ಆ್ಯಪ್ನಗರ

ಇಲ್ಲಿ ದುಡ್ಡಿಲ್ಲದೆ ಯಾರೂ ಗೆಲ್ಲಲು ಸಾಧ್ಯವಿಲ್ಲ: ರಾಜಕೀಯದ ಸ್ಥಿತಿಗತಿ ಬಿಡಿಸಿಟ್ಟ ಹೊರಟ್ಟಿ

ಬೆಂಗಳೂರು: ''ರಾಜಕೀಯದಲ್ಲಿ ಮೌಲ್ಯಗಳು ಮರೆಯಾಗಿವೆ. ಹಣ ಖರ್ಚು ಮಾಡದೆ ಯಾರೊಬ್ಬರೂ ಪ್ರಾಮಾಣಿಕವಾಗಿ ಗೆದ್ದು ಬರಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ, ನೈತಿಕತೆಗೆ ಬೆಲೆಯೇ ಇಲ್ಲ'' ಎಂದು ವಿಧಾನ ಪರಿಷತ್‌ನ ಜೆಡಿಎಸ್‌ ನಾಯಕ ಬಸವರಾಜ ಹೊರಟ್ಟಿ ಹೇಳಿದರು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ''ಸ್ವಾಮೀಜಿಗಳು ಸಿಎಂಗೆ ಇಂಥವರೇ ಸಂಪುಟದಲ್ಲಿರಬೇಕು ಎಂದು ಡಿಕ್ಟೇಟ್‌ ಮಾಡುತ್ತಿದ್ದಾರೆ. ಸ್ವಾಮೀಜಿಗಳೇ ಎಲ್ಲಾ ರಾಜಕೀಯ ಮಾಡುತ್ತಾ ವಿಧಾನಸೌಧಕ್ಕೆ ಬರುತ್ತಿದ್ದಾರೆ. ಹಾಗಾಗಿ ಇನ್ನು ಜನಪ್ರತಿನಿಧಿಗಳು ಮಠಗಳನ್ನರಸಿ ಹೋಗಬೇಕಾಗುತ್ತದೆ'' ಎಂದು ಹೇಳಿದರು.

Vijaya Karnataka Web 20 Feb 2020, 10:23 pm
ಬೆಂಗಳೂರು: ''ರಾಜಕೀಯದಲ್ಲಿ ಮೌಲ್ಯಗಳು ಮರೆಯಾಗಿವೆ. ಹಣ ಖರ್ಚು ಮಾಡದೆ ಯಾರೊಬ್ಬರೂ ಪ್ರಾಮಾಣಿಕವಾಗಿ ಗೆದ್ದು ಬರಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ, ನೈತಿಕತೆಗೆ ಬೆಲೆಯೇ ಇಲ್ಲ'' ಎಂದು ವಿಧಾನ ಪರಿಷತ್‌ನ ಜೆಡಿಎಸ್‌ ನಾಯಕ ಬಸವರಾಜ ಹೊರಟ್ಟಿ ಹೇಳಿದರು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ''ಸ್ವಾಮೀಜಿಗಳು ಸಿಎಂಗೆ ಇಂಥವರೇ ಸಂಪುಟದಲ್ಲಿರಬೇಕು ಎಂದು ಡಿಕ್ಟೇಟ್‌ ಮಾಡುತ್ತಿದ್ದಾರೆ. ಸ್ವಾಮೀಜಿಗಳೇ ಎಲ್ಲಾ ರಾಜಕೀಯ ಮಾಡುತ್ತಾ ವಿಧಾನಸೌಧಕ್ಕೆ ಬರುತ್ತಿದ್ದಾರೆ. ಹಾಗಾಗಿ ಇನ್ನು ಜನಪ್ರತಿನಿಧಿಗಳು ಮಠಗಳನ್ನರಸಿ ಹೋಗಬೇಕಾಗುತ್ತದೆ'' ಎಂದು ಹೇಳಿದರು.
Vijaya Karnataka Web no one can win here without the money basavaraj horatti explains status quo of politics
ಇಲ್ಲಿ ದುಡ್ಡಿಲ್ಲದೆ ಯಾರೂ ಗೆಲ್ಲಲು ಸಾಧ್ಯವಿಲ್ಲ: ರಾಜಕೀಯದ ಸ್ಥಿತಿಗತಿ ಬಿಡಿಸಿಟ್ಟ ಹೊರಟ್ಟಿ



​‘ಆಪರೇಷನ್‌ ಕಮಲದ ಹೆಸರಿನಲ್ಲಿ ಬಿಜೆಪಿ ರಾಜಕೀಯವನ್ನೇ ಕುಲಗೆಡಿಸಿದೆ'

''ಬಿಜೆಪಿ ಆಪರೇಷನ್‌ ಕಮಲದ ಹೆಸರಿನಲ್ಲಿ ರಾಜಕೀಯವನ್ನೇ ಕುಲಗೆಡಿಸಿದೆ'' ಎಂದು ಆರೋಪಿಸಿದ ಹೊರಟ್ಟಿ, ''ಇಡೀ ವ್ಯವಸ್ಥೆ ಹಾಳಾಗಿದೆ. ದುಡ್ಡಿಲ್ಲದೆ ಯಾರೊಬ್ಬರೂ ಪ್ರಾಮಾಣಿಕವಾಗಿ ಗೆದ್ದು ಬರುವ ಸ್ಥಿತಿಯಲ್ಲಿಲ್ಲ. ಜನರಿಗೆ ಆಮಿಷವೊಡ್ಡಿ ಗೆದ್ದು ಬಂದು ಟೋಪಿ ಹಾಕಿಕೊಳ್ಳುವ ಜನಪ್ರತಿನಿಧಿಗಳು ನಂತರ ಅದೇ ಜನರಿಗೆ ಟೋಪಿ ಹಾಕಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ,'' ಎಂದರು.


'ಸಿಮಿ' ರೂಪಾಂತರ ಸಂಘಟನೆಗಳಿಗೆ ಬೆಂಬಲ ಸಲ್ಲದು, ಪ್ರತಿಪಕ್ಷಗಳಿಗೆ ಗೃಹ ಸಚಿವ ಬೊಮ್ಮಾಯಿ ತಾಕೀತು

‘ಬರೀ ದ್ವೇಷವೇ ಎದ್ದು ಕಾಣುತ್ತಿದೆ’

''ಹಿಂದೆ ರಾಮಕೃಷ್ಣ ಹೆಗಡೆ, ಗುಂಡೂರಾವ್‌, ಜೆಎಚ್‌ ಪಟೇಲ್‌ ಅವರಂತಹವರು ಅಧಿಕಾರದಲ್ಲಿದ್ದಾಗ ರಾಜಕೀಯ ಹೇಗಿತ್ತು? ಶಾಸಕರು, ಮಂತ್ರಿಗಳ ನಡುವೆ ಎಷ್ಟು ಆತ್ಮೀಯತೆ, ಪ್ರೀತಿ, ಸ್ನೇಹದ ಬಾಂಧವ್ಯವಿತ್ತು. ಒಬ್ಬರು ಇನ್ನೊಬ್ಬರನ್ನು ದ್ವೇಷಿಸುತ್ತಿರಲಿಲ್ಲ. ಆದರೆ ಈಗ ಒಬ್ಬರ ಮುಖ ನೋಡಿದರೆ ಇನ್ನೊಬ್ಬರಿಗೆ ಆಗುವುದಿಲ್ಲ, ಬರೀ ದ್ವೇಷವೇ ಎದ್ದು ಕಾಣುತ್ತಿದೆ,'' ಎಂದು ವಿಷಾದಿಸಿದರು.


ನನ್ನ ಸ್ಥಿತಿ ನಿಮಗೆ ಬಾರದಿರಲಿ: ಕಾಗೇರಿಗೆ ರಮೇಶ್‌ ಕುಮಾರ್‌ ಕಿವಿಮಾತು

​ಬಿಎಸ್‌ವೈ ರಾಜಾಹುಲಿ ಅಲ್ಲ'ಪಂಜರದ ಹುಲಿ'..!

''ಯಡಿಯೂರಪ್ಪ ಅವರನ್ನು ರಾಜಾಹುಲಿ ಎಂದು ಹೇಳುತ್ತಿದ್ದಾರೆ. ಆದರೆ ಮೂಲ ಬಿಜೆಪಿಯವರು ಮತ್ತು ವಲಸಿಗರ ಕಾಟದಲ್ಲಿಅವರು 'ಪಂಜರದ ಹುಲಿ'ಯಾಗಿದ್ದಾರೆ,'' ಎಂದು ಹೊರಟ್ಟಿ ಛೇಡಿಸಿದರು.


“ಮೊದಲು ಇಬ್ಬರನ್ನು ಡಿಸಿಎಂ ಮಾಡಿದ ಕೀರ್ತಿ ಹೊಂದಿದ್ದ ಬಿಜೆಪಿ ಈಗ ಮೂವರು ಡಿಸಿಎಂಗಳನ್ನು ಹೊಂದಿದೆ. ಕನಿಷ್ಟ ಐವರು ಡಿಸಿಎಂಗಳನ್ನು ಮಾಡದೇ ಇದ್ದರೆ ಬಿಜೆಪಿ ಸರಕಾರ ಉಳಿಯದ ಸ್ಥಿತಿ ಇದೆ'' ಎಂದು ಬಿಜೆಪಿಯೊಳಗಿನ ಅಸಮಾಧಾನವನ್ನೂ ಅವರು ಸದನದ ಮುಂದಿಟ್ಟರು.

​ಸುವರ್ಣಸೌಧ ಈಗ ಭೂತ ಬಂಗಲೆ!

''ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ನೆರವಾಗಲಿ ಎನ್ನುವ ಉದ್ದೇಶದಿಂದ ಸುಮಾರು 500 ಕೋಟಿ ರೂ. ಖರ್ಚು ಮಾಡಿ ಬೆಳಗಾವಿಯಲ್ಲಿ ನಿರ್ಮಿಸಿರುವ 'ಸುವರ್ಣ ಸೌಧ' ಈಗ ಭೂತ ಬಂಗಲೆಯಾಗಿದ್ದು, ಅದೇ ಎಲ್ಲಾ ಸಮಸ್ಯೆಗಳಿಗೆ ಮೂಲವಾಗಿದೆ,'' ಎಂದು ಹೊರಟ್ಟಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ