ಆ್ಯಪ್ನಗರ

ಮೇಕೆದಾಟು ಯೋಜನೆಗೆ ನರೇಂದ್ರ ಮೋದಿ ಈ ಹಿಂದೆಯೇ ಕ್ಲಿಯರೆನ್ಸ್‌ ಕೊಟ್ಟಿದ್ದಾರೆ: ಎಚ್‌ಡಿ ದೇವೇಗೌಡ

ವಿರೋಧ ಪಕ್ಷಗಳು ವಿನಾ ರಾಜಕೀಯ ಲಾಭಕ್ಕೆ ನದಿ ಕೂಡಿಸುವುದಾಗಿ ಜನರಿಗೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ. ಈ ಹಿಂದೆ ನಾನು ಪ್ರಧಾನಮಂತ್ರಿ ಆಗಿದ್ದಾಗ ರೈತರಿಗೆ ಅನೇಕ ಯೋಜನೆಗಳನ್ನು ನೀಡಲಾಗಿತ್ತು.

Vijaya Karnataka Web 13 May 2022, 7:14 pm
Vijaya Karnataka Web ಎಚ್‌ಡಿ ದೇವೇಗೌಡ
ಎಚ್‌ಡಿ ದೇವೇಗೌಡ
ನೆಲಮಂಗಲ (ಬೆಂ.ಗ್ರಾಮಾಂತರ): ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ತಪ್ಪು ಮಾಹಿತಿ ಕೊಡುತ್ತಿದೆ. ನರೇಂದ್ರ ಮೋದಿಯವರು ಈ ಹಿಂದೆಯೇ ಯೋಜನೆಗೆ ಕ್ಲಿಯರೆನ್ಸ್ ನೀಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ತಿಳಿಸಿದ್ದಾರೆ.

ನೆಲಮಂಗಲದಲ್ಲಿ ನಡೆದ ಜೆಡಿಎಸ್‌ ಜನತಾ ಜಲಧಾರೆ ಸಮಾವೇಶದಲ್ಲಿ ಎಚ್‌ಡಿ ದೇವೇಗೌಡ ಮಾತನಾಡಿದರು.

ಜೆಡಿಎಸ್‌ನ ಜಲಧಾರೆಗೆ ಬಂದವರು ಬಾರ್‌ಗಳಲ್ಲಿ ಫುಲ್‌ ಬ್ಯುಸಿ! ಮದ್ಯದಂಗಡಿಗಳಲ್ಲಿ 'ಎಣ್ಣೆ' ಖರೀದಿಗೆ ನೂಕುನುಗ್ಗಲು!

ವಿರೋಧ ಪಕ್ಷಗಳು ವಿನಾ ರಾಜಕೀಯ ಲಾಭಕ್ಕೆ ನದಿ ಕೂಡಿಸುವುದಾಗಿ ಜನರಿಗೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ. ಈ ಹಿಂದೆ ನಾನು ಪ್ರಧಾನಮಂತ್ರಿ ಆಗಿದ್ದಾಗ ರೈತರಿಗೆ ಅನೇಕ ಯೋಜನೆಗಳನ್ನು ನೀಡಲಾಗಿತ್ತು. ಮಹಿಳಾ ಕ್ಷೇತ್ರಕ್ಕೆ ಬಲ ತುಂಬಲಾಗಿತ್ತು. ಇದನ್ನು ಈಗ ಅನೇಕರು ಮರೆತಿದ್ದಾರೆ ಎಂದು ತಿಳಿಸಿದರು.


ನನಗೆ ಮಂಡಿ ನೋವಿರಬಹುದು, ಆದರೆ, ಎಲ್ಲರನ್ನು ಎದುರಿಸುವ ಎದೆಗಾರಿಕೆಯಿದೆ ಎಂದು ದೇವೇಗೌಡ ಗುಡುಗಿದರು.

ದೇಶದಲ್ಲಿ ಹತ್ತೂವರೆ ತಿಂಗಳು ಮಾತ್ರ ಪ್ರಧಾನಮಂತ್ರಿ ಹುದ್ದೆಯಲ್ಲಿದ್ದೆ. ಆದರೆ, ಆ ಅವಧಿಯಲ್ಲಿ ನೀರಾವರಿ, ರೈತರಿಗೆ ನೀಡಿದ ಕೊಡುಗೆ ದೊಡ್ಡದು ಎಂದು ಮಾಹಿತಿ ನೀಡಿದರು.

ಕುಮಾರಸ್ವಾಮಿಯವರು ಈ ಬಾರಿ ಜಲಧಾರೆ ಕಲ್ಪನೆಯನ್ನು ಎತ್ತಿಕೊಂಡಿದ್ದಾರೆ. ಇದು ನಿಜಕ್ಕೂ ಅದ್ಭುತ ಪರಿಕಲ್ಪನೆ. ಜನರು ಇದಕ್ಕೆ ಬೆಂಬಲ ನೀಡಿ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ಗೆ ಬಲ ನೀಡಬೇಕಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿದರು.

ದೊಡ್ಡಗೌಡರನ್ನು, ಎಚ್‌ಡಿಕೆ ಹೊಗಳಿದ ಸಿಎಂ ಇಬ್ರಾಹಿಂ

ದೇವೇಗೌಡರು ರೈತರ ಮನೆಯಲ್ಲಿ ಹುಟ್ಟಿದ್ದು ತಪ್ಪಾ?, ಅವರು ರೈತರಿಗಾಗಿ ದಶಕಗಳಿಂದ ಹೋರಾಡುತ್ತಲೇ ಬಂದಿದ್ದಾರೆ.
ಅವರ ಶ್ರಮದ ಫಲವಾಗಿ ಪಂಜಾಬಿನಲ್ಲಿ ರೈತರು ಭತ್ತಕ್ಕೆ ದೇವೇಗೌಡರ ಹೆಸರಿಟ್ಟಿದ್ದಾರೆ. ನಮ್ಮ ರಾಜ್ಯದ ರೈತರ ಪರವಾಗಿಯೂ ದೇವೇಗೌಡರು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ರಾಜ್ಯದ ಜನ ಇದನ್ನು ಮರೆಯಬಾರದು ಎಂದು ಸಿಎಂ ಇಬ್ರಾಹಿಂ ತಮ್ಮ ಭಾಷಣದಲ್ಲಿ ತಿಳಿಸಿದರು.

ಕಳೆ ಕಿತ್ತುಕೊಂಡು ಹೋದರೆ ಸಮೃದ್ಧಿ ಆಗುತ್ತೆ ಬೆಳೆ: ಪಕ್ಷ ತೊರೆಯುವವರಿಗೆ ಸಿಎಂ ಇಬ್ರಾಹಿಂ ಟಾಂಗ್‌

ರಾಜ್ಯದಲ್ಲಿ ನೀರಾವರಿಗಾಗಿ ಅಶ್ವಮೇಧ ಯಾಗ ನಡೆಯುತ್ತಿದೆ. ಕಾಂಗ್ರೆಸ್‌ನ ಶಿವಕುಮಾರ್ ಮೇಕೆದಾಟುವಿಗಾಗಿ ಹೋರಾಡುತ್ತೇವೆನ್ನುತ್ತಿದ್ದಾರೆ. ಆದರೆ, ಜೆಡಿಎಸ್‌ನಿಂದ ಮೇಕೆ ಅಲ್ಲ, ಹುಲಿ ದಾಟಿಸುತ್ತಿದ್ದೇವೆ. 2023ರ ಚುನಾವಣೆಗಾಗಿ ಅಶ್ವಮೇಧ ಯಾಗ ಆರಂಭಿಸಿದ್ದೇವೆ. ನಮ್ಮ ಹುಲಿ ಕುಮಾರಸ್ವಾಮಿ. ರಥದ ಸಾರಥಿ ದೇವೇಗೌಡರು, ನಾವೆಲ್ಲರೂ ಕೈ ಜೋಡಿಸುತ್ತಿದ್ದೇವೆ ಎಂದು ಸಿಎಂ ಇಬ್ರಾಹಿಂ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ