ಆ್ಯಪ್ನಗರ

20 ವರ್ಷ ಬಾಡಿಗೆ ನೀಡದವರಿಂದ ಮಾಲೀಕರ ಕೈ ಸೇರಿದ ಜಾಗ

ಕೊಪ್ಪದಲ್ಲಿ ಇಪ್ಪತ್ತು ವರ್ಷದಿಂದ ಬಾಡಿಗೆ ನೀಡದೆ ಕ್ಯಾಂಟೀನ್‌ ನಡೆಸುತ್ತಿದ್ದವರಿಂದ ಜಾಗ ಈಗ ನಿಜವಾದ ಮಾಲೀಕರ ಕೈ ಸೇರಿದೆ.

Vijaya Karnataka Web 13 Jul 2018, 12:50 pm
ಬೆಂಗಳೂರು: ಕೊಪ್ಪದಲ್ಲಿ ಇಪ್ಪತ್ತು ವರ್ಷದಿಂದ ಬಾಡಿಗೆ ನೀಡದೆ ಕ್ಯಾಂಟೀನ್‌ ನಡೆಸುತ್ತಿದ್ದವರಿಂದ ಜಾಗ ಈಗ ನಿಜವಾದ ಮಾಲೀಕರ ಕೈ ಸೇರಿದೆ. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌ 1997ರಿಂದ ಬಾಡಿಗೆ ಕೊಡದೆ ಅನುಭವಿಸುತ್ತಿದ್ದ ಆಸ್ತಿಯನ್ನು ಸಂಬಂಧಿಸಿದ ಮಾಲೀಕರಿಗೆ ನೀಡುವಂತೆ ಆದೇಶಿಸಿದೆ.
Vijaya Karnataka Web court jpge


ವಿದ್ಯಾ ಮಹಿಳಾ ಸಮಾಜದ ಮಾಲೀಕತ್ವದಲ್ಲಿದ್ದ ಜಾಗವನ್ನು ಕ್ಯಾಂಟೀನ್‌ ನಡೆಸುವುದಕ್ಕಾಗಿ 1990ರಲ್ಲಿ ನಾರಾಯಣ ಶೆಟ್ಟಿ ಎಂಬವರಿಗೆ ಬಾಡಿಗೆಗೆ ನೀಡಲಾಗಿತ್ತು. ಆದರೆ ಅವರು 1997 ರಿಂದ ಬಾಡಿಗೆ ನೀಡಿಲ್ಲ. ಈ ಬಗ್ಗೆ ಮಹಿಳಾ ಸಮಾಜ ನೀಡಿದ್ದ ದೂರು ಆಧರಿಸಿ 1997ರಿಂದ ಕೆಳ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತ ಬಂದಿದೆ. 2012ರಲ್ಲಿ ಪ್ರಕರಣ ಹೈಕೋರ್ಟ್‌ಮೆಟ್ಟಿಲೇರಿತ್ತು. . ಆದರೆ ಈ ಆಸ್ತಿ ಸರಕಾರಕ್ಕೆ ಸೇರಿದ್ದು, ಸಮಾಜದ್ದು ಅಲ್ಲ ಎಂದು ಕ್ಯಾಂಟೀನ್‌ ನಡೆಸುತ್ತಿದ್ದ ನಾರಾಯಣ ಶೆಟ್ಟಿ ಕುಟುಂಬ ವಾದಿಸಿದೆ. ನಾರಾಯಣ ಶೆಟ್ಟಿ ಹಿಂದೆಯೇ ತೀರಿಕೊಂಡಿದ್ದರಿಂದ ಅವರ ಪತ್ನಿ ಮತ್ತು ಪುತ್ರಿಯರು ಕಾನೂನು ಹೋರಾಟ ನಡೆಸುತ್ತಿದ್ದರು.

ಈ ಹಿಂದೆ ವಿಚಾರಣಾ ನ್ಯಾಯಾಲಯವು ಜಾಗವನ್ನು ತೆರವುಗೊಳಿಸುವಂತೆ ನಾರಾಯಣ ಶೆಟ್ಟಿಗೆ ಆದೇಶಿಸುವ ಜತೆಗೆ ಬಾಕಿ ಇರುವ ಬಾಡಿಗೆಯನ್ನು ಬಡ್ಡಿ ಸಮೇತ ನೀಡುವಂತೆ ಹೇಳಿತ್ತು. ಇದನ್ನು ಪ್ರಶ್ನಿಸಿ ನಾರಾಯಣ ಶೆಟ್ಟಿ ತ್ವರಿತ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಆ ಮನವಿಯನ್ನು ತಿರಸ್ಕರಿಸಿತ್ತು. ಹೀಗಾಗಿ ನಾರಾಯಣ ಶೆಟ್ಟಿ ಹೈಕೋರ್ಟ್‌ಗೆ ದೂರು ನೀಡಿದ್ದರು.

ಪ್ರಕರಣವನ್ನು ಪರಿಶೀಲಿಸಿದ ಹೈಕೋರ್ಟ್, ಆಸ್ತಿಯನ್ನು ನಿಜವಾದ ಮಾಲೀಕರಿಗೆ ಹಸ್ತಾಂತರಿಸುವಂತೆ ನಾರಾಯಣ ಶೆಟ್ಟಿ ಕುಟುಂಬಕ್ಕೆ ಆದೇಶಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ