ಆ್ಯಪ್ನಗರ

ಕೇಂದ್ರದಿಂದ ನೂತನ ಶಿಕ್ಷಣ ನೀತಿ ಕರಡು ಸಿದ್ಧ

ಕೇಂದ್ರ ಸರಕಾರ ನೂತನ ಶಿಕ್ಷಣ ನೀತಿ ಕರಡು ಸಿದ್ಧಪಡಿಸಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ರಾಜ್ಯ ಸಚಿವ ಡಾ. ಸತ್ಯಪಾಲ್ ಸಿಂಗ್ ಹೇಳಿದ್ದಾರೆ.

Vijaya Karnataka Web 27 Sep 2018, 7:05 pm
ಉಡುಪಿ: ಕೇಂದ್ರ ಸರಕಾರ ನೂತನ ಶಿಕ್ಷಣ ನೀತಿ ಕರಡು ಸಿದ್ಧಪಡಿಸಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ರಾಜ್ಯ ಸಚಿವ ಡಾ. ಸತ್ಯಪಾಲ್ ಸಿಂಗ್ ಹೇಳಿದ್ದಾರೆ.
Vijaya Karnataka Web satyapal


ಟಿ. ಎ. ಪೈ ಮ್ಯಾನೇಜ್‍ಮೆಂಟ್ ಇನ್‍ಸ್ಟಿಟ್ಯೂಟ್ (ಟ್ಯಾಪ್ಮಿ) ವತಿಯಿಂದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.

ಭೂತಾನ್ ರಾಷ್ಟ್ರದಲ್ಲಿ ಬದುಕಿನ ಆನಂದಕ್ಕೆ ಆದ್ಯತೆ ನೀಡಿದಂತೆ ಸೂಚ್ಯಂಕ ಬದಲಾಗಬೇಕು. ವೃತ್ತಿ ಪ್ರಗತಿಗಿಂತ ಬದುಕಿನಲ್ಲಿ ಸಂತೋಷ ಗಳಿಕೆ ಮುಖ್ಯ. ಪದವಿ, ಅಂಕಕ್ಕಿಂತ ಸಾಮರ್ಥ್ಯ, ಜ್ಞಾನ ಗಳಿಕೆ ಮುಖ್ಯ ಎಂದರು.

ಕೇವಲ 8ನೇ ತರಗತಿ ಕಲಿತ ಡಾ. ರಾಹುಲ್‍ ಸಂಕೃತ್ಯಯಾನ್ 36 ಭಾಷೆ ಕಲಿತು, 150 ಕೃತಿ ಬರೆದಿದ್ದು ಶ್ರೀಲಂಕಾ ಸರಕಾರ ಆಹ್ವಾನಿಸಿ ಒಳ್ಳೇ ಹುದ್ದೆ ನೀಡಿತ್ತು. ಯಾವುದೇ ಕ್ಷೇತ್ರದಲ್ಲಿ ಬದಲಾವಣೆಯನ್ನು ಯಾರೂ ಬೇಗನೆ ಒಪ್ಪಿಕೊಳ್ಳುವುದಿಲ್ಲ. ಶಿಕ್ಷಣದಲ್ಲಿ ಪರಿವರ್ತನೆಯ ಸಮಯ ಬರಬಹುದು. ಒಳ ಹೊರಗು ಒಂದಾಗಿರದ ದ್ವಂದ್ವ ವ್ಯಕ್ತಿತ್ವದಿಂದ ಸುಖವಿಲ್ಲ. ಜೀವನದ ಕಿಮ್ಮತ್ತು ಅರಿತರಷ್ಟೇ ಆತ್ಮಹತ್ಯೆ ತಡೆ ಸಾಧ್ಯ. ಶರೀರ ಮತ್ತು ಬ್ರಹ್ಮಾಂಡ ಅರಿತುಕೊಳ್ಳಿ. ಮೊದಲು ಅನುಶಾಸನ, ನಂತರ ಶಾಸನ ಪಾಲಿಸಿ. ಶರೀರದ ತಾಕತ್ತು, ಬೌದ್ಧಿಕ ಸಾಮಥ್ರ್ಯದ ಜತೆಗೆ ಆಧ್ಯಾತ್ಮ ಶಕ್ತಿ ಮುಖ್ಯ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಮನಸ್ಸು ಇದೆಯಾ? ಇದ್ದರೆ ಅದು ಹೇಗಿರುತ್ತೆ? ಯಾರಿಗಾದರೂ ಮನಸ್ಸಿನ ಫೋಟೋ ಕಾಣಲು ಸಿಕ್ಕಿದೆಯೇ? ಎಂದು ವಿದ್ಯಾರ್ಥಿಗಳಲ್ಲಿ ಪ್ರಶ್ನಿಸಿದ ಅವರು, ಶರೀರದೊಳಗೆ ಮನಸ್ಸು, ಬುದ್ಧಿಮತ್ತೆ, ಆತ್ಮವನ್ನು ನೋಡಲಾಗದು. ಆದರೆ ಯೋಗ ಸಾಧನೆಯಿಂದಷ್ಟೇ ಅನುಭವಿಸಲು ಸಾಧ್ಯ ಎಂದರು. ಪ್ರತಿಯೊಂದು ಜೀವಿಯ ಸೃಷ್ಟಿಯ ಹಿಂದೆ ದೇವರಿದ್ದಾನೆ. ಹೀಗಾಗಿ ಆಧ್ಯಾತ್ಮದಲ್ಲಿ ನಂಬಿಕೆಯಿಡಿ ಎಂದು ಹೇಳಿದರು.

ಇದಕ್ಕೂ ಮುನ್ನ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾಕ್ಟರ್, ಎಂಜಿನಿಯರ್‌ಗಳಂತಹ ವೃತ್ತಿಪರರೇ ಆತ್ಮಹತ್ಯೆಗೆ ಶರಣಾಗುತ್ತಿದ್ದು ಬದುಕಿನ ಮಹತ್ವ, ಉದ್ದೇಶ ತಿಳಿಸಲು ಆಧುನಿಕ ಶಿಕ್ಷಣ ವ್ಯವಸ್ಥೆ ವಿಫಲವಾಗಿದೆ. ದೇಶದಲ್ಲಿ ಕೊಲೆಗಿಂತ 6 ಪಟ್ಟು ಆತ್ಮಹತ್ಯೆ ಪ್ರಕರಣಗಳು ದಾಖಲಾಗುತ್ತಿವೆ. ಆರೋಗ್ಯ, ಬದುಕು, ಕುಟುಂಬ ಸಂಸ್ಥೆಗಳನ್ನು ಕೆಡಿಸುವಂತಹ ಸಂತೋಷಕ್ಕೆ ಯುವ ಸಮುದಾಯ ಬಲಿಯಾಗಬಾರದು ಎಂದು ಹೇಳಿದರು.

ಟ್ಯಾಪ್ಮಿ ನಿರ್ದೇಶಕ ಪ್ರೊ. ಮಧುವೀರು ರಾಘವನ್ ಉಪಸ್ಥಿತರಿದ್ದರು. ಉಮಾಶಂಕರಿ, ರಾಜೀವ್ ಶಾ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ