ಆ್ಯಪ್ನಗರ

ಇಂದು ನೀಟ್‌ ಪರೀಕ್ಷೆ

ವೈದ್ಯ ಮತ್ತು ದಂತ ವೈದ್ಯ ಪದವಿಗೆ ಪ್ರವೇಶ ಕಲ್ಪಿಸುವ 2018ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ-ನೀಟ್‌) ಮೇ 6ರ ಭಾನುವಾರ ನಡೆಯಲಿದೆ. ಸಿಬಿಎಸ್‌ಸಿ ಹಮ್ಮಿಕೊಂಡಿರುವ ಈ ಪರೀಕ್ಷೆ, ದೇಶಾದ್ಯಂತ ಒಟ್ಟು 136 ನಗರಗಳ 2,255 ಕೇಂದ್ರಗಳಲ್ಲಿ ನಡೆಯಲಿದೆ. ಈ ಬಾರಿ ದೇಶಾದ್ಯಂತ ಒಟ್ಟು 13,26,725 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ.

Vijaya Karnataka 6 May 2018, 7:18 am
ಬೆಂಗಳೂರು: ವೈದ್ಯ ಮತ್ತು ದಂತ ವೈದ್ಯ ಪದವಿಗೆ ಪ್ರವೇಶ ಕಲ್ಪಿಸುವ 2018ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ-ನೀಟ್‌) ಮೇ 6ರ ಭಾನುವಾರ ನಡೆಯಲಿದೆ. ಸಿಬಿಎಸ್‌ಸಿ ಹಮ್ಮಿಕೊಂಡಿರುವ ಈ ಪರೀಕ್ಷೆ, ದೇಶಾದ್ಯಂತ ಒಟ್ಟು 136 ನಗರಗಳ 2,255 ಕೇಂದ್ರಗಳಲ್ಲಿ ನಡೆಯಲಿದೆ. ಈ ಬಾರಿ ದೇಶಾದ್ಯಂತ ಒಟ್ಟು 13,26,725 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ.
Vijaya Karnataka Web cet


ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರ್ಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು ಹಾಗೂ ಉಡುಪಿ ನಗರಗಳಲ್ಲಿ ಒಟ್ಟು 187 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಬಾರಿ ಕರ್ನಾಟಕದಲ್ಲಿ ಒಟ್ಟು 96,377 ವಿದ್ಯಾರ್ಥಿಗಳು ನೀಟ್‌ ಪರೀಕ್ಷೆ ಬರೆಯಲಿದ್ದಾರೆ.

ಬೆಳಗ್ಗೆ 10 ಗಂಟೆಗೆ ಪರೀಕ್ಷೆ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳು 9.30ರ ಒಳಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ತಡವಾಗಿ ಬಂದ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರದ ಒಳಗೆ ಬಿಡುವುದಿಲ್ಲ. ಪರೀಕ್ಷೆಗಳು ಪ್ರಾರಂಭವಾಗುವ ಎರಡೂವರೆ ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳು ತೆರೆದಿರುತ್ತವೆ.

ಪರೀಕ್ಷಾ ಕೇಂದ್ರದೊಳಗೆ ನಿಷಿದ್ಧ ವಸ್ತುಗಳು:

ಪರೀಕ್ಷಾ ಕೇಂದ್ರದ ಒಳಗೆ ಯಾವುದೇ ಪೇಪರ್‌, ಕಂಪಾಸ್‌ ಬಾಕ್ಸ್‌ ಅಥವಾ ಪೆನ್ಸಿಲ್‌ ಬಾಕ್ಸ್‌, ಪೌಚ್‌, ಕ್ಯಾಲ್ಕುಲೇಟರ್‌, ಸ್ಕೇಲ್‌, ಪ್ಯಾಡ್‌, ಪೆನ್‌ಡ್ರೈವ್‌, ಎರೇಸರ್‌, ಲಾಗ್‌ ಟೇಬಲ್‌, ಎಲೆಕ್ಟ್ರಿಕ್‌ ಪೆನ್‌, ಸ್ಕ್ಯಾ‌ನರ್‌ಗಳಂತಹ ವಸ್ತುಗಳು ಹಾಗೂ ನೀರಿನ ಬಾಟಲ್‌, ಟೀ, ಕಾಫಿ, ತಂಪು ಪಾನೀಯ ಹಾಗೂ ಇತರೆ ತಿನಿಸುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ.

ಮೊಬೈಲ್‌ಫೋನ್‌, ಬ್ಲೂಟೂತ್‌, ಇಯರ್‌ ಫೋನ್‌, ಮೈಕ್ರೋಫೋನ್‌, ಪೇಜರ್‌, ಹೆಲ್ತ್‌ ಬ್ಯಾಂಡ್‌, ವ್ಯಾಲೆಟ್‌, ತಂಪು ಕನ್ನಡಕ, ಹ್ಯಾಂಡ್‌ ಬ್ಯಾಗ್‌, ಟೋಪಿಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಜತೆಗೆ ಕೈ ಗಡಿಯಾರ, ಬ್ರಾಸ್‌ಲೆಟ್‌ ಸೇರಿದಂತೆ ಒಡವೆಗಳು, ಪೆಂಡೆಂಟ್‌ಗಳು, ಬ್ಯಾಡ್ಜ್‌, ಕ್ಯಾಮೆರಾ ಸೇರಿದಂತೆ ಇತರೆ ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು.

ಕಟ್ಟುನಿಟ್ಟಿನ ವಸ್ತ್ರ ಸಂಹಿತೆ:

ನೀಟ್‌ ಪರೀಕ್ಷೆಗೆ ಕಟ್ಟುನಿಟ್ಟಿನ ವಸ್ತ್ರ ಸಂಹಿತೆಯನ್ನು ಜಾರಿಗೆ ತರಲಾಗಿದೆ. ಆದ್ದರಿಂದ ಅಭ್ಯರ್ಥಿಗಳು ಸರಳವಾದ ಉಡುಪುಗಳನ್ನು ಧರಿಸಿ ಪರೀಕ್ಷೆಗೆ ಹಾಜರಾಗಬೇಕು. ವಿದ್ಯಾರ್ಥಿಗಳು ಅರ್ಧ ತೋಳಿನ ಅಂಗಿ ಹಾಗೂ ಪ್ಯಾಂಟ್‌ ಮತ್ತು ವಿದ್ಯಾರ್ಥಿನಿಯರು ಅರ್ಧ ತೋಳಿನ ಟಾಪ್‌ ಹಾಗೂ ಸಲ್ವಾರ್‌ ತೊಡಬೇಕು. ಉಡುಪಿನಲ್ಲಿ ದೊಡ್ಡ ಗುಂಡಿಗಳು, ಬ್ಯಾಡ್ಜ್‌ ಅಥವಾ ಪದಕಗಳನ್ನು ಅಳವಡಿಸಿರಬಾರದು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಶೂಗಳನ್ನು ಧರಿಸುವಂತಿಲ್ಲ. ಬದಲಿಗೆ ಚಪ್ಪಲಿಗಳನ್ನು ಧರಿಸಿರಬೇಕು. ವಿದ್ಯಾರ್ಥಿನಿಯರು ಹೈ ಹೀಲ್ಡ್‌ ಬದಲಿಗೆ ಕಡಿಮೆ ಹೀಲ್ಡ್‌ ಹೊಂದಿರುವ ಸ್ಯಾಂಡಲ್‌ಗಳನ್ನು ಧರಿಸಬೇಕು. ಹೂ ಮುಡಿದು ಪರೀಕ್ಷಾ ಕೇಂದ್ರಕ್ಕೆ ಬರುವಂತಿಲ್ಲ ಎಂದು ಸೂಚಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ