ಆ್ಯಪ್ನಗರ

ರಾಜ್ಯದಲ್ಲಿ ಹೊಸ ಮೊಬೈಟ್‌ ಟಾವರ್‌ ನೀತಿ

ರಾಜ್ಯದಲ್ಲಿ ಹೊಸ ಮೊಬೈಲ್‌ ಟವರ್‌ ನೀತಿ ತರುವ ಸಂಬಂಧ ಸರಕಾರ ಆದೇಶ ಹೊರಡಿಸಿದೆ. ಇದರಿಂದ ಬೊಕ್ಕಸಕ್ಕೆ ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ.

Vijaya Karnataka 14 Jun 2019, 5:00 am
ಬೆಂಗಳೂರು : ರಾಜ್ಯದಲ್ಲಿ ಹೊಸ ಮೊಬೈಲ್‌ ಟವರ್‌ ನೀತಿ ತರುವ ಸಂಬಂಧ ಸರಕಾರ ಆದೇಶ ಹೊರಡಿಸಿದೆ. ಇದರಿಂದ ಬೊಕ್ಕಸಕ್ಕೆ ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ.
Vijaya Karnataka Web new mobile tower rule says u t khadar
ರಾಜ್ಯದಲ್ಲಿ ಹೊಸ ಮೊಬೈಟ್‌ ಟಾವರ್‌ ನೀತಿ


ಸುದ್ದಿಗೋಷ್ಠಿ ಉದ್ದೇಶಿಸಿ ಖಾಸಗಿ ಹೋಟಲ್‌ನಲ್ಲಿ ಗುರುವಾರ ಮಾತನಾಡಿದ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್‌,'' ಈಗಾಗಲೇ ಮೊಬೈಲ್‌ ಟವರ್‌ ಹಾಕಿಕೊಂಡಿರುವ ಸಂಸ್ಥೆಗಳು ಹೊಸ ಮಾರ್ಗಸೂಚಿಯನ್ನು 3 ತಿಂಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

''ಯಾವುದೇ ಮೊಬೈಲ್‌ ಟವರ್‌ಗಳು ಶಾಲಾ, ಕಾಲೇಜುಗಳಿಂದ 50 ಮೀಟರ್‌ ದೂರದಲ್ಲಿರಬೇಕು ಎಂಬ ನಿರ್ಬಂಧ ವಿಧಿಸಲಾಗುತ್ತಿದೆ. ಸದ್ಯಕ್ಕೆ ಇರುವ ಟವರ್‌ಗಳ ಸಂಬಂಧ ಸಮರ್ಪಕ ಮಾಹಿತಿಯೂ ಇಲ್ಲ. ಜತೆಗೆ ಆದಾಯವೂ ಸರಿಯಾಗಿ ಬರುತ್ತಿಲ್ಲ. ಹೊಸ ನೀತಿ ಈ ಸಮಸ್ಯೆ ಇತ್ಯರ್ಥ ಪಡಿಸಲಿದೆ. ಈ ನೀತಿ ತರಲು ಈಗಾಗಲೇ ಸರಕಾರಿ ಆದೇಶ ಹೊರಡಿಸಲಾಗಿದೆ,'' ಎಂದರು.


ಪ್ರಮುಖಾಂಶ

* 2ನೇ ಹಂತದ ನಗರಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆಗೆ ನಿಯಮ ತರಲಾಗುವುದು.

* ನಗರ ಸ್ಥಳೀಯ ಸಂಸ್ಥೆಗಳ ಆಸ್ತಿ ವರ್ಗಾವಣೆಗೆ ಇ-ಸ್ವತ್ತು ತಂತ್ರಾಂಶ ಅಳವಡಿಸಿಕೊಳ್ಳಲಾಗಿದ್ದು ಇದನ್ನು ಮನಪಾಗಳಿಗೂ ವಿಸ್ತರಿಸಲಾಗುವುದು.

* ನಗರ, ಪಟ್ಟಣದ ಕಟ್ಟಡಗಳ ಮೇಲೆ ಸೋಲಾರ್‌ ಪ್ಯಾನಲ್‌ ಅಳವಡಿಸಿಲು ಕಟ್ಟಡದ ಅನುಪಾತದಲ್ಲಿ (ಎಫ್‌ಎಆರ್‌) ವಿನಾಯಿತಿ.

* ವಾಯುಮಾಲಿನ್ಯ ನಿಯಂತ್ರಣಕ್ಕೆ ವಿದ್ಯುತ್‌ ಚಾಲಿತ ವಾಹನ, ರಿಕ್ಷಾಗಳಿಗೆ ಪ್ರೋತ್ಸಾಹಿಸಲು ನೀತಿ ತರಲಾಗುವುದು.

* ಕುಡಿಯುವ ನೀರಿಗೆ ಸಂಬಂಧಿಸಿದ ಡ್ಯಾಮ್‌ಗಳ ನಿರ್ವಹಣೆ ಮಾಡಲು ನಗರ ನೀರು ಸರಬರಾಜು ಮಂಡಳಿಗೆ ಸೂಚನೆ.

* ಒಳಚರಂಡಿ ಸೌಕರ್ಯದ ನಿರ್ವಹಣೆಯನ್ನೂ ಇಲಾಖೆ ಕೈಗೊಳ್ಳಲಿದೆ.

* ಒಳಚರಂಡಿಯಲ್ಲಿ ಸಂಗ್ರಹವಾದ ತ್ಯಾಜ್ಯ ಸಂಸ್ಕರಣೆಗೆ ಘಟಕ ನಿರ್ಮಿಸಲಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ