾಂಗ್ರೆಸ್‌ನಿಂದ ಅನ್ಯಾಯ:

''ಸರಕಾರ ಆರಂಭದಲ್ಲಿ ನೀಡಿದ ಭರವಸೆ ಈಡೇರಿಸಿಲ್ಲ. ನನ್ನನ್ನು ಕ್ಯಾರೇ ಎನ್ನುತ್ತಿಲ್ಲ. ಇವರ ಸಹವಾಸವೇ ಬೇಡ, ಚುನಾವಣೆ ಫಲಿತಾಂಶ ಹೊರಬಿದ್ದ ಕೂಡಲೆ ಸಚಿವ ಡಿ.ಕೆ.ಶಿವಕುಮಾರ್‌ ಅವರು ನನ್ನನ್ನು ಕರೆದೊಯ್ದರು. ನನ್ನನ್ನು ಕರೆದುಕೊಂಡು ಹೋದವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ,''ಎಂದು ದೂರಿದರು.

ಬಿಜೆಪಿಯಿಂದ ಆಫರ್‌ ಬಂದರೆ ಓಕೆ:

''ಬಿಜೆಪಿಯಿಂದ ಸಚಿವ ಸ್ಥಾನದ ಆಫರ್‌ ಬಂದರೆ ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಅವರನ್ನು ಮೊದಲು ಸಂಪರ್ಕ ಮಾಡುತ್ತೇನೆ. ಸಭೆ ನಡೆಸಿ, ಕ್ಷೇತ್ರದ ಜನರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ,'' ಎಂದು ಈ ಕುರಿತ ಪ್ರಶ್ನೆಗೆ ಉತ್ತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ