ಆ್ಯಪ್ನಗರ

ಮೀನುಗಾರರ ಮನೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಭೇಟಿ, ಸಾಂತ್ವನ

ಸಚಿವೆ ಭೇಟಿ ಹಿನ್ನೆಲೆಯಲ್ಲಿ ಮನೆಗೆ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಯಿತು. ಬೆಳಗ್ಗೆ 8 ಗಂಟೆಯಿಂದಲೇ ಪೊಲೀಸರು ಸ್ಥಳದಲ್ಲಿ ಹಾಜರಿದ್ದು, ಶ್ವಾನದ ಮೂಲಕ ತಪಾಸಣೆ ಮಾಡಲಾಯಿತು.

Vijaya Karnataka Web 26 Mar 2019, 12:15 pm
ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ಕಣ್ಮರೆಯಾಗಿದ್ದ ಏಳು ಮಂದಿ ಮೀನುಗಾರರ ಪೈಕಿ ಮಲ್ಪೆ ಬಡನಿಡಿಯೂರಿನಲ್ಲಿರುವ ಇಬ್ಬರು ಮೀನುಗಾರರ ಮನೆಗೆ ಕೆಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಭೇಟಿಕೊಟ್ಟರು.
Vijaya Karnataka Web ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್‌


ಬೋಟ್ ಮಾಲೀಕ ಚಂದ್ರಶೇಖರ್ ಕೋಟ್ಯಾನ್ ಅವರ ಮನೆಗೆ ಮೊದಲು ಭೇಟಿ ನೀಡಿದ ಸಚಿವೆ ಬಳಿಕ ದಾಮೋದರ್ ಸಾಲ್ಯಾನ್ ಅವರ ಮನೆಗೆ ಭೇಟಿ ಕೊಟ್ಟು ಸಾಂತ್ವನ ಹೇಳಿದರು.

ಚಂದ್ರಶೇಖರ್ ಅವರ ಪತ್ನಿಗೆ ಅವರ ಸ್ವಾಂತನ‌ ಹೇಳಿ ಧೈರ್ಯ ತುಂಬಿದ ಸಚಿವೆ ಶೀಘ್ರವೇ ಪತ್ತೆ ಹಚ್ಚಿ ಸುದ್ದಿ ಮುಟ್ಟಿಸುವುದಾಗಿ ಭರವಸೆ ಕೊಟ್ಟರು.

ಸಚಿವೆ ಭೇಟಿ ಹಿನ್ನೆಲೆಯಲ್ಲಿ ಮನೆಗೆ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಯಿತು. ಬೆಳಗ್ಗೆ 8 ಗಂಟೆಯಿಂದಲೇ ಪೊಲೀಸರು ಸ್ಥಳದಲ್ಲಿ ಹಾಜರಿದ್ದು, ಶ್ವಾನದ ಮೂಲಕ ತಪಾಸಣೆ ಮಾಡಲಾಯಿತು.

ಹಾಲಿ ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಕೆ. ರಘಪತಿ ಭಟ್, ಲಾಲಾಜಿ ಆರ್.ಮೆಂಡನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಉಪಸ್ಥಿತರಿದ್ದರು.

ಕುಂದಾಪುರ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್, ಮಹಿಳಾ ಠಾಣೆಯ ಸಂಪತ್ ಕುಮಾರ್ ಭದ್ರತೆಯ ಮೇಲ್ವಿಚಾರಣೆ ನೋಡಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ