ಬೆಂಗಳೂರು: ಮರಾಠ ಅಭಿವೃದ್ ನಿಗಮ ಸ್ಥಾಪನೆ ವಿರೋಸಿ ಕೆಲ ಕನ್ನಡ ಪರ ಸಂಘಟನೆಗಳು ಡಿ.5ರಂದು ಕರೆ ನೀಡಿರುವ ಕರ್ನಾಟಕ ಬಂದ್ಗೆ ನಾನಾ ಸಂಘಟನೆಗಳು ಕೇವಲ ನೈತಿಕ ಬೆಂಬಲ ವ್ಯಕ್ತಪಡಿಸಿವೆ.
ಕರ್ನಾಟಕ ಆಟೊರಿಕ್ಷಾ ಚಾಲಕರ ಸಂಘ, ಕರ್ನಾಟಕ ಖಾಸಗಿ ಸಾರಿಗೆ ಸಂಘ, ಕೆಎಸ್ಆರ್ಟಿಸಿ ನೌಕರರು ಮತ್ತು ಸಿಬ್ಬಂದಿ ಸಹಕಾರ ಸಂಘ, ಹೋಟೆಲ್ ಮಾಲೀಕರ ಸಂಘ, ಕರ್ನಾಟಕ ನವನಿರ್ಮಾಣ ಸೇನೆ ಸೇರಿದಂತೆ ನಾನಾ ಸಂಘಟನೆಗಳು ಬಂದ್ಗೆ ಅಧಿಕೃತ ಬೆಂಬಲ ನೀಡಲು ನಿರಾಕರಿಸಿವೆ.
ಹೀಗಾಗಿ, ಶನಿವಾರ ಸಾರಿಗೆ ಮತ್ತು ಹೋಟೆಲ್ ಉದ್ಯಮದಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ನಗರದಲ್ಲಿ ಅಂಗಡಿ ಮುಂಗಟ್ಟುಗಳು ತೆರೆಯಲಿದ್ದು, ಸಾರ್ವಜನಿಕರಿಗೆ ಸೇವೆ ನೀಡಲಿವೆ.
ಶನಿವಾರದ ಕರ್ನಾಟಕ ಬಂದ್ಗೆ ಬೆಂಬಲ ಇಲ್ಲ..! ಮೈಸೂರಿನ 15 ಸಂಘಟನೆಗಳ ನಿರ್ಧಾರ
''ರಾಜ್ಯ ಸರಕಾರ ಭಾಷೆಯಾಧಾರಿತ, ಜಾತಿಯಾದಾರಿತ ನಿಗಮ ಸ್ಥಾಪನೆ ಮಾಡಿರುವುದರಿಂದ, ಮುಂದಿನ ದಿನಗಳಲ್ಲಿ ಮತ್ತಷ್ಟು ಭಾಷೆಗಳು, ಜಾತಿಗಳ ನಿಗಮ ಸ್ಥಾಪನೆಯ ಬೇಡಿಕೆ ಹೆಚ್ಚಾಗುತ್ತದೆ. ಹೀಗಾಗಿ, ನಿಗಮ ಸ್ಥಾಪನೆಗೆ ತೋರಿಸುವ ಆಸಕ್ತಿಗಿಂತ ಈಗಾಗಲೇ ಸ್ಥಾಪಿತವಾಗಿರುವ ನಿಗಮಗಳಿಗೆ ಅನುದಾನ ನೀಡುವತ್ತ ಸರಕಾರ ಗಮನ ಕೊಡಬೇಕು. ಪದೇ ಪದೆ ಕರ್ನಾಟಕ ಬಂದ್ ಮಾಡುವುದರಿಂದ ಪರಿಹಾರ ದೊರೆಯುವುದಿಲ್ಲ. ಹಾಗಾಗಿ, ವಿಷಯಾಧಾರಿತವಾಗಿ ಬಂದ್ಗೆ ನೈತಿಕ ಬೆಂಬಲ ನೀಡಲಾಗುವುದು. ಆದರೆ, ಆಟೊ ರಿಕ್ಷಾಗಳು ಎಂದಿನಂತೆ ಕಾರ್ಯಚರಿಸಲಿವೆ,'' ಎಂದು ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎನ್. ಶ್ರೀನಿವಾಸ್ 'ವಿಕ'ಗೆ ತಿಳಿಸಿದರು.
‘ಡಿಸೆಂಬರ್ 5ರ ಕರ್ನಾಟಕ ಬಂದ್ಗೆ ಪ್ರೀತಿಯಿಂದ ಸಹಕರಿಸಿ’: ವಾಟಾಳ್ ನಾಗರಾಜ್ EXCLUSIVE ಸಂದರ್ಶನ
''ಇನ್ನು, ಲಾಕ್ಡೌನ್ನಿಂದಾಗಿ ಸತತ ಆರು ತಿಂಗಳು ಮುಚ್ಚಿದ್ದ ಹೋಟೆಲ್ಗಳು ಈಗಲೂ ಗ್ರಾಹಕರಿಲ್ಲದೆ ತೀವ್ರ ನಷ್ಟಕ್ಕೊಳಗಾಗಿವೆ. ಬಂದ್ ಹೆಸರಿನಲ್ಲಿ ಮತ್ತೆ ಹೋಟೆಲ್ ಮುಚ್ಚಿದರೆ ಇಡೀ ಉದ್ಯಮವೇ ಕುಸಿದು ಬಿಡುತ್ತದೆ. ಹೀಗಾಗಿ, ಬಂದ್ಗೆ ನೈತಿಕ ಬೆಂಬಲ ಘೋಷಿಸಿ ಹೋಟೆಲ್ ತೆರೆದು ಕಾರ್ಯನಿರ್ವಹಿಸಲಿವೆ,'' ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದ್ದಾರೆ. ''ಕರ್ನಾಟಕ ಬಂದ್ ಮಾಡುತ್ತಿರುವುದು ಯಾರ ವಿರುದ್ಧ ಎಂಬುದೇ ಸ್ಪಷ್ಟವಾಗಿಲ್ಲ. ಹೀಗಾಗಿ, ಕೆಎಸ್ಆರ್ಟಿಸಿ ಸ್ಟ್ಯಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್ನಿಂದ ಯಾವುದೇ ಬೆಂಬಲವಿಲ್ಲ,'' ಎಂದು ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಅನಂತ ಸುಬ್ಬರಾವ್ 'ವಿಕ'ಗೆ ತಿಳಿಸಿದ್ದಾರೆ.
ಕರ್ನಾಟಕ ಆಟೊರಿಕ್ಷಾ ಚಾಲಕರ ಸಂಘ, ಕರ್ನಾಟಕ ಖಾಸಗಿ ಸಾರಿಗೆ ಸಂಘ, ಕೆಎಸ್ಆರ್ಟಿಸಿ ನೌಕರರು ಮತ್ತು ಸಿಬ್ಬಂದಿ ಸಹಕಾರ ಸಂಘ, ಹೋಟೆಲ್ ಮಾಲೀಕರ ಸಂಘ, ಕರ್ನಾಟಕ ನವನಿರ್ಮಾಣ ಸೇನೆ ಸೇರಿದಂತೆ ನಾನಾ ಸಂಘಟನೆಗಳು ಬಂದ್ಗೆ ಅಧಿಕೃತ ಬೆಂಬಲ ನೀಡಲು ನಿರಾಕರಿಸಿವೆ.
ಹೀಗಾಗಿ, ಶನಿವಾರ ಸಾರಿಗೆ ಮತ್ತು ಹೋಟೆಲ್ ಉದ್ಯಮದಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ನಗರದಲ್ಲಿ ಅಂಗಡಿ ಮುಂಗಟ್ಟುಗಳು ತೆರೆಯಲಿದ್ದು, ಸಾರ್ವಜನಿಕರಿಗೆ ಸೇವೆ ನೀಡಲಿವೆ.
ಶನಿವಾರದ ಕರ್ನಾಟಕ ಬಂದ್ಗೆ ಬೆಂಬಲ ಇಲ್ಲ..! ಮೈಸೂರಿನ 15 ಸಂಘಟನೆಗಳ ನಿರ್ಧಾರ
''ರಾಜ್ಯ ಸರಕಾರ ಭಾಷೆಯಾಧಾರಿತ, ಜಾತಿಯಾದಾರಿತ ನಿಗಮ ಸ್ಥಾಪನೆ ಮಾಡಿರುವುದರಿಂದ, ಮುಂದಿನ ದಿನಗಳಲ್ಲಿ ಮತ್ತಷ್ಟು ಭಾಷೆಗಳು, ಜಾತಿಗಳ ನಿಗಮ ಸ್ಥಾಪನೆಯ ಬೇಡಿಕೆ ಹೆಚ್ಚಾಗುತ್ತದೆ. ಹೀಗಾಗಿ, ನಿಗಮ ಸ್ಥಾಪನೆಗೆ ತೋರಿಸುವ ಆಸಕ್ತಿಗಿಂತ ಈಗಾಗಲೇ ಸ್ಥಾಪಿತವಾಗಿರುವ ನಿಗಮಗಳಿಗೆ ಅನುದಾನ ನೀಡುವತ್ತ ಸರಕಾರ ಗಮನ ಕೊಡಬೇಕು. ಪದೇ ಪದೆ ಕರ್ನಾಟಕ ಬಂದ್ ಮಾಡುವುದರಿಂದ ಪರಿಹಾರ ದೊರೆಯುವುದಿಲ್ಲ. ಹಾಗಾಗಿ, ವಿಷಯಾಧಾರಿತವಾಗಿ ಬಂದ್ಗೆ ನೈತಿಕ ಬೆಂಬಲ ನೀಡಲಾಗುವುದು. ಆದರೆ, ಆಟೊ ರಿಕ್ಷಾಗಳು ಎಂದಿನಂತೆ ಕಾರ್ಯಚರಿಸಲಿವೆ,'' ಎಂದು ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎನ್. ಶ್ರೀನಿವಾಸ್ 'ವಿಕ'ಗೆ ತಿಳಿಸಿದರು.
‘ಡಿಸೆಂಬರ್ 5ರ ಕರ್ನಾಟಕ ಬಂದ್ಗೆ ಪ್ರೀತಿಯಿಂದ ಸಹಕರಿಸಿ’: ವಾಟಾಳ್ ನಾಗರಾಜ್ EXCLUSIVE ಸಂದರ್ಶನ
''ಇನ್ನು, ಲಾಕ್ಡೌನ್ನಿಂದಾಗಿ ಸತತ ಆರು ತಿಂಗಳು ಮುಚ್ಚಿದ್ದ ಹೋಟೆಲ್ಗಳು ಈಗಲೂ ಗ್ರಾಹಕರಿಲ್ಲದೆ ತೀವ್ರ ನಷ್ಟಕ್ಕೊಳಗಾಗಿವೆ. ಬಂದ್ ಹೆಸರಿನಲ್ಲಿ ಮತ್ತೆ ಹೋಟೆಲ್ ಮುಚ್ಚಿದರೆ ಇಡೀ ಉದ್ಯಮವೇ ಕುಸಿದು ಬಿಡುತ್ತದೆ. ಹೀಗಾಗಿ, ಬಂದ್ಗೆ ನೈತಿಕ ಬೆಂಬಲ ಘೋಷಿಸಿ ಹೋಟೆಲ್ ತೆರೆದು ಕಾರ್ಯನಿರ್ವಹಿಸಲಿವೆ,'' ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದ್ದಾರೆ. ''ಕರ್ನಾಟಕ ಬಂದ್ ಮಾಡುತ್ತಿರುವುದು ಯಾರ ವಿರುದ್ಧ ಎಂಬುದೇ ಸ್ಪಷ್ಟವಾಗಿಲ್ಲ. ಹೀಗಾಗಿ, ಕೆಎಸ್ಆರ್ಟಿಸಿ ಸ್ಟ್ಯಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್ನಿಂದ ಯಾವುದೇ ಬೆಂಬಲವಿಲ್ಲ,'' ಎಂದು ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಅನಂತ ಸುಬ್ಬರಾವ್ 'ವಿಕ'ಗೆ ತಿಳಿಸಿದ್ದಾರೆ.