ಆ್ಯಪ್ನಗರ

ಕಾಂಗ್ರೆಸ್‌ನಿಂದ ಯಾವುದೇ ಯಾತ್ರೆ ಉದ್ದೇಶ ಇಲ್ಲ: ಸಿಎಂ

ಜೆಡಿಎಸ್‌ ಮತ್ತು ಬಿಜೆಪಿಗೆ ಈಗ ಜನರ ಮುಂದೆ ಹೋಗಲು ಮನಸಾಗಿದೆ. ನಾವು ಸಾಧನೆಗಳಿಂದಲೇ ಜನರನ್ನು ತಲುಪುತ್ತೇವೆ ಎಂದಿದ್ದಾರೆ ಸಿದ್ದರಾಮಯ್ಯ

Vijaya Karnataka Web 9 Nov 2017, 6:37 pm
ಬಾಗಲಕೋಟ: ಬಿಜೆಪಿ ಮತ್ತು ಜೆಡಿಎಸ್‌ ಚುನಾವಣೆ ಹಿನ್ನೆಲೆಯಲ್ಲಿ ಯಾತ್ರೆಗಳನ್ನು ಕೈಗೊಂಡಿದೆ. ಆದರೆ ಕಾಂಗ್ರೆಸ್‌ ನಿಂದ ಯಾತ್ರೆ ಹಮ್ಮಿಕೊಳ್ಳುವ ಉದ್ದೇಶವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Vijaya Karnataka Web no rally from congress cm
ಕಾಂಗ್ರೆಸ್‌ನಿಂದ ಯಾವುದೇ ಯಾತ್ರೆ ಉದ್ದೇಶ ಇಲ್ಲ: ಸಿಎಂ


ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿಯಲ್ಲಿ ಸಂಗಮೇಶ್ವರ ಮಹಾರಾಜರ ಪುಣ್ಯತಿಥಿಯಲ್ಲಿ ಭಾಗವಹಿಸುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿಯವರದ್ದು ನಾಲ್ಕು ವರ್ಷದಲ್ಲಿ ಸಾಧನೆಯೂ ಇಲ್ಲ ವಿಕಾಸವೂ ಇಲ್ಲ. ಇನ್ನು ಜೆಡಿಎಸ್‌ನಿಂದಲೂ ಯಾವುದೇ ಸಾಧನೆ ಇಲ್ಲ. ಆದರೂ ಜೆಡಿಎಸ್‌ ನಾಯಕರು ವಿಕಾಸ ಯಾತ್ರೆ ಎನ್ನುತ್ತಿದ್ದಾರೆ. ನಮ್ಮ ಸರಕಾರದ ಸಾಧನೆಗಳನ್ನು ನಾವು ಜನರ ಎದುರಿಗೆ ಇಡುತ್ತೇವೆ ಎಂದರು.

ಬಿಜೆಪಿಯವರು ಅಧಿವೇಶನ ಕ್ಕೆ ಮುತ್ತಿಗೆ ಹಾಕುವ ಮೊದಲು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲ ಮನ್ನಾ ಮಾಡಿಸಲಿ. ಸಂಸತ್ ಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಿ ಎಂದು ತಿರುಗೇಟು ನೀಡಿದರು.

ಜೆಡಿಎಸ್ ಮುಗಿಸಲು ಸಿದ್ದರಾಮಯ್ಯ ಸ್ಕೆಚ್ ಹಾಕಿದ್ದಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಉತ್ತರ ನೀಡಿದ ಅವರು ' ಪಕ್ಷದ ಅಧ್ಯಕ್ಷ ನಾಗಿ ದುಡಿದ ನನ್ನನ್ನು ಪಕ್ಷದಿಂದ ಕಿತ್ತು ಹಾಕಲಾಯಿತು. ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದಾರೆ' ಎಂದರು.

No Rally from Congress: CM

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ