ಆ್ಯಪ್ನಗರ

ಡಿಕೆಶಿ-ಡಿಕೆಸು ಜೋಡಿಯ ನಡೆಯದ ಆಟ; ಸಹೋದರರ ಸವಾಲ್‌ ಮೆಟ್ಟಿದ ಮುನಿರತ್ನ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಆರ್‌.ಆರ್‌.ನಗರದ ಶೇ.40 ರಷ್ಟು ಪ್ರದೇಶ ಡಿ.ಕೆ.ಸುರೇಶ್‌ ಮತಕ್ಷೇತ್ರ ವ್ಯಾಪ್ತಿಯಲ್ಲಿದೆ. ಹೀಗಾಗಿ ಸಂಸದರಿಗೆ ಈ ಚುನಾವಣೆ ಅತ್ಯಂತ ಪ್ರತಿಷ್ಠೆಯಾಗಿತ್ತು.

Vijaya Karnataka Web 10 Nov 2020, 9:11 pm
ಬೆಂಗಳೂರು: ಆರ್‌ಆರ್‌ ನಗರ ಸೋಲು ಸಹೋದರರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಸಂಸದ ಡಿ.ಕೆ.ಸುರೇಶ್‌ ಅವರಿಗೆ ತೀವ್ರ ಮುಖಭಂಗ ತಂದಿದೆ. ವಿಶೇಷವಾಗಿ 'ಡಿಕೆಶಿ'ಗೆ ಪ್ರಥಮ ಚುಂಬನಂ ದಂತ ಭಗ್ನಂ ಎಂಬಂತಾಗಿದೆ.
Vijaya Karnataka Web ಡಿಕೆ ಸಹೋದರರು
ಡಿಕೆ ಸಹೋದರರು


ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಕುಸುಮಾ ಅವರಾಗಿದ್ದರೂ 'ನಾವೇ ಆಭ್ಯರ್ಥಿಗಳು' ಎಂದು ಸಹೋದರರಿಬ್ಬರು ಬಹಿರಂಗವಾಗಿಯೇ ಹೇಳಿದ್ದರು. ಪಕ್ಷ ಹಾಗೂ ಪಕ್ಷದ ಅಭ್ಯರ್ಥಿಗಿಂತಲೂ ಹೆಚ್ಚಾಗಿ ನಮ್ಮನ್ನು ನೋಡಿ ಮತ ಹಾಕಬೇಕೆಂಬ ರೀತಿಯಲ್ಲಿ'ಡಿಕೆಶಿ-ಡಿಕೆಸು' ಬಿಂಬಿಸಿಕೊಂಡಿದ್ದರು. ಹೀಗಾಗಿ ಆರ್‌.ಆರ್‌.ನಗರದಲ್ಲಿ ಸೋತಿರುವುದು ಕಾಂಗ್ರೆಸ್‌ ಪಕ್ಷವಲ್ಲ, ಡಿ.ಕೆ. ಸಹೋದರರು.

ತಾವೇ ಬೆಳೆಸಿ ಕೊಂಡಾಡಿದ್ದ ಶಿಷ್ಯನ ವಿರುದ್ಧ ಸಹೋದರರು ಎಲ್ಲಾಬ ಗೆಯ 'ಅಸ್ತ್ರ' ಗಳನ್ನು ಪ್ರಯೋಗಿಸಿದರೂ ಮುನಿರತ್ನ ಗೆಲುವಿನ ಓಟ ತಡೆಯಲಾಗಲಿಲ್ಲ. ಮುನಿರತ್ನ ವಿರುದ್ಧ ವೈಯಕ್ತಿಕ ನಿಂದನೆ, ಆರೋಪಗಳ ಸುರಿಮಳೆಗರೆದರು. ಅದಕ್ಕೆ ಪ್ರತಿಕ್ರಿಯೆಯಾಗಿ ಅಷ್ಟೇ ತೀಕ್ಷ್ಣವಾಗಿ ಮುನಿರತ್ನ ಅಭಿವೃದ್ಧಿ ಮಂತ್ರ ಜಪಿಸುತ್ತಾ ಮತದಾರರ ಮನಗೆಲ್ಲುವಲ್ಲಿ ಯಶಸ್ವಿಯಾದರು. ಜತೆಗೆ ಸಹೋದರರು ಒಕ್ಕಲಿಗ ಜಾತಿಯ ಕಾರ್ಡ್‌ ಸಹ ಮುಂದೆ ಬಿಟ್ಟರು. ಇದಕ್ಕೂ ಸಹ ಬಗ್ಗದ-ಜಗ್ಗದ ಮುನಿರತ್ನ 'ನಾನು ಎಲ್ಲಾ ಜಾತಿ, ಧರ್ಮ, ಜನಾಂಗಗಳ ಪ್ರತಿನಿಧಿ, ಒಕ್ಕಲಿಗರು ಸೇರಿದಂತೆ ಎಲ್ಲರೂ ಮತ ಹಾಕಿದ್ದರಿಂದಲೇ ನಾನು ಶಾಸಕನಾಗಿದ್ದೇನೆ' ಎಂದು ತಿರುಗೇಟು ನೀಡಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಆರ್‌.ಆರ್‌.ನಗರದ ಶೇ.40 ರಷ್ಟು ಪ್ರದೇಶ ಡಿ.ಕೆ.ಸುರೇಶ್‌ ಮತಕ್ಷೇತ್ರ ವ್ಯಾಪ್ತಿಯಲ್ಲಿದೆ. ಹೀಗಾಗಿ ಸಂಸದರಿಗೆ ಈ ಚುನಾವಣೆ ಅತ್ಯಂತ ಪ್ರತಿಷ್ಠೆಯಾಗಿತ್ತು. ಕಾಂಗ್ರೆಸ್‌ ಕಾರ್ಯಕರ್ತರ ಪಡೆ ಹಾಗೂ ಸಹೋದರರು ಎಲ್ಲಾ ವಿದ್ಯೆಗಳನ್ನು ಪ್ರಯೋಗಿಸಿದರೂ ಮುನಿರತ್ನ ಮುಂದೆ ಯಾವುದೂ ನಡೆಯಲಿಲ್ಲ, ಅಂತಿಮವಾಗಿ ಮುನಿರತ್ನ ಗೆಲುವಿನ ನಗೆ ಬೀರುವ ಮೂಲಕ ಕನಕಪುರ ಸಹೋದರರು ಹಿನ್ನಡೆ ಅನುಭವಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ