ಆ್ಯಪ್ನಗರ

ನೆಫ್ರೋ-ಯುರಾಲಜಿ ಸಂಸ್ಥೆ ನಿರ್ದೇಶಕರ ಬದಲಾವಣೆಗೆ ತಡೆ

ನೆಫ್ರೋ ಯುರಾಲಜಿ ಸಂಸ್ಥೆಯ ನಿರ್ದೇಶಕರಾಗಿದ್ದ ಡಾ.ಆರ್‌.ಕೇಶವಮೂರ್ತಿ ಅವರನ್ನು ಬದಲಿಸಿ ಆ ಜಾಗಕ್ಕೆ ಡಾ.ಎನ್‌.ಶಿವಲಿಂಗಯ್ಯ ಅವರನ್ನು ನಿರ್ದೇಶಕರನ್ನಾಗಿ ನೇಮಿಸಿ ಸರಕಾರ ಜೂ.20ರಂದು ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್‌ ತಡೆ ನೀಡಿದೆ.

Vijaya Karnataka 28 Jun 2019, 5:00 am
ಬೆಂಗಳೂರು : ನೆಫ್ರೋ ಯುರಾಲಜಿ ಸಂಸ್ಥೆಯ ನಿರ್ದೇಶಕರಾಗಿದ್ದ ಡಾ.ಆರ್‌.ಕೇಶವಮೂರ್ತಿ ಅವರನ್ನು ಬದಲಿಸಿ ಆ ಜಾಗಕ್ಕೆ ಡಾ.ಎನ್‌.ಶಿವಲಿಂಗಯ್ಯ ಅವರನ್ನು ನಿರ್ದೇಶಕರನ್ನಾಗಿ ನೇಮಿಸಿ ಸರಕಾರ ಜೂ.20ರಂದು ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್‌ ತಡೆ ನೀಡಿದೆ.
Vijaya Karnataka Web nephro director transfer stayed
ನೆಫ್ರೋ-ಯುರಾಲಜಿ ಸಂಸ್ಥೆ ನಿರ್ದೇಶಕರ ಬದಲಾವಣೆಗೆ ತಡೆ


ಕೇಶವಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ.ಪಿ.ಬಿ.ಭಜಂತ್ರಿ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿ, ಎಲ್ಲ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿದೆ.

ನಿರ್ದೇಶಕ ಸ್ಥಾನದಿಂದ ತಮ್ಮನ್ನು ನಿಯಮಬಾಹಿರವಾಗಿ ಕೆಳಗಿಳಿಸಲಾಗಿದೆ. ಸರಕಾರ ಯಾವುದೇ ನಿಯಮಗಳನ್ನು ಪಾಲಿಸಿಲ್ಲ. ನಿರ್ದೇಶಕರ ನೇಮಕದಲ್ಲಿ ಸರಕಾರಕ್ಕೆ ಅಧಿಕಾರವಿಲ್ಲ, ಅಧಿಕಾರ ಇರುವುದು ಸಂಸ್ಥೆಯ ನಿರ್ದೇಶಕ ಮಂಡಳಿಗೆ ಮಾತ್ರ ಎಂದು ಕೇಶವಮೂರ್ತಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ