ಆ್ಯಪ್ನಗರ

ನಿರ್ಭಯಾ ಪ್ರಕರಣದ ಬಾಲಾಪರಾಧಿ ಈಗ ಬಾಣಸಿಗ, ಆಕೆ ಹತ್ತಿದ ಬಸ್‌ ನಿಲ್ದಾಣಕ್ಕಿನ್ನೂ ಕತ್ತಲು!

ನಿರ್ಭಯಾ ಪ್ರಕರಣದಲ್ಲಿ ಮೃಗೀಯ ವರ್ತನೆ ತೋರಿದ್ದ ಬಾಲಾಪರಾಧಿ ಮಾತ್ರ ತನಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲವೆಂಬಂತೆ ಕಾಲ ಕಳೆಯುತ್ತಿದ್ದಾನೆ. 2012ರ ಡಿಸೆಂಬರ್‌ 16 ರಂದು ರಾತ್ರಿ ನಡೆದ ಆ ಭಯಾನಕ ಘಟನೆಯನ್ನು ಒಂದು ‘ದುಸ್ವಪ್ನ’ದಂತೆ ಮರೆಯಲು ಯತ್ನಿಸುತ್ತಿರುವುದಾಗಿ ಆತ ಹೇಳಿದ್ದಾನೆ.

Vijaya Karnataka 7 Jan 2020, 8:57 pm

ಹೊಸದಿಲ್ಲಿ: ಅತ್ಯಾಚಾರಕ್ಕೆ ಗುರಿಯಾಗುವ ಮುನ್ನ ನಿರ್ಭಯಾ ಬಸ್‌ ಹತ್ತಿದ್ದ ದಕ್ಷಿಣ ದಿಲ್ಲಿಯ ಮುನಿರ್ಕಾ ಪ್ರದೇಶದ ಬಸ್‌ ನಿಲ್ದಾಣ ಈಗಲೂ ಕಗ್ಗತ್ತಲಲ್ಲಿಯೇ ಇದೆ. ಅತ್ಯಾಚಾರದ ಕುರಿತು ದೇಶಾದ್ಯಂತ ಸದ್ದು ಜೋರಾದಾಗ ಈ ಬಸ್‌ಸ್ಟಾಪ್‌ನಲ್ಲಿ ಸಿಸಿಟಿವಿ ಅಳವಡಿಸುವ ಮತ್ತು ಜಿಪಿಎಸ್‌ ಹಾಕುವ ಮಾತುಗಳು ರಾಜಕೀಯ ನಾಯಕರಿಂದ ಕೇಳಿಬಂದಿತ್ತು. ಆದರೆ ಯಾವುದೂ ಜಾರಿಗೆ ಬಂದಿಲ್ಲ.
Vijaya Karnataka Web Nirbhaya Case


ಅಲ್ಲದೇ, ರಾತ್ರಿ 9ರ ನಂತರ ಈ ಬಸ್‌ ನಿಲ್ದಾಣ ಅನಧಿಕೃತ ನಿಲ್ದಾಣ ಪ್ರದೇಶವಾಗಿ ಮಾರ್ಪಡುತ್ತಿದೆ ಎನ್ನುವುದು ಸ್ಥಳೀಯರ ಆರೋಪ. ‘‘ಆಟೋ ರಿಕ್ಷಾಗಳು ಭಾರಿ ಸಂಖ್ಯೆಯಲ್ಲಿ ನಿಂತಿದ್ದರೂ ಹೆಂಗಸರು ಮನೆಗೆ ಡ್ರಾಪ್‌ ಮಾಡಲು ಕರೆದಾಗ ಬರಲ್ಲ. ಇವತ್ತಿನ ನಮ್ಮ ಕೆಲಸದ ಅವಧಿ ಮುಗಿದಿದೆ ಎಂದು ಹರಟೆ ಹೊಡೆಯುತ್ತಾ ಕೂರುತ್ತಾರೆ. ನಡೆದು ಹೋದರೆ ಕೆಲವರು ಹಿಂಬಾಲಿಸಿ ಚುಡಾಯಿಸುತ್ತಾರೆ,’’ ಎಂದು ವಾಸ್ತವದ ಸ್ಥಿತಿಯ ಬಗ್ಗೆ ಆತಂಕ ಹೊರಹಾಕಿದ್ದಾರೆ.

2012ರ ನಿರ್ಭಯಾ ಪ್ರಕರಣದ ಟೈಮ್‌ಲೈನ್: 2020 ಜ.22ರಂದು 7 ಗಂಟೆಗೆ ನಾಲ್ವರಿಗೆ ಗಲ್ಲು

ಬಾಲಾಪರಾಧಿ ಈಗ ಬಾಣಸಿಗ

ನಿರ್ಭಯಾ ಪ್ರಕರಣದಲ್ಲಿ ಮೃಗೀಯ ವರ್ತನೆ ತೋರಿದ್ದ ಬಾಲಾಪರಾಧಿ ಮಾತ್ರ ತನಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲವೆಂಬಂತೆ ಕಾಲ ಕಳೆಯುತ್ತಿದ್ದಾನೆ. 2012ರ ಡಿಸೆಂಬರ್‌ 16 ರಂದು ರಾತ್ರಿ ನಡೆದ ಆ ಭಯಾನಕ ಘಟನೆಯನ್ನು ಒಂದು ‘ದುಸ್ವಪ್ನ’ದಂತೆ ಮರೆಯಲು ಯತ್ನಿಸುತ್ತಿರುವುದಾಗಿ ಆತ ಹೇಳಿದ್ದಾನೆ.

ಲೇಟ್‌ ಆದ್ರೂ ಫಿಕ್ಸ್‌ ಆಯ್ತು ಡೇಟ್: ‘ನಿರ್ಭಯಾ’ ಹೆತ್ತವರ ನಿಟ್ಟುಸಿರು, 'ವಿಳಂಬ'ಕ್ಕೆ ಹೋರಾಟಗಾರರ ಸಿಟ್ಟು

ಉತ್ತರ ಪ್ರದೇಶದ ಹೋಟೆಲ್‌ ಒಂದರಲ್ಲಿಅಡುಗೆ ಕೆಲಸ ಮಾಡುತ್ತಿರುವ ಆತನಿಗೆ ಈಗ 23 ವರ್ಷ. ಒಟ್ಟು ಆರು ಮಂದಿ ಕೃತ್ಯ ಎಸಗಿದ್ದರು. ಬಾಲಾಪರಾಧಿಯನ್ನು ಮೂರು ವರ್ಷ ಶಿಕ್ಷೆ ಅನುಭವಿಸಿದ ಬಳಿಕ ಬಿಡುಗಡೆ ಮಾಡಲಾಗಿದೆ. ಇನ್ನೊಬ್ಬ ಅಪರಾಧಿ ರಾಮ್‌ಸಿಂಗ್‌ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಖೇಶ್‌ (32), ಪವನ್‌ ಗುಪ್ತಾ (25), ವಿನಯ್‌ ಶರ್ಮಾ (26) ಮತ್ತು ಅಕ್ಷಯ್‌ಕುಮಾರ್‌ ಸಿಂಗ್‌ (31) ಗಲ್ಲಿಗೆ ಏರಲು ದಿನಗಳು ಸನ್ನಿಹಿತವಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ