ಗೋಡ್ಸೆ ಕೊಂದಿದ್ದ ಒಬ್ಬರನ್ನು, ರಾಜೀವ್ ಗಾಂಧಿ ಕೊಂದಿದ್ದು 17ಸಾವಿರ ಜನರನ್ನು: ಟ್ವೀಟ್ ಮಾಡಿ ಡಿಲಿಟ್ ಮಾಡಿದ ನಳೀನ್ ಕುಮಾರ್ ಕಟೀಲ್
ನಾಥೂರಾಂ ಗೋಡ್ಸೆ ಕೊಂದವರ ಸಂಖ್ಯೆ 1, ಅಜ್ಮಲ್ ಕಸಬ್ ಕೊಂದವರ ಸಂಖ್ಯೆ 72, ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17,000. ಈಗ ನೀವೇ ಹೇಳಿ ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು?'ಎಂದು ಅವರು ಪ್ರಶ್ನಿಸಿದ್ದರು.
Times Now 17 May 2019, 12:10 pm
ಬೆಂಗಳೂರು: ಗೋಡ್ಸೆ ಕೊಂದಿದ್ದು ಒಬ್ಬರನ್ನು, ರಾಜೀವ್ ಗಾಂಧಿ ಅವರು ಕೊಂದಿದ್ದು, 17ಸಾವಿರ ಜನರನ್ನು ಎಂದು ದಕ್ಷಿಣ ಕನ್ನಡದ ಹಾಲಿ ಸಂಸದ ನಳೀನ್ ಕುಮಾರ್ ಕಟೀಲ್ ಶುಕ್ರವಾರ ಟ್ವಿಟರ್ನಲ್ಲಿ ಪ್ರಶ್ನಿಸಿದ್ದರು. ಇಂದಿರಾ ಗಾಂಧಿ ಹತ್ಯೆ ಬಳಿಕ ನಡೆದ ಸಿಖ್ ವಿರೋಧಿ ದಂಗೆಯನ್ನುದ್ದೇಶಿಸಿ ಅವರು ಈ ಮಾತನ್ನು ಹೇಳಿದ್ದರು. ಆದರೆ ಇದು ಮತ್ತೊಂದು ವಿವಾದಕ್ಕೆ ಕಾರಣವಾಗುತ್ತಿದೆ ಎಂದು ಅರಿವಾದ ಕೂಡಲೇ ನಳಿನ್ ಕುಮಾರ್ ಕಟೀಲ್ ಟ್ವೀಟ್ ಅನ್ನು ಅಳಿಸಿ ಹಾಕಿದ್ದಾರೆ.
ನಾಥೂರಾಂ ಗೋಡ್ಸೆ ಕೊಂದವರ ಸಂಖ್ಯೆ 1, ಅಜ್ಮಲ್ ಕಸಬ್ ಕೊಂದವರ ಸಂಖ್ಯೆ 72, ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17,000. ಈಗ ನೀವೇ ಹೇಳಿ ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು?'ಎಂದು ಅವರು ಪ್ರಶ್ನಿಸಿದ್ದರು.
ಉತ್ತರ ಕನ್ನಡದ ಸಂಸದ ಅನಂತ ಕುಮಾರ ಹೆಗಡೆ ಕೂಡ ಗೋಡ್ಸೆ ಪರ ಸಹಾನುಭೂತಿ ವ್ಯಕ್ತ ಪಡಿಸಿ ಟ್ವೀಟ್ ಮಾಡಿದ್ದರು. ಬಳಿಕ ಅವರು ಸಹ ಅದನ್ನು ಡಿಲಿಟ್ ಮಾಡಿದ್ದು ತಮ್ಮ ಖಾತೆ ಹ್ಯಾಕ್ ಆಗಿದೆ ಎಂದು ಹೇಳಿದ್ದಾರೆ.
ಗೋಡ್ಸೆ ಪರ ಮಾತನಾಡುವಾಗ ಅಪರಾಧ ಭಾವನೆ ಬೇಕಿಲ್ಲ. ಅದಕ್ಕಾಗಿ ಯಾಕೆ ಕ್ಷಮೆ ಕೋರಬೇಕು? ಎಂದು ಅನಂತ ಕುಮಾರ್ ಹೆಗಡೆಯವರ ಹೆಸರಿನಲ್ಲಿ ಟ್ವೀಟ್ ಮಾಡಲಾಗಿತ್ತು.
'7 ದಶಕಗಳ ಬಳಿಕ ಇಂದಿನ ತಲೆಮಾರು ಬದಲಾದ ಗ್ರಹಿಕೆಯ ವಾತಾವರಣದಲ್ಲಿ ಈ ಬಗ್ಗೆ ಚರ್ಚೆ ಆರಂಭಿಸಿದೆ. ಸಾಕಷ್ಟು ಖಂಡನೆಗಳೂ ಕೇಳಿ ಬಂದಿವೆ. ಈ ಚರ್ಚೆಯನ್ನು ಕೇಳಿ ಕೊನೆಗೂ #ನಾಥೂರಾಂ ಗೋಡ್ಸೆ ಆತ್ಮಕ್ಕೆ ಶಾಂತಿ ದೊರೆತಿರಬಹುದು' ಎಂದು ಟ್ವೀಟ್ನಲ್ಲಿ ಹೇಳಲಾಗಿತ್ತು.
ತಮ್ಮ ಟ್ವಿಟರ್ ಖಾತೆ ನಿನ್ನೆ ಹ್ಯಾಕ್ ಆಗಿದ್ದು, ತಮ್ಮ ಹೆಸರಿನಲ್ಲಿ ಪ್ರಕಟವಾದ ವಿವಾದಿತ ಟ್ವೀಟ್ ಅನ್ನು ಅಳಿಸಿ ಹಾಕಲಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಟ್ವೀಟ್ ಮೂಲಕವೇ ಸ್ಪಷ್ಟೀಕರಣ ನೀಡಿದ್ದಾರೆ.
ನಾಥೂರಾಂ ಗೋಡ್ಸೆ ಕೊಂದವರ ಸಂಖ್ಯೆ 1, ಅಜ್ಮಲ್ ಕಸಬ್ ಕೊಂದವರ ಸಂಖ್ಯೆ 72, ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17,000. ಈಗ ನೀವೇ ಹೇಳಿ ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು?'ಎಂದು ಅವರು ಪ್ರಶ್ನಿಸಿದ್ದರು.
ಉತ್ತರ ಕನ್ನಡದ ಸಂಸದ ಅನಂತ ಕುಮಾರ ಹೆಗಡೆ ಕೂಡ ಗೋಡ್ಸೆ ಪರ ಸಹಾನುಭೂತಿ ವ್ಯಕ್ತ ಪಡಿಸಿ ಟ್ವೀಟ್ ಮಾಡಿದ್ದರು. ಬಳಿಕ ಅವರು ಸಹ ಅದನ್ನು ಡಿಲಿಟ್ ಮಾಡಿದ್ದು ತಮ್ಮ ಖಾತೆ ಹ್ಯಾಕ್ ಆಗಿದೆ ಎಂದು ಹೇಳಿದ್ದಾರೆ.
ಗೋಡ್ಸೆ ಪರ ಮಾತನಾಡುವಾಗ ಅಪರಾಧ ಭಾವನೆ ಬೇಕಿಲ್ಲ. ಅದಕ್ಕಾಗಿ ಯಾಕೆ ಕ್ಷಮೆ ಕೋರಬೇಕು? ಎಂದು ಅನಂತ ಕುಮಾರ್ ಹೆಗಡೆಯವರ ಹೆಸರಿನಲ್ಲಿ ಟ್ವೀಟ್ ಮಾಡಲಾಗಿತ್ತು.
'7 ದಶಕಗಳ ಬಳಿಕ ಇಂದಿನ ತಲೆಮಾರು ಬದಲಾದ ಗ್ರಹಿಕೆಯ ವಾತಾವರಣದಲ್ಲಿ ಈ ಬಗ್ಗೆ ಚರ್ಚೆ ಆರಂಭಿಸಿದೆ. ಸಾಕಷ್ಟು ಖಂಡನೆಗಳೂ ಕೇಳಿ ಬಂದಿವೆ. ಈ ಚರ್ಚೆಯನ್ನು ಕೇಳಿ ಕೊನೆಗೂ #ನಾಥೂರಾಂ ಗೋಡ್ಸೆ ಆತ್ಮಕ್ಕೆ ಶಾಂತಿ ದೊರೆತಿರಬಹುದು' ಎಂದು ಟ್ವೀಟ್ನಲ್ಲಿ ಹೇಳಲಾಗಿತ್ತು.
ತಮ್ಮ ಟ್ವಿಟರ್ ಖಾತೆ ನಿನ್ನೆ ಹ್ಯಾಕ್ ಆಗಿದ್ದು, ತಮ್ಮ ಹೆಸರಿನಲ್ಲಿ ಪ್ರಕಟವಾದ ವಿವಾದಿತ ಟ್ವೀಟ್ ಅನ್ನು ಅಳಿಸಿ ಹಾಕಲಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಟ್ವೀಟ್ ಮೂಲಕವೇ ಸ್ಪಷ್ಟೀಕರಣ ನೀಡಿದ್ದಾರೆ.