ಆ್ಯಪ್ನಗರ

ಸಂಗೀತ, ನೃತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 2018-19ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ. ಅಕಾಡೆಮಿ ಅಧ್ಯಕ್ಷ ಫಯಾಜ್‌ ಖಾನ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ.

Vijaya Karnataka 6 Oct 2018, 8:02 am
ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 2018-19ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ. ಅಕಾಡೆಮಿ ಅಧ್ಯಕ್ಷ ಫಯಾಜ್‌ ಖಾನ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ.
Vijaya Karnataka Web 1


''ಕರ್ನಾಟಕ ಕಲಾಶ್ರೀ ಗೌರವ ಪ್ರಶಸ್ತಿಗೆ ಹಾವೇರಿ ಜಿಲ್ಲೆ ಹಿರೇಕೆರೂರಿನ ಫಕೀರಪ್ಪ ತಾಂದಳೆ (ಹಿಂದೂಸ್ತಾನಿ ಸಂಗೀತ ) ಮತ್ತು ಕೊಪ್ಪಳದ ಸದಾಶಿವ ಪಾಟೀಲ್‌ (ಸುಗಮ ಸಂಗೀತ ) ಅವರನ್ನು ಆಯ್ಕೆ ಮಾಡಲಾಗಿದೆ. ಇದರ ಜೊತೆಗೆ ಕರ್ನಾಟಕ ಕಲಾಶ್ರೀ ವಾರ್ಷಿಕ ಪ್ರಶಸ್ತಿಗೆ 14 ಮಂದಿ ಕಲಾವಿದರು ಹಾಗೂ ಕಲಾ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಇದೇ ತಿಂಗಳ 30 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಗೌರವ ಪ್ರಶಸ್ತಿ ಪುರಸ್ಕೃತರಿಗೆ ತಲಾ 50 ಸಾವಿರ ನಗದು ಹಾಗೂ ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ತಲಾ 25 ಸಾವಿರ ರೂ. ನೀಡಿ ಗೌರವಿಸಲಾಗುವುದು,'' ಎಂದು ಅಕಾಡೆಮಿ ರಿಜಿಸ್ಟ್ರಾರ್‌ ಅಶೋಕ್‌ ಎನ್‌.ಚಲವಾದಿ ಪ್ರಕಟಣೆ ತಿಳಿಸಿದ್ದಾರೆ.

ಕರ್ನಾಟಕ ಸಂಗೀತ : ಡಾ.ಬಿ.ಎನ್‌.ಜಯಶ್ರೀ, ಬೆಂಗಳೂರು (ಹಾಡುಗಾರಿಕೆ), ಎಚ್‌.ಎಸ್‌.ವೇಣುಗೋಪಾಲ್‌, ಬೆಂಗಳೂರು (ಕೊಳಲು), ಅನೂರು ಅನಂತಕೃಷ್ಣ ಶರ್ಮಾ, ಬೆಂಗಳೂರು (ಮೃದಂಗ), ಪಿ.ನಾರಾಯಣಸ್ವಾಮಿ, ಕೋಲಾರ (ಡೋಲು)

ಹಿಂದೂಸ್ತಾನಿ ಸಂಗೀತ : ಡಾ.ನಾಗರಾಜರಾವ್‌ ಹವಾಲ್ದಾರ್‌, ಬೆಂಗಳೂರು (ಗಾಯನ), ಸುಧಾಂಶು ಕುಲಕರ್ಣಿ, ಬೆಳಗಾವಿ (ಹಾರ್ಮೋನಿಯಂ), ಸೋಮಶೇಖರ ಪಾಟೀಲ್‌, ಕಲಬುರಗಿ (ತಬಲ)

ನೃತ್ಯ : ಸುಭದ್ರಾ ಪ್ರಭು, ಬೆಂಗಳೂರು (ಕೂಚಿಪುಡಿ), ಡಾ.ಕೆ.ಕುಮಾರ್‌, ಮೈಸೂರು (ಭರತನಾಟ್ಯ), ನಂದಿನಿ ಕೆ.ಮೆಹ್ತಾ, ಬೆಂಗಳೂರು (ಕಥಕ್‌ ), ರಾಜಶ್ರೀ ಎಸ್‌.ಶೆಣೈ , ಮಂಗಳೂರು (ಭರತನಾಟ್ಯ)

ಸುಗಮ ಸಂಗೀತ : ಎಚ್‌.ಫಲ್ಗುಣ, ಬೆಂಗಳೂರು

ಕಥಾ ಕೀರ್ತನ : ಶಿವಮೂರ್ತಿಶಾಸ್ತ್ರಿಗಳು ಹಿರೇಮಠ, ಹಾವೇರಿ

ಗಮಕ : ಎಂ.ಆರ್‌.ಕೇಶವಮೂರ್ತಿ, ಬೆಂಗಳೂರು (ವಾಚನ), ಜಿ.ಎಸ್‌.ಶ್ರೀನಿವಾಸಮೂರ್ತಿ, ತುಮಕೂರು (ವ್ಯಾಖ್ಯಾನ)

ಸಂಘ ಸಂಸ್ಥೆ : ಶ್ರೀಮಂತ ನಾನಾ ಸಾಹೇಬ ನಾಡಗೀರ ಸ್ಮೃತಿ ಪ್ರತಿಷ್ಠಾನ , ಕುಂದಗೋಳ

ಪ್ರಶಸ್ತಿ ಪ್ರಕಟ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ