ಆ್ಯಪ್ನಗರ

ರಿವರ್ಸ್‌ ಆಪರೇಷನ್‌ ಮಾಡೋಲ್ಲ: ಸಿಎಂ

ಬಿಜೆಪಿ ನಡೆಸುವ 'ಆಪರೇಷನ್‌ ಕಮಲ'ಕ್ಕೆ ಪ್ರತಿಯಾಗಿ ನಾನು 'ರಿವರ್ಸ್‌ ಆಪರೇಷನ್‌'ಗೆ ಕೈಹಾಕುವುದಿಲ್ಲ...

Vijaya Karnataka 6 Feb 2019, 5:00 am
ಬೆಂಗಳೂರು: ಬಿಜೆಪಿ ನಡೆಸುವ 'ಆಪರೇಷನ್‌ ಕಮಲ'ಕ್ಕೆ ಪ್ರತಿಯಾಗಿ ನಾನು 'ರಿವರ್ಸ್‌ ಆಪರೇಷನ್‌'ಗೆ ಕೈಹಾಕುವುದಿಲ್ಲ. ಅದರ ಅವಶ್ಯಕತೆಯೂ ನನಗೆ ಇಲ್ಲ ಎಂದು ಸಿಎಂ ಕುಮಾರಸ್ವಾಮಿ ಕೇಸರಿ ಪಾಳಯಕ್ಕೆ ತಿರುಗೇಟು ನೀಡಿದರು.
Vijaya Karnataka Web hdk1


ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ ''ಸಮ್ಮಿಶ್ರ ಸರಕಾರ ಸುಭದ್ರವಾಗಿದೆ. ಪ್ರತಿಪಕ್ಷ ಕನಸು ಕಾಣುತ್ತಿರುವಂತೆ ನಮ್ಮ ಸರಕಾರಕ್ಕೆ ಏನೂ ಆಗದು. ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡಬೇಕೆಂಬ ಆಸೆ ಇದೆ. ಇದನ್ನು ಬಜೆಟ್‌ನಲ್ಲಿ ಮಾಡಿ ತೋರಿಸುವೆ,'' ಎಂದರು.

''ಅತೃಪ್ತ ಶಾಸಕರು ಅಧಿವೇಶನಕ್ಕೆ ಬರುತ್ತಾರೋ ಇಲ್ಲವೋ ಎಂಬ ಯಾವುದೇ ಅನುಮಾನ ಬೇಡ. ಬುಧವಾರ ನಡೆಯುವ ವಿಧಾನಸಭೆ ಕಲಾಪದವರೆಗೆ ಕಾದು ನೋಡಿ,'' ಎಂದು ಸಿಎಂ ಪ್ರತಿಕ್ರಿಯಿಸಿದರು.

ಬಿಜೆಪಿ ಟೀಕೆಗೂ ಉತ್ತರ ಇಲ್ಲ

''ಕುಮಾರಸ್ವಾಮಿ ಬಜೆಟ್‌ ಮಂಡಿಸುವುದಿಲ್ಲ ಎಂಬ ಬಿಜೆಪಿ ಮುಖಂಡರ ಮಾತುಗಳಿಗೆ ಉತ್ತರ ನೀಡುವುದಿಲ್ಲ. ಬಿಜೆಪಿಯವರು ಇನ್ನೂ ಅದ್ಯಾವುದೋ ಲೋಕದಲ್ಲಿ ಇದ್ದಂತಿದೆ. ಇದಕ್ಕೆ ನನ್ನ ಅಭ್ಯಂತರ ಇಲ್ಲ. ನಾನು ಯಾವ ಕೆಲಸ ಮಾಡಬೇಕೋ ಅದನ್ನಷ್ಟೇ ಮಾಡುವೆ,'' ಎಂದು ಕುಮರಸ್ವಾಮಿ ತಿರುಗೇಟು ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ