ಆ್ಯಪ್ನಗರ

ಮುಖ್ಯಮಂತ್ರಿಯಾಗಿದ್ದಾಗ ನನ್ನ ಮಗನಿಗೆ ನೆಮ್ಮದಿಯೇ ಇರಲಿಲ್ಲ: ದೇವೇಗೌಡ

ತಮ್ಮ ಮಗನ ಬಗ್ಗೆ ಅನುಕಂಪ ವ್ಯಕ್ತ ಪಡಿಸಿರುವ ಮಾಜಿ ಪ್ರಧಾನಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಉಂಡಿದ್ದು ಕೇವಲ ನೋವು ಅಂದಿದ್ದಾರೆ.

TIMESOFINDIA.COM 28 Jul 2019, 1:41 pm
ಬೆಂಗಳೂರು: ಮುಖ್ಯಮಂತ್ರಿಯಾಗಿದ್ದಾಗ ನನ್ನ ಮಗ ಶಾಂತಿ, ನೆಮ್ಮದಿಯಿಂದ ಇರಲೇ ಇಲ್ಲ ಎಂದು ನಿರ್ಗಮಿತ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ತಂದೆ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿ ಮಾತನಾಡುತ್ತಿದ್ದ ಅವರು,ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಬಹಳಷ್ಟು ನೋವು ತಿಂದಿದ್ದಾರೆ. ಜೆಪಿ ಭವನದಲ್ಲಿ 15 ನಿಮಿಷ ಕಣ್ಣೀರು ಸುರಿಸಿದ್ದಾರೆ. ಅವರೆಷ್ಟು ಕಷ್ಟ ಪಟ್ಟಿದ್ದಾರೆ. ಸರಕಾರ ಬಿದ್ದಿದ್ದಕ್ಕೆ ಚಿಂತೆ ಇಲ್ಲ. ಪಕ್ಷ ಸಂಘಟನೆ ಮಾಡುತ್ತೇನೆ ಎಂದವರು ಹೇಳಿದ್ದಾರೆ.

ಯಾವುದೇ ದ್ವೇಷವಿಲ್ಲದೆ ಅಧಿಕಾರ ನಡೆಸುತ್ತೇನೆ ಎಂದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಹೇಳಿಕೆಯನ್ನು ಸ್ವಾಗತಿಸಿದ ಅವರು, ರಾಜ್ಯದ ಒಳಿತಿಗೆ ಮಾಡುವ ಎಲ್ಲ ಕಾರ್ಯಗಳಿಗೆ ನಮ್ಮ ಸಹಕಾರವಿರುತ್ತದೆ ಎಂದರು.

ದೇವೇಗೌಡರ ಕುಟುಂಬ ಸಾರ್ವಜನಿಕ ವೇದಿಕೆಯಲ್ಲಿ ಭಾವುಕರಾಗುವುದು ಹೊಸದಲ್ಲ. ಮೈತ್ರಿ ಸರಕಾರ ರಚನೆಯಾದ ಬಳಿಕವಂತೂ ಅನೇಕ ಬಾರಿ ಗೌಡರ ಕುಟುಂಬ ಕಣ್ಣೀರು ಸುರಿಸಿದ ಪ್ರಸಂಗ ದಾಖಲಾಗಿದೆ. ಸರಕಾರಿ ಯೋಜನೆಗಳ ಬಗ್ಗೆ ಬಿಜೆಪಿ ಜನರಲ್ಲಿ ಅಪನಂಬಿಕೆ ಸೃಷಿಸುತ್ತಿದೆ ಎಂದು ಆರೋಪಿಸಿ ಜುಲೈ 2018ರಲ್ಲಿ ತಂದೆ- ಮಗ ಇಬ್ಬರು ವೇದಿಕೆಯ ಮೇಲೆ ಕಣ್ಣೀರಾಗಿದ್ದರು.

ರಾಜ್ಯದ ಹಿತಕ್ಕಾಗಿ ತಾನು ಮೈತ್ರಿ ಸರಕಾರದ ನಾನಾ ಒತ್ತಡಗಳನ್ನು ಸಹಿಸಿಕೊಂಡು 'ವಿಷಕಂಠ'ನಾಗಿದ್ದೇನೆ ಎಂದು ಸಾರ್ವಜನಿಕವಾಗಿ ಕುಮಾರಸ್ವಾಮಿ ಕಣ್ಣು ಒರೆಸಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ