ಆ್ಯಪ್ನಗರ

ಸಂಘದ ಹಿನ್ನೆಲೆ ಹೊಂದಿರದ ಮೊದಲ ಸಿಎಂ; ಹಿಂದುತ್ವಕ್ಕೆ ಬೊಮ್ಮಾಯಿ ನೀಡ್ತಾರಾ ಮಣೆ?

ಯಡಿಯೂರಪ್ಪ ರಾಜೀನಾಮೆ ಬಳಿಕ ಹಿಂದುತ್ವದ ತಲೆಯಾಳುಗಳಿಗೆ ಮಣೆ ಹಾಕುವ ಚಿಂತನೆ ಹೈಕಮಾಂಡ್ ಗೆ ಇತ್ತು. ಈ ಕಾರಣಕ್ಕಾಗಿ ಬಿಎಲ್ ಸಂತೋಷ್, ಪ್ರಹ್ಲಾದ ಜೋಶಿ ಹೆಸರು ಮುಂಚೂಣಿಗೆ ಬಂದಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ಜನತಾಪರಿವಾರ ಬಸವರಾಜ ಬೊಮ್ಮಾಯಿ ಆಯ್ಕೆಗೊಂಡರು. ಇನ್ನು ಮುಂದಿನ ಎರಡು ವರ್ಷಗಳ ಕಾಲ ಬೊಮ್ಮಾಯಿ ಸರ್ಕಾರದಲ್ಲಿ ಹಿಂದುತ್ವಕ್ಕೆ ಮಣೆ ಇರುತ್ತಾ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Written byಇರ್ಷಾದ್ ಉಪ್ಪಿನಂಗಡಿ | Vijaya Karnataka Web 29 Jul 2021, 11:22 am
ಬೆಂಗಳೂರು: ಬಿಜೆಪಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜಕೀಯ ಘಟಕ. ಸಂಘದ ನಿಲುವು ಮೀರಿ ಪಕ್ಷ ನಡೆಯುವುದಿಲ್ಲ. ಪಕ್ಷದ ಮಹತ್ವದ ಸ್ಥಾನ ಹಾಗೂ ಮುಂದಾಳತ್ವ ಸಂಘ ನಿಷ್ಠರ ಕೈಯಲ್ಲಿ ಇರುತ್ತದೆ. ರಾಜ್ಯದಲ್ಲೂ ಇದು ಹೊರತಾಗಿಲ್ಲ. ರಾಜ್ಯದಲ್ಲಿ ಬಿಜೆಪಿಯಿಂದ ಮೂವರು ಸಿಎಂಗಳ ಪೈಕಿ ಬಿಎಸ್ ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್ ಆರೆಸ್ಸೆಸ್‌ ಹಿನ್ನೆಲೆ ಹೊಂದಿದವರು. ಆದರೆ ಮೊದಲ ಬಾರಿಗೆ ಸಿಎಂ ಪಟ್ಟಕ್ಕೆ ಆರೆಸ್ಸೆಸ್‌ ಹಿನ್ನೆಲೆ ಹೊಂದಿರದ ವ್ಯಕ್ತಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ.
Vijaya Karnataka Web Basavaraj Bommai


ಬೊಮ್ಮಾಯಿ ಜನತಾ ಪರಿವಾರದ ಹಿನ್ನೆಲೆ ಹೊಂದಿದವರು. ಇವರ ತಂದೆ ಎಸ್.‌ಆರ್ ಬೊಮ್ಮಾಯಿ ಜನತಾ ಪರಿವಾರದಿಂದಲೇ ಒಂಬತ್ತು ತಿಂಗಳು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಜನತಾ ಪರಿವಾರದಿಂದ ಬಿಜೆಪಿಗೆ ಬಂದ ಬಸವರಾಜ ಬೊಮ್ಮಾಯಿ ಇದೀಗ ಪಕ್ಷದ ಸಿದ್ಧಾಂತಕ್ಕೆ ಒಗ್ಗಿಕೊಂಡಿದ್ದಾರೆ.‌ ಆದರೆ ಯಾವತ್ತೂ ಸಂಘದ ಹಿಂದುತ್ವ ನಿಲುವಿನಲ್ಲಿ ಬಹಿರಂಗವಾಗಿ ನಡೆದುಕೊಂಡವರಲ್ಲ. ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಂದರ್ಭದಲ್ಲಿ ಸಾಕಷ್ಟು ಮುಸ್ಲಿಂಮರು ರಾಜಭವನಕ್ಕೆ ಆಗಮಿಸಿದ್ದದ್ದು ಇದಕ್ಕೆ ಸಾಕ್ಷಿಯಾಗಿತ್ತು.
ಶುಕ್ರವಾರ ದಿಲ್ಲಿಗೆ ತೆರಳಿ ಪ್ರಧಾನಿ ಮೋದಿ ಹಾಗೂ ವರಿಷ್ಠರನ್ನು ಭೇಟಿ ಮಾಡ್ತೇನೆ; ಬಸವರಾಜ ಬೊಮ್ಮಾಯಿ
ಯಡಿಯೂರಪ್ಪ ರಾಜೀನಾಮೆ ಬಳಿಕ ಹಿಂದುತ್ವದ ತಲೆಯಾಳುಗಳಿಗೆ ಮಣೆ ಹಾಕುವ ಚಿಂತನೆ ಹೈಕಮಾಂಡ್ ಗೆ ಇತ್ತು. ಈ ಕಾರಣಕ್ಕಾಗಿ ಬಿಎಲ್ ಸಂತೋಷ್, ಪ್ರಹ್ಲಾದ ಜೋಶಿ ಹೆಸರು ಮುಂಚೂಣಿಗೆ ಬಂದಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ಜನತಾಪರಿವಾರ ಬಸವರಾಜ ಬೊಮ್ಮಾಯಿ ಆಯ್ಕೆಗೊಂಡರು. ಇನ್ನು ಮುಂದಿನ ಎರಡು ವರ್ಷಗಳ ಕಾಲ ಬೊಮ್ಮಾಯಿ ಸರ್ಕಾರದಲ್ಲಿ ಹಿಂದುತ್ವಕ್ಕೆ ಮಣೆ ಇರುತ್ತಾ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಸಂಘದ ನಿಲುವು ಹಾಗೂ ಜನತಾಪರಿವಾರ ಹಿನ್ನೆಲೆಯ ರಾಜಕಾರಣದ ಮಿಶ್ರಣ ಹೇಗಿರಲಿದೆ ಎಂಬುವುದು ಕಾದುನೋಡಬೇಕಿದೆ.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ