ಆ್ಯಪ್ನಗರ

ಸಿ.ಡಿ ಪ್ರಕರಣದ ನರೇಶ್‌ ಪ್ರತ್ಯಕ್ಷ: 'ಸಿ.ಡಿ ಯುವತಿ' ಪರಿಚಯವಿದೆ ಎಂದ ಶಂಕಿತ ಆರೋಪಿ!

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ನರೇಶ್ ಗೌಡ, ಸಿ.ಡಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ನರೇಶ್ ಗೌಡ ಅಜ್ಞಾತ ಸ್ಥಳದಿಂದ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದಾನೆ.

Vijaya Karnataka Web 18 Mar 2021, 4:30 pm

ಹೈಲೈಟ್ಸ್‌:

  • ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದ ಶಂಕಿತ ಆರೋಪಿ ನರೇಶ್ ಗೌಡ ವಿಡಿಯೋ ಸಂದೇಶ.
  • ಸಿ.ಡಿ ಪ್ರಕರಣಕ್ಕೂ ತನಗೂ ಸಂಬಂಧವಿಲ್ಲ ಎಂದ ನರೇಶ್ ಗೌಡ.
  • ಸಿ.ಡಿ ಯುವತಿಯ ಪರಿಚಯವಿದೆ ಎಂದು ಸತ್ಯ ಒಪ್ಪಿಕೊಂಡ ನರೇಶ್ ಗೌಡ.
  • ಸಿ.ಡಿ ಪ್ರಕರಣದಲ್ಲಿ ವ್ಯವಸ್ಥಿತವಾಗಿ ನನ್ನ ಹೆಸರು ಸೇರಿಸಲಾಗುತ್ತಿದೆ ಎಂದ ಶಂಕಿತ ಆರೋಪಿ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ನರೇಶ್ ಗೌಡ, ಸಿ.ಡಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ.
ಅಜ್ಞಾತ ಸ್ಥಳದಿಂದ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ನರೇಶ್, ಪ್ರಕರಣದಲ್ಲಿ ನನ್ನ ಹೆಸರನ್ನು ವ್ಯವಸ್ಥಿತವಾಗಿ ಸೇರಿಸಲಾಗುತ್ತಿದೆ. ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಹೇಳಿದ್ದಾನೆ.

ಆದರೆ ಸಿ.ಡಿಯಲ್ಲಿರುವ ಯುವತಿ ತನಗೆ ಪರಿಚಯವಿದೆ ಎಂದು ಒಪ್ಪಿಕೊಂಡಿರುವ ನರೇಶ್, ಪತ್ರಕರ್ತನಾಗಿರುವ ಕಾರಣಕ್ಕೆ ಸಿ.ಡಿಯಲ್ಲಿರುವ ಯುವತಿ ನನಗೆ ಪರಿಚಯವಿದ್ದಿದ್ದು ನಿಜ ಎಂದು ಹೇಳಿದ್ದಾನೆ.

ರಮೇಶ್‌ ಜಾರಕಿಹೊಳಿ ಸಿ.ಡಿ. ಪ್ರಕರಣದ ನರೇಶ್‌ ಕೊನೆಗೂ ಪ್ರತ್ಯಕ್ಷ

ಸ್ನೇಹಿತನ ಮೂಲಕ ನನ್ನ ನಂಬರ್‌ ತೆಗೆದುಕೊಂಡು ಆಕೆ ನನಗೆ ಕರೆ ಮಾಡಿದ್ದಳು. ರಮೇಶ್ ಜಾರಕಿಹೊಳಿಯಿಂದ ನನಗೆ ತೊಂದರೆ ಇದೆ ಎಂದು ಹೆಳಿ ಸಹಾಯ ಕೇಳಿದ್ದಳು ಎಂದು ನರೇಶ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾನೆ.

ಆದರೆ ರಮೇಶ್ ಜಾರಕಿಹೊಳಿ ವಿರುದ್ಧ ಏನಾದರೂ ಸಾಕ್ಷಿ ಇದ್ದರೆ ಕಳಿಸಿ ಎಂದು ಯುವತಿಗೆ ಕೇಳಿದ್ದೆ. ಇಷ್ಟು ಬಿಟ್ಟು ಬೇರೇನೂ ನನಗೆ ಗೊತ್ತಿಲ್ಲ ಎಂದು ನರೇಶ್ ಹೇಳಿದ್ದಾನೆ.

ಅಷ್ಟೇ ಅಲ್ಲದೇ ನನ್ನ ಮಗುವಿನ ನಾಮಕರಣಕ್ಕೂ ಆ ಯುವತಿ ಬಂದಿದ್ದಳು ಎಂದು ನರೇಶ್‌ ಗೌಡ ತಿಳಿಸಿದ್ದಾನೆ. ಇದರಿಂದ ನರೇಶ್‌ಗೂ ಹಾಗೂ ಸಿ.ಡಿ ಯುವತಿಗೂ ಆಪ್ತ ಗೆಳೆತನವಿರುವುದು ಖಚಿತವಾಗಿದೆ.

ಜಾರಕಿಹೊಳಿ ಸಿಡಿ ಪ್ರಕರಣ: 'ಮಾಸ್ಟರ್‌ ಮೈಂಡ್‌ ಮತ್ತು ರಿಂಗ್‌ ಮಾಸ್ಟರ್‌ ಒಂದೇ ಫ್ರೇಮ್‌ನಲ್ಲಿ', ಬಿಜೆಪಿ ಬ್ಯಾಟಿಂಗ್!

ಸಿ.ಡಿ ಪ್ರಕರಣದಲ್ಲಿ ನಾನು ಯಾರಿಂದಲೂ ಹಣ ಪಡೆದಿಲ್ಲ. ಒಂದು ವೇಳೆ ನಾನು ಹಣ ಪಡೆದಿದ್ದೇನೆ ಎಂದು ಸಾಬೀತು ಮಾಡಿದರೆ ಯಾವ ಶಿಕ್ಷೆ ನೀಡಿದರೂ ಅನುಭವಿಸಲು ಸಿದ್ಧ ಎಂದು ನರೇಶ್ ಸ್ಪಷ್ಟಪಡಿಸಿದ್ದಾನೆ.

ಒಟ್ಟಿನಲ್ಲಿ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿರುವ ನರೇಶ್, ಸಿ.ಡಿ ಪ್ರಕರಣದಲ್ಲಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿರುವುದು ಸ್ಪಷ್ಟ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ