ಆ್ಯಪ್ನಗರ

ರಕ್ತದಾನಕ್ಕಾಗಿ ರಂಜಾನ್‌ ಉಪವಾಸ ವ್ರತ ಮುರಿದ...

ರಂಜಾನ್‌ ತಿಂಗಳ ಉಪವಾಸ ವ್ರತ ನಿರತ ಮೊಹಮ್ಮದ್‌ ಪನಾವುಲ್ಲಾ ಅಹಮದ್‌ ವ್ರತ ಮುರಿದು ರಕ್ತದಾನ ಮಾಡಿದ್ದಾರೆ...

Vijaya Karnataka 12 May 2019, 9:25 am
ಗುವಾಹಟಿ : ರಂಜಾನ್‌ ತಿಂಗಳ ಉಪವಾಸ ವ್ರತ ನಿರತ ಮೊಹಮ್ಮದ್‌ ಪನಾವುಲ್ಲಾ ಅಹಮದ್‌ ವ್ರತ ಮುರಿದು ರಕ್ತದಾನ ಮಾಡಿದ್ದಾರೆ. ತಮ್ಮ ಸ್ನೇಹಿತ ಕೆಲಸ ಮಾಡುವ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ತುರ್ತಾಗಿ ಒಳಗಾಗಬೇಕಿದ್ದ ವ್ಯಕ್ತಿಗಾಗಿ ಅವರು ರಕ್ತದಾನ ಮಾಡಿದ್ದಾರೆ. ಬಳಿಕ ವೈದ್ಯರ ಸೂಚನೆ ಮೇರೆಗೆ ಉಪವಾಸ ತೊರೆದು ಆಹಾರವನ್ನು ಸೇವಿಸಿದ್ದಾರೆ.
Vijaya Karnataka Web ರಕ್ತದಾನ
ರಕ್ತದಾನ


ಹುಮ್ಯಾನಿಟಿ ಎಂಬ ಸ್ವಯಂಪ್ರೇರಿತ ರಕ್ತದಾನಿಗಳ ಗುಂಪಿನಲ್ಲಿ ಅಹಮದ್‌ ಸ್ನೇಹಿತ ತಪಶ್‌ ಭಗವತಿ ಇದ್ದಾರೆ. 50 ವರ್ಷದ ಗೊಗೊಯ್‌ ಎಂಬ ಉದ್ಯಮಿ ಹೊಟ್ಟೆಯಲ್ಲಿ ಗಡ್ಡೆಗಳು ಪತ್ತೆಯಾದ್ದರಿಂದ ಶಸ್ತ್ರಚಿಕಿತ್ಸೆಗೆ ಒಳಪಡಬೇಕಿತ್ತು. ಗೊಗೊಯ್‌ ದಾಖಲಾದ ಆಸ್ಪತ್ರೆಯಲ್ಲಿಯೇ ಆಪರೇಷನ್‌ ಟೆಕ್ನಿಶಿಯನ್‌ ಆಗಿ ತಪಶ್‌ ಕೆಲಸ ಮಾಡುತ್ತಿದ್ದಾರೆ. ಹಲವು ದಾನಿಗಳನ್ನು ಸಂಪರ್ಕ ಮಾಡಿದರೂ ಗೊಗೊಯ್‌ ಅವರ ರಕ್ತದ ಗುಂಪು 'ಒ ಪಾಸಿಟಿವ್‌' ರಕ್ತ ಸಿಕ್ಕಿರಲಿಲ್ಲ. ಈ ವಿಚಾರ ಅಹಮದ್‌ಗೆ ತಿಳಿಯಿತು. ಕೂಡಲೇ ಆಸ್ಪತ್ರೆಗೆ ತೆರಳಿದ ಅಹಮದ್‌ ರಕ್ತದಾನ ಮಾಡಿದ್ದಾರೆ. ಗೊಗೊಯ್‌ಗೆ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆಗಳನ್ನು ತೆಗೆಯಲಾಗಿದೆ.

''ನಾನು ಹಲವು ಧರ್ಮಗುರುಗಳನ್ನು ರಕ್ತದಾನದ ಕುರಿತು ಸಲಹೆ ಕೇಳಿದೆ. ಅವರು ಪ್ರಾಣರಕ್ಷಣೆಗಾಗಿ ನೆರವಾಗು ಎಂದರು. ಆದರೆ ನಿಶ್ಯಕ್ತಿ ಎನಿಸಿದರೆ ಉಪವಾಸ ನಿಲ್ಲಿಸು ಎಂದು ಹೇಳಿದರು. ಅದರಂತೆ ರಕ್ತದಾನ ಮಾಡಿದೆ,'' ಎಂದು ಅಹಮದ್‌ ಹೇಳಿದ್ದಾರೆ. ರೋಜಾ (ಉಪವಾಸ) ತೊರೆದು ರಕ್ತಾದಾನ ಮಾಡಿದ ಅಹಮದ್‌ಗೆ ಗೊಗೊಯ್‌ ಕುಟುಂಬ ಸದಸ್ಯರು ಧನ್ಯವಾದ ಸಲ್ಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ