ಆ್ಯಪ್ನಗರ

ಅಂಬರೀಷ್‌ ಕಾಂಗ್ರೆಸ್‌ನವರು, ಅವರ ಕುಟುಂಬ ಸದಸ್ಯರಿಗೆ ಟಿಕೆಟ್‌ ಕೊಡುವ ಪ್ರಮೇಯ ಇಲ್ಲ: ಎಚ್‌ಡಿಕೆ

ಎರಡು ದಿನಗಳ ಹಿಂದೆ ಮಂಡ್ಯದಲ್ಲಿ ನಡೆದ ಅಂಬರೀಷ್‌ ಶ್ರದ್ದಾಂಜಲಿ ಮತ್ತು ಪುಣ್ಯಸ್ಮರಣೆ ಕಾರ‍್ಯಕ್ರಮದಲ್ಲಿ ತಾವು ಬಾರದಿರುವುದು ಉದ್ದೇಶಪೂರ್ವಕವಲ್ಲ. ನಾನು ಮುಖ್ಯಮಂತ್ರಿ. ನನಗೆ ನನ್ನದೇ ಆದ ಕಾರ‍್ಯಭಾರವಿರುತ್ತದೆ.

Vijaya Karnataka 14 Jan 2019, 8:50 pm
ಮಂಡ್ಯ : ಅಂಬರೀಷ್‌ ಕಾಂಗ್ರೆಸ್‌ ಅಲ್ಲವೇ? ಅವರೇನು ಜೆಡಿಎಸ್‌ಗೆ ಬಂದಿರಲಿಲ್ಲ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಅವರ ಕುಟುಂಬದವರಿಗೆ ಟಿಕೆಟ್‌ ಕೊಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದರು.
Vijaya Karnataka Web ಅಂಬರೀಷ್‌
ಅಂಬರೀಷ್‌


ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಅಂಬರೀಷ್‌ ಮತ್ತವರ ಕುಟುಂಬದ ವಿಚಾರದಲ್ಲಿ ನಾನು ರಾಜಕಾರಣ ಬೆರೆಸಲ್ಲ. ಜನರ ಮನವಿಯಂತೆ ಅವರ ಪಾರ್ಥೀವ ಶರೀರವನ್ನು ಮಂಡ್ಯಕ್ಕೆ ತರಲಾಯಿತು. ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಜನರ ಭಾವನೆಯಂತೆ ಗೌರವ ಸಲ್ಲಿಸಿದ್ದೇವೆ. ಯಾರೇ ಸಿಎಂ ಆಗಿದ್ದರೂ ನಾನು ತೆಗೆದುಕೊಂಡ ನಿರ್ಧಾರವನ್ನೇ ತೆಗೆದುಕೊಳ್ಳುತ್ತಿದ್ದರು'' ಎಂದು ಹೇಳಿದರು.

ಉದ್ದೇಶಪೂರ್ವಕವಲ್ಲ

''ಎರಡು ದಿನಗಳ ಹಿಂದೆ ಮಂಡ್ಯದಲ್ಲಿ ನಡೆದ ಅಂಬರೀಷ್‌ ಶ್ರದ್ದಾಂಜಲಿ ಮತ್ತು ಪುಣ್ಯಸ್ಮರಣೆ ಕಾರ‍್ಯಕ್ರಮದಲ್ಲಿ ತಾವು ಬಾರದಿರುವುದು ಉದ್ದೇಶಪೂರ್ವಕವಲ್ಲ. ನಾನು ಮುಖ್ಯಮಂತ್ರಿ. ನನಗೆ ನನ್ನದೇ ಆದ ಕಾರ‍್ಯಭಾರವಿರುತ್ತದೆ. ಯಾರೋ ಬಂದು ಕರೆದ ತಕ್ಷಣ ಹೋಗಲು ಸಾಧ್ಯವೇ? ನನ್ನನ್ನು ಕೇಳಿ ಆಯೋಜಕರು ದಿನಾಂಕ ನಿಗದಿಪಡಿಸಿಲ್ಲ. ದಿನಾಂಕ ನಿಗದಿಪಡಿಸಿ ಆಹ್ವಾನ ನೀಡಿದರು. ಆದರೆ, ಬೇರೆ ಕೆಲಸವಿದ್ದಿದ್ದರಿಂದ ನಾನು ಬರಲಿಲ್ಲವಷ್ಟೆ. ಕಾರ‍್ಯಕ್ರಮಕ್ಕೆ ಹೋಗದಂತೆ ಯಾರನ್ನೂ ತಡೆದಿಲ್ಲ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೈತ್ರಿಗೆ ಸಮಸ್ಯೆಯಿಲ್ಲ

''ಜೆಡಿಎಸ್‌, ಕಾಂಗ್ರೆಸ್‌ ಸರಕಾರದ ಮೈತ್ರಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೊಂದಾಣಿಕೆಯಾಗಿದೆ. ಲೋಕಸಭೆ ಸಾರ್ವತ್ರಿಕ ಚುನಾವಣೆಯನ್ನೂ ಉಭಯ ಪಕ್ಷಗಳು ಒಮ್ಮತದಿಂದ ಎದುರಿಸಬೇಕೆಂಬ ತೀರ್ಮಾನವಾಗಿದೆ'' ಎಂದರು.

ಅಭ್ಯರ್ಥಿ ತೀರ್ಮಾನವಾಗಿಲ್ಲ

''ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ನಿಖಿಲ್‌ ಪ್ರಚಾರ ನಡೆಸಿದ್ದಾರೆ. ಹೀಗಾಗಿ ಮಂಡ್ಯ ಕ್ಷೇತ್ರದಿಂದ ನಿಖಿಲ್‌ ಅವರನ್ನು ಕಣಕ್ಕಿಳಿಸಬೇಕೆಂಬ ಒತ್ತಡ ಬರುತ್ತಿದೆ. ಯಾರೆಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.

ಜ.17ರಂದು ಅಲ್ಪಸಂಖ್ಯಾತರ ಸಮಾವೇಶ

''ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ.17ರಂದು ಜೆಡಿಎಸ್‌ ಪಕ್ಷದಿಂದ ಅಲ್ಪಸಂಖ್ಯಾತರ ಸಮಾವೇಶ ಆಯೋಜಿಸಲಾಗಿದೆ'' ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ