ನಿಫಾಗೂ ಮಾವಿಗೂ ಸಂಬಂಧ ಇಲ್ಲ: ಕೃಷ್ಣಬೈರೇಗೌಡ
ಬೆಲೆ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದ ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು ತಕ್ಷಣವೇ ರಾಜ್ಯ ಸರಕಾರ ಅವರ ನೆರವಿಗೆ ಮುಂದಾಗಬೇಕೆಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ ಸರಕಾರಕ್ಕೆ ಸೂಚನೆ ನೀಡಿದರು.
Vijaya Karnataka 7 Jul 2018, 1:00 pm
ಬೆಂಗಳೂರು: ಬೆಲೆ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದ ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು ತಕ್ಷಣವೇ ರಾಜ್ಯ ಸರಕಾರ ಅವರ ನೆರವಿಗೆ ಮುಂದಾಗಬೇಕೆಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ ಸರಕಾರಕ್ಕೆ ಸೂಚನೆ ನೀಡಿದರು.
ಸದನದಲ್ಲಿ ಸ್ವತಃ ಈ ವಿಷಯ ಪ್ರಸ್ತಾಪಿಸಿದ ಅವರು ‘‘ಮಾವು ಬೆಳೆಗೆ ಈ ಸಲ ಕೆಟ್ಟ ರೋಗ ಬಂದು ರೈತರು ರಸ್ತೆ ಬದಿಗೆ ತಂದು ಸುರಿಯುತ್ತಿದ್ದಾರೆ. ಈ ಮಧ್ಯೆ ನೆರೆಯ ಆಂಧ್ರಪ್ರದೇಶದಲ್ಲಿ ಉತ್ತಮ ಫಸಲು ಬಂದಿದ್ದರಿಂದ ಬೆಲೆಯೂ ಕುಸಿದಿದೆ. ಹೀಗಾಗಿ ಅಧಿವೇಶನ ಮುಗಿಯುವುದರೊಳಗೆ ಬೆಳೆಗಾರರ ನೆರವಿಗೆ ಬರಬೇಕು,’’ಎಂದು ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಅವರಿಗೆ ಮನವಿ ಮಾಡಿದರು. ಬಿಜೆಪಿಯ ನೆಹರು ಓಲೇಕಾರ್ ಸಹ ಮಾವು ಬೆಳೆಗಾರರ ಸಂಕಷ್ಟಗಳ ಬಗ್ಗೆ ಸದನದ ಗಮನ ಸೆಳೆದರು.
ತಕ್ಷಣವೇ ಎದ್ದು ನಿಂತ ಸಚಿವ ಕೃಷ್ಣಬೈರೇಗೌಡ,‘‘ಮಾವಿನ ಹಣ್ಣಿಗೂ ನಿಫಾಗೂ ನಂಟು ಹಾಕಿದ್ದರಿಂದ ರೈತರು ಪರಿತಪಿಸುತ್ತಿದ್ದಾರೆ. ಈ ರೋಗಕ್ಕೂ ಮಾವಿಗೂ ಯಾವುದೇ ಸಂಬಂಧ ಇಲ್ಲ. ಆದರೂ ಮಾವು ಬೆಲೆ ಕುಸಿದಿದೆ. ತಪ್ಪು ಮಾಹಿತಿ ಹಾಗೂ ವೈಜ್ಞಾನಿಕ ಆಧಾರವಿಲ್ಲದೆ ವರದಿಗಳು ಬರುತ್ತಿವೆ. ಮಾವು ಬಗ್ಗೆ ಉಂಟಾಗಿರುವ ತಪ್ಪು ಗ್ರಹಿಕೆ ದೂರವಾಗಬೇಕು,’’ ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರ ನೀಡಿದ ಆರೋಗ್ಯ ಸಚಿವ ಶಿವಾನಂದ ಪಾಟೀಲ್,‘‘ನಿಫಾ ವೈರಸ್ ರಾಜ್ಯದಲ್ಲಿ ಹೆಚ್ಚಾಗಿ ಇಲ್ಲ ಎಂದು ಸರಕಾರಕ್ಕೆ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಇಲಾಖೆಯ ವೆಬ್ಸೈಟ್ನಲ್ಲೂ ಪ್ರಕಟಿಸಲಾಗಿದೆ. ಅಧಿಕೃತ ಪ್ರಕಟಣೆ ನೀಡಿದರೂ ಅಷ್ಟೊಂದು ಪ್ರಚಾರ ಸಿಗಲಿಲ್ಲ,’’ಎಂದು ಬೇಸರ ವ್ಯಕ್ತಪಡಿಸಿದರು.
ಇದಕ್ಕೆ ದನಿಗೂಡಿಸಿದ ಸ್ಪೀಕರ್ ಅವರು ‘‘ನೀವೆಲ್ಲಾ ಈ ರೀತಿ ಮಾತನಾಡಬಾರದು.ಅವರು ಬೇಕಾದಂತೆ ಬರೆಯುತ್ತಾರೆ. ಅವರನ್ನು ನಾವು ಕೇಳಬಾರದು. ಮಾಧ್ಯಮಗಳು ತಮ್ಮ ಜವಾಬ್ದಾರಿಯ ಇತಿಮಿತಿ ಅರಿತು ಕೆಲಸ ಮಾಡಬೇಕು,’’ ಎಂದು ಹೇಳಿದರು.
ಸದನದಲ್ಲಿ ಸ್ವತಃ ಈ ವಿಷಯ ಪ್ರಸ್ತಾಪಿಸಿದ ಅವರು ‘‘ಮಾವು ಬೆಳೆಗೆ ಈ ಸಲ ಕೆಟ್ಟ ರೋಗ ಬಂದು ರೈತರು ರಸ್ತೆ ಬದಿಗೆ ತಂದು ಸುರಿಯುತ್ತಿದ್ದಾರೆ. ಈ ಮಧ್ಯೆ ನೆರೆಯ ಆಂಧ್ರಪ್ರದೇಶದಲ್ಲಿ ಉತ್ತಮ ಫಸಲು ಬಂದಿದ್ದರಿಂದ ಬೆಲೆಯೂ ಕುಸಿದಿದೆ. ಹೀಗಾಗಿ ಅಧಿವೇಶನ ಮುಗಿಯುವುದರೊಳಗೆ ಬೆಳೆಗಾರರ ನೆರವಿಗೆ ಬರಬೇಕು,’’ಎಂದು ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಅವರಿಗೆ ಮನವಿ ಮಾಡಿದರು. ಬಿಜೆಪಿಯ ನೆಹರು ಓಲೇಕಾರ್ ಸಹ ಮಾವು ಬೆಳೆಗಾರರ ಸಂಕಷ್ಟಗಳ ಬಗ್ಗೆ ಸದನದ ಗಮನ ಸೆಳೆದರು.
ತಕ್ಷಣವೇ ಎದ್ದು ನಿಂತ ಸಚಿವ ಕೃಷ್ಣಬೈರೇಗೌಡ,‘‘ಮಾವಿನ ಹಣ್ಣಿಗೂ ನಿಫಾಗೂ ನಂಟು ಹಾಕಿದ್ದರಿಂದ ರೈತರು ಪರಿತಪಿಸುತ್ತಿದ್ದಾರೆ. ಈ ರೋಗಕ್ಕೂ ಮಾವಿಗೂ ಯಾವುದೇ ಸಂಬಂಧ ಇಲ್ಲ. ಆದರೂ ಮಾವು ಬೆಲೆ ಕುಸಿದಿದೆ. ತಪ್ಪು ಮಾಹಿತಿ ಹಾಗೂ ವೈಜ್ಞಾನಿಕ ಆಧಾರವಿಲ್ಲದೆ ವರದಿಗಳು ಬರುತ್ತಿವೆ. ಮಾವು ಬಗ್ಗೆ ಉಂಟಾಗಿರುವ ತಪ್ಪು ಗ್ರಹಿಕೆ ದೂರವಾಗಬೇಕು,’’ ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರ ನೀಡಿದ ಆರೋಗ್ಯ ಸಚಿವ ಶಿವಾನಂದ ಪಾಟೀಲ್,‘‘ನಿಫಾ ವೈರಸ್ ರಾಜ್ಯದಲ್ಲಿ ಹೆಚ್ಚಾಗಿ ಇಲ್ಲ ಎಂದು ಸರಕಾರಕ್ಕೆ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಇಲಾಖೆಯ ವೆಬ್ಸೈಟ್ನಲ್ಲೂ ಪ್ರಕಟಿಸಲಾಗಿದೆ. ಅಧಿಕೃತ ಪ್ರಕಟಣೆ ನೀಡಿದರೂ ಅಷ್ಟೊಂದು ಪ್ರಚಾರ ಸಿಗಲಿಲ್ಲ,’’ಎಂದು ಬೇಸರ ವ್ಯಕ್ತಪಡಿಸಿದರು.
ಇದಕ್ಕೆ ದನಿಗೂಡಿಸಿದ ಸ್ಪೀಕರ್ ಅವರು ‘‘ನೀವೆಲ್ಲಾ ಈ ರೀತಿ ಮಾತನಾಡಬಾರದು.ಅವರು ಬೇಕಾದಂತೆ ಬರೆಯುತ್ತಾರೆ. ಅವರನ್ನು ನಾವು ಕೇಳಬಾರದು. ಮಾಧ್ಯಮಗಳು ತಮ್ಮ ಜವಾಬ್ದಾರಿಯ ಇತಿಮಿತಿ ಅರಿತು ಕೆಲಸ ಮಾಡಬೇಕು,’’ ಎಂದು ಹೇಳಿದರು.