ಆ್ಯಪ್ನಗರ

ಪ್ರೇಮಿಗಳ ದಿನ ಆಚರಿಸದಂತೆ ಬಜರಂಗದಳ ಎಚ್ಚರಿಕೆ, ಆತಂಕದಲ್ಲಿ ಮಂಗಳೂರ ಪ್ರೇಮಿಗಳು

ಪ್ರೇಮಿಗಳ ದಿನವಾದ ಫೆಬ್ರವರಿ 14 ರಂದು ಮಂಗಳೂರಿನ ಪ್ರೇಮಿಗಳು ಭಯ ಆತಂಕದಲ್ಲೇ ಈ ದಿನವನ್ನು ಆಚರಿಸುವಂತಾಗಿದೆ. ಕಾರಣ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಪ್ರೇಮಿಗಳ ದಿನ ಆಚರಣೆ ಮಾಡದಂತೆ ಎಚ್ಚರಿಕೆ ನೀಡಿದೆ.

Vijaya Karnataka Web 14 Feb 2020, 9:50 am
ಮಂಗಳೂರು: ಫೆಬ್ರವರಿ 14 ಪ್ರೇಮಿಗಳ ದಿನ. ಮನದ ಅರಸ/ಅರಸಿಗೆ ಹೂ ಗುಚ್ಚ ನೀಡಿ ಪ್ರೀತಿಯ ಮಾತನಾಡಿ, ಪಾರ್ಕ್, ಬೀಚ್, ಮಾಲ್‌ಗಳಲ್ಲಿ ಸುತ್ತಾಡೋದರಲ್ಲಿ ಪ್ರೇಮಿಗಳು ಕಾಲ ಕಳೆಯುತ್ತಾರೆ. ಆದರೆ ಮಂಗಳೂರಿನ ಪ್ರೇಮಿಗಳು ಪ್ರೇಮಿಗಳ ದಿನವನ್ನು ಆತಂಕದಲ್ಲೇ ಆಚರಿಸುವಂತಾಗಿದೆ. ಕಾರಣ ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಪ್ರೇಮಿಗಳ ದಿನ ಆಚರಿಸದಂತೆ ಎಚ್ಚರಿಕೆ ನೀಡಿದೆ.
Vijaya Karnataka Web no valentines day celebration in mangaluru
ಪ್ರೇಮಿಗಳ ದಿನ ಆಚರಿಸದಂತೆ ಬಜರಂಗದಳ ಎಚ್ಚರಿಕೆ, ಆತಂಕದಲ್ಲಿ ಮಂಗಳೂರ ಪ್ರೇಮಿಗಳು


ಮಂಗಳೂರಿನಲ್ಲಿ ಪ್ರತಿ ವರ್ಷ ಪ್ರೇಮಿಗಳ ದಿನದಂದು ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತವೆ. ಕಳೆದ ವರ್ಷ ಉಡುಗೊರೆ, ಹೂವು ಮಾರಾಟ ಮಾಡುವ ಅಂಗಡಿಯೊಂದರ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ್ದರು. ಪ್ರೇಮಿಗಳ ದಿನದಂದು ಪಾರ್ಕ್‌ವೊಂದರಲ್ಲಿ ಸುತ್ತಾಡುತ್ತಿದ್ದ ಪ್ರೇಮಿಗಳ ಮೇಲೆ ನೈತಿಕ ಪೊಲೀಸ್‌ ಗಿರಿಯೂ ನಡೆದಿತ್ತು.

ಈ ಹಿನ್ನೆಲೆಯಲ್ಲಿ ಪ್ರೇಮಿಗಳ ದಿನವನ್ನು ಮಂಗಳೂರಿನಲ್ಲಿ ಆಚರಿಸಲು ಭಯಪಡುವಂತಹಾ ವಾತಾವರಣ ನಿರ್ಮಾನವಾಗಿದೆ. ಪಾರ್ಕ್‌ ಮಾಲ್‌ ಹಾಗೂ ಬೀಚ್‌ಗಳಲ್ಲಿ ನಿರ್ಭೀತವಾಗಿ ಸುತ್ತಾಡಿ ಪ್ರೇಮಿಗಳ ದಿನವನ್ನು ಆಚರಿಸಲು ಆತಂಕಪಡುವ ಪರಿಸ್ಥಿತಿ ಇದೆ.

ಈ ವಿಚಾರವಾಗಿ ವಿಜಯ ಕರ್ನಾಟಕದ ಜೊತೆಗೆ ಮಾತನಾಡಿದ ಬಜರಂಗದಳದ ಮಂಗಳೂರು ಜಿಲ್ಲಾ ಸಂಚಾಲಕ ಪುನಿತ್ ಅತ್ತಾವರ್ “ಭಾರತ ಜಗತ್ತಿಗೆ ಮಾರ್ಗದರ್ಶನ ಮಾಡಿದ ದೇಶ, ಭಾರತದ ಸಂಸೃತಿಯ ಮೇಲೆ ಪಾಶ್ಚಿಮಾತ್ಯ ಸಂಸ್ಕೃತಿ ದಾಳಿ ಮಾಡುವ ಮೂಲಕ ಯುವ ಸಮೂಹವನ್ನು ದಾರಿತಪ್ಪಿಸುತ್ತಿದ್ದಾರೆ. ವ್ಯಾಪಾರದ ಉದ್ಧೇಶದಲ್ಲಿ ನಡೆಯುವ ಒಂದು ದಿನದ ಪ್ರೇಮಿಗಳ ದಿನಕ್ಕೆ ನಮ್ಮ ವಿರೋಧವಿದೆ. ಪ್ರೇಮಿಗಳ ದಿನದ ಆಚರಣೆ ಬದಲು ಪುಲ್ವಾಮ ಹುತಾತ್ಮದ ದಿನವನ್ನು ಆಚರಿಸಬೇಕು ಎಂದು ಮನವಿ ಮಾಡುತ್ತೇವೆ” ಎಂದರು.

“ಪ್ರೇಮಿಗಳ ದಿನಂದು ಮಂಗಳೂರಿನಲ್ಲಿ ಹಿಂದೂಪರ ಸಂಘಟನೆಗಳು ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ಪ್ರತಿವರ್ಷ ಭೀತಿಯ ವಾತಾವರಣವನ್ನು ಸೃಷ್ಟಿ ಮಾಡಲಾಗುತ್ತದೆ. ಪ್ರೇಮಿಗಳು ಸ್ವತಂತ್ರವಾಗಿ ತಮ್ಮ ದಿನವನ್ನು ಆಚರಣೆ ಮಾಡಲು ಬಿಡಬೇಕು. ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಹಲವು ಪ್ರಕರಣಗಳು ಮಂಗಳೂರಿನಲ್ಲಿ ನಡೆದಿವೆ. ಇವು ಪುನರಾವರ್ತನೆಯಾಗಲು ಪೊಲೀಸರು ಅವಕಾಶ ನೀಡಬಾರದು”ಎಂದು ಡಿವೈಎಫ್‌ಐ ಮಂಗಳೂರು ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ಆವರಿಸಿರುವ ಭಯದ ಪರಿಣಾಮ ಮಂಗಳೂರಿನ ಪ್ರೇಮಿಗಳು ಆತಂಕದಲ್ಲೇ ಪ್ರೇಮಿಗಳ ದಿನವನ್ನು ಆಚರಿಸುವ ಪರಿಸ್ಥಿತಿ ನಿರ್ಮಾನವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ