ಆ್ಯಪ್ನಗರ

ಇನ್ಮುಂದೆ ಸರಕಾರಿ ನೌಕರರ ವಿರುದ್ಧದ ಅನಾಮಧೇಯ ದೂರುಗಳ ತನಿಖೆ ನಡೆಸಲ್ಲ: ರಾಜ್ಯ ಸರಕಾರ

ದೂರುದಾರ ಅಧಿಕೃತ ದಾಖಲೆ ಒದಗಿಸಿದ ನಂತರ ಆರೋಪ ಮೇಲ್ನೋಟಕ್ಕೆ ಕಂಡು ಬಂದಲ್ಲಿ ಪ್ರಾಥಮಿಕ ತನಿಖೆಗೆ ಪರಿಗಣಿಸಲು ಅವಕಾಶ ನೀಡಲಾಗುವುದು. ಅನಾಮಧೇಯ ದೂರುಗಳ ತನಿಖೆ ನಡೆಸುವುದಿಲ್ಲ ಎಂದು ರಾಜ್ಯ ಸರಕಾರ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

Vijaya Karnataka Web 24 Feb 2021, 12:02 pm
ಬೆಂಗಳೂರು: ಸರಕಾರಿ ನೌಕರರ ವಿರುದ್ಧದ ಅನಾಮಧೇಯ ದೂರುಗಳನ್ನು ತನಿಖೆಗೆ ಒಳಪಡಿಸದಿರಲು ರಾಜ್ಯ ಸರಕಾರ ನಿರ್ಧಾರಿಸಿದೆ. ಸರಕಾರಿ ನೌಕರರ ವಿರುದ್ಧ ಅನಾಮಧೇಯ ಹೆಸರಿನಲ್ಲಿ ದೂರು ನೀಡುವ ಮೂಲಕ ಕಾನೂನು ದುರುಪಯೋಗಪಡಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರಕಾರ ತಿಳಿಸಿದೆ.
Vijaya Karnataka Web Vidhana Soudha
ವಿಧಾನಸೌಧ (ಸಂಗ್ರಹ ಚಿತ್ರ)


ಈ ಕುರಿತಾಗಿ ಅಧಿಕೃತ ಅದೇಶ ಪ್ರಕಟ ಮಾಡಿರುವ ರಾಜ್ಯ ಸರ್ಕಾರ, ಬೇನಾಮಿ ದೂರುಗಳನ್ನು ತನಿಖೆಗೆ ಒಳಪಡಿಸುವುದರಿಂದ ಸರಕಾರಿ ನೌಕರರಿಗೆ ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತದೆ. ಇದರಿಂದ ಆಡಳಿತಾತ್ಮಕ ಸಮಸ್ಯೆ ಹಾಗೂ ಸರ್ಕಾರಿ ಕೆಲಸ ಕಾರ್ಯಕ್ಕೆ ಅಡ್ಡಿಯಾಗಲಿದೆ.


ದೂರುದಾರ ಅಧಿಕೃತ ದಾಖಲೆ ಒದಗಿಸಿದ ನಂತರ ಆರೋಪ ಮೇಲ್ನೋಟಕ್ಕೆ ಕಂಡು ಬಂದಲ್ಲಿ ಪ್ರಾಥಮಿಕ ತನಿಖೆಗೆ ಪರಿಗಣಿಸಲು ಅವಕಾಶ ನೀಡಲಾಗುವುದು ಎಂದು ರಾಜ್ಯ ಸರಕಾರ ತಿಳಿಸಿದೆ. ಕೇಂದ್ರ ಸರಕಾರದ ರೀತಿಯಲ್ಲೇ ರಾಜ್ಯದಲ್ಲೂ ಈ ಹೊಸ ನಿಯಮವಿರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಅಂತರರಾಜ್ಯ ಪ್ರಯಾಣವನ್ನು ನಿಷೇಧಿಸಿಲ್ಲ, ಕೇರಳ ಆರೋಪಕ್ಕೆ ಸುಧಾಕರ್‌ ಸ್ಪಷ್ಟನೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ