ಬೆಂಗಳೂರು: ವಿಧಾನಸೌಧದಿಂದ ಹಿಡಿದು ಆಡಳಿತದ ಎಲ್ಲ ಹಂತದಲ್ಲಿಯೂ ಭ್ರಷ್ಟಾಚಾರ ಆವರಿಸಿದ್ದು, ಇದನ್ನು ಸಂಪೂರ್ಣ ತಡೆಯುವುದು ಕಷ್ಟ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಗಾಂಧಿಭವನಕ್ಕೆ ಸೋಮವಾರ ಭೇಟಿ ನೀಡಿ ಅಲ್ಲಿ ಗಾಂಧಿವಾದಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು ''ಶೃಂಗೇರಿ ಶ್ರೀಗಳು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಜನರಿಗೆ ಒಳಿತು ಮಾಡಿ ಎಂದು ಸಲಹೆ ನೀಡಿದ್ದಾರೆ. ನನ್ನ ಮಟ್ಟದಲ್ಲಿ ಭ್ರಷ್ಟಾಚಾರ ನಿಲ್ಲಿಸಲು ಸಿದ್ಧ. ವಿಧಾನಸೌಧ ಮೂರನೇ ಮಹಡಿಯಲ್ಲಿ ತಡೆಯುತ್ತೇನೆ. ಆದರೆ, ಎಲ್ಲೆಡೆ ಆವರಿಸಿರುವ ಭ್ರಷ್ಟಾಚಾರ ಕಿತ್ತೊಗೆಯುವುದು ಅಸಾಧ್ಯ. ವರ್ಗಾವಣೆಯಿಂದಲೇ ಆರಂಭವಾಗುವ ಈ ಪಿಡುಗು ನಿವಾರಣೆಗೆ ಸವಾಲಾಗಿ ಸ್ವೀಕರಿಸಿದ್ದೇನೆ. ಎಲ್ಲ ಹಂತಗಳಲ್ಲಿಯೂ ಭ್ರಷ್ಟಾಚಾರ ನಿಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ,'' ಎಂದರು.
''ನನಗೆ ಹಣ ಮಾಡುವ ಉದ್ದೇಶ ಇಲ್ಲ. ಎಷ್ಟು ದಿನ ಬದುಕುತ್ತೇನೆ ಎಂಬುದೂ ಗೊತ್ತಿಲ್ಲ. ನನಗೆ ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆ ಆಗಿದೆ. ಸಿಎಂ ಪದವಿ ಬೇಡ ಎಂದು ಹೇಳಿದ್ದೆ. ದೇವೇಗೌಡರು ಇದೇ ಮಾತು ಹೇಳಿದ್ದರು. ಆದರೆ ನೀವೇ ಸಿಎಂ ಆಗಬೇಕು ಎಂದು ಕಾಂಗ್ರೆಸ್ನವರು ಒತ್ತಾಯಿಸಿದರು. ಎಲ್ಲರ ಒತ್ತಾಯಕ್ಕೆ ಒಪ್ಪಿಕೊಂಡಿದ್ದೇನೆ. ಇರುವ ವ್ಯವಸ್ಥೆಯಲ್ಲೇ ಇದ್ದುಕೊಂಡು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತೇನೆ,'' ಎಂದು ನುಡಿದರು.
ಜನರ ಸಂಕಷ್ಟ ಅಧಿಕಾರಿಗಳಿಗೆ ಅರ್ಥವಾಗಿಲ್ಲ
''ಅಧಿಕಾರಿಗಳಿಗೆ ತಿಂಗಳಾರಂಭದಲ್ಲೇ ಸಂಬಳ ಸಿಗುತ್ತಿದೆ. ಸಾಲದ್ದಕ್ಕೆ ಈಗ 6ನೇ ವೇತನ ಆಯೋಗದ ಶಿಫಾರಸು ಜಾರಿಯಾಗಿದೆ. ಪಡೆದ ಸಂಬಳಕ್ಕೆ ತಕ್ಕಂತೆ ಅಧಿಕಾರಿ, ನೌಕರರು ಕೆಲಸ ಮಾಡಬೇಕು. ಈ ಸಂಬಂಧ ಅಧಿಕಾರಿಗಳ ಸಭೆ ಕರೆದು ಸಲಹೆ ಕೊಡುತ್ತೇನೆ. ಇದುವರೆಗೂ ಭ್ರಷ್ಟಾಚಾರ ನಡೆಸಿದ್ದು ಸಾಕು, ಇನ್ನಾದರೂ ಜನರ ಕೆಲಸವನ್ನು ಪ್ರಮಾಣಿಕವಾಗಿ ಮಾಡಿ ಎಂದು ಸೂಚನೆ ನೀಡುತ್ತೇನೆ,'' ಎಂದು ಹೇಳಿದರು.
''ಸರಕಾರಿ ಶಾಲೆ ಉಳಿಸಲು ವಿಶೇಷ ಕ್ರಮ ಕೈಗೊಳ್ಳಲಾಗುವುದು. ಈ ಸಮಸ್ಯೆಗೆ ಸ್ಪಷ್ಟ ಪರಿಹಾರ ಒದಗಿಸಲು ನನ್ನದೇ ಆದ ಚಿಂತನೆಯನ್ನು ಕಾರ್ಯರೂಪಕ್ಕಿಳಿಸುವೆ. ಆರ್ಟಿಇ ವಿಚಾರದಲ್ಲಿ ಖಾಸಗಿ ಶಾಲೆಗಳ ಮೇಲೆ ಅಧಿಕಾರಿಗಳಿಗೆ ನಿಯಂತ್ರಣ ಇಲ್ಲದೆ ಜನ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಗಂಬೀರವಾಗಿ ಪರಿಗಣಿಸಲಾಗುವುದು,'' ಎಂದು ಕುಮಾರಸ್ವಾಮಿ ಅಭಯ ನೀಡಿದರು.
ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಗಾಂಧಿಧಿವಾದಿಗಳಾದ ಎಚ್.ಹನುಮಂತಪ್ಪ, ಪಿ.ರಾಮಯ್ಯ, ಚನ್ನಮ್ಮ ಹಳ್ಳಿಕೇರಿ, ಗಾಂಧಿಧಿ ಭವನದ ಅಧ್ಯಕ್ಷ ವೋಡೆ ಪಿ.ಕೃಷ್ಣ ಮತ್ತಿತರರಿದ್ದರು.
ಜಿಲ್ಲಾ ಭವನಗಳಿಗೆ ಭೂ ಮಂಜೂರು
ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಿಸುವ ಯೋಜನೆ ಚಾಲ್ತಿಯಲ್ಲಿದೆ. ಇವುಗಳ ಪೈಕಿ ಜಮೀನಿನ ತೊಂದರೆ ಇರುವ ಸ್ಥಳಗಳಲ್ಲಿ ಭೂ ಮಂಜೂರಾತಿ ಹಾಗೂ ಅನುದಾನ ನೀಡಲಾಗುವುದು. ಗಾಂಧೀಜಿ ತತ್ತ್ವಗಳನ್ನು ಸರಕಾರದ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಳ್ಳಲಾಗುವುದು. ಗಾಂಧಿ ಹಾಗೂ ಬಸವ ಹೆಸರಿನಲ್ಲಿ ಆಡಳಿತ ನಡೆಸುವೆ ಎಂದು ಸಿಎಂ ತಿಳಿಸಿದರು.
ದೇವೇಗೌಡರನ್ನು ಮನೆಯಲ್ಲೇ ಇರುವಂತೆ ತಾಕೀತು ಮಾಡಿದ್ದೇನೆಂಬ ಮಾಧ್ಯಮಗಳ ವರದಿ ಸುಳ್ಳು. ಅವರನ್ನು ಮನೆಯಲ್ಲಿ ಕೂರಿಸಿ ನಾನೊಬ್ಬನೇ ಆಡಳಿತ ನಡೆಸುವ ಪ್ರಶ್ನೆಯೇ ಇಲ್ಲ. ಉತ್ತಮ ಆಡಳಿತ ನೀಡಲು ಅವರ ಸಲಹೆ ಪಡೆಯುತ್ತೇನೆ.
- ಎಚ್.ಡಿ.ಕುಮಾರಸ್ವಾಮಿ, ಸಿಎಂ
ಗಾಂಧಿಭವನಕ್ಕೆ ಸೋಮವಾರ ಭೇಟಿ ನೀಡಿ ಅಲ್ಲಿ ಗಾಂಧಿವಾದಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು ''ಶೃಂಗೇರಿ ಶ್ರೀಗಳು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಜನರಿಗೆ ಒಳಿತು ಮಾಡಿ ಎಂದು ಸಲಹೆ ನೀಡಿದ್ದಾರೆ. ನನ್ನ ಮಟ್ಟದಲ್ಲಿ ಭ್ರಷ್ಟಾಚಾರ ನಿಲ್ಲಿಸಲು ಸಿದ್ಧ. ವಿಧಾನಸೌಧ ಮೂರನೇ ಮಹಡಿಯಲ್ಲಿ ತಡೆಯುತ್ತೇನೆ. ಆದರೆ, ಎಲ್ಲೆಡೆ ಆವರಿಸಿರುವ ಭ್ರಷ್ಟಾಚಾರ ಕಿತ್ತೊಗೆಯುವುದು ಅಸಾಧ್ಯ. ವರ್ಗಾವಣೆಯಿಂದಲೇ ಆರಂಭವಾಗುವ ಈ ಪಿಡುಗು ನಿವಾರಣೆಗೆ ಸವಾಲಾಗಿ ಸ್ವೀಕರಿಸಿದ್ದೇನೆ. ಎಲ್ಲ ಹಂತಗಳಲ್ಲಿಯೂ ಭ್ರಷ್ಟಾಚಾರ ನಿಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ,'' ಎಂದರು.
''ನನಗೆ ಹಣ ಮಾಡುವ ಉದ್ದೇಶ ಇಲ್ಲ. ಎಷ್ಟು ದಿನ ಬದುಕುತ್ತೇನೆ ಎಂಬುದೂ ಗೊತ್ತಿಲ್ಲ. ನನಗೆ ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆ ಆಗಿದೆ. ಸಿಎಂ ಪದವಿ ಬೇಡ ಎಂದು ಹೇಳಿದ್ದೆ. ದೇವೇಗೌಡರು ಇದೇ ಮಾತು ಹೇಳಿದ್ದರು. ಆದರೆ ನೀವೇ ಸಿಎಂ ಆಗಬೇಕು ಎಂದು ಕಾಂಗ್ರೆಸ್ನವರು ಒತ್ತಾಯಿಸಿದರು. ಎಲ್ಲರ ಒತ್ತಾಯಕ್ಕೆ ಒಪ್ಪಿಕೊಂಡಿದ್ದೇನೆ. ಇರುವ ವ್ಯವಸ್ಥೆಯಲ್ಲೇ ಇದ್ದುಕೊಂಡು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತೇನೆ,'' ಎಂದು ನುಡಿದರು.
ಜನರ ಸಂಕಷ್ಟ ಅಧಿಕಾರಿಗಳಿಗೆ ಅರ್ಥವಾಗಿಲ್ಲ
''ಅಧಿಕಾರಿಗಳಿಗೆ ತಿಂಗಳಾರಂಭದಲ್ಲೇ ಸಂಬಳ ಸಿಗುತ್ತಿದೆ. ಸಾಲದ್ದಕ್ಕೆ ಈಗ 6ನೇ ವೇತನ ಆಯೋಗದ ಶಿಫಾರಸು ಜಾರಿಯಾಗಿದೆ. ಪಡೆದ ಸಂಬಳಕ್ಕೆ ತಕ್ಕಂತೆ ಅಧಿಕಾರಿ, ನೌಕರರು ಕೆಲಸ ಮಾಡಬೇಕು. ಈ ಸಂಬಂಧ ಅಧಿಕಾರಿಗಳ ಸಭೆ ಕರೆದು ಸಲಹೆ ಕೊಡುತ್ತೇನೆ. ಇದುವರೆಗೂ ಭ್ರಷ್ಟಾಚಾರ ನಡೆಸಿದ್ದು ಸಾಕು, ಇನ್ನಾದರೂ ಜನರ ಕೆಲಸವನ್ನು ಪ್ರಮಾಣಿಕವಾಗಿ ಮಾಡಿ ಎಂದು ಸೂಚನೆ ನೀಡುತ್ತೇನೆ,'' ಎಂದು ಹೇಳಿದರು.
''ಸರಕಾರಿ ಶಾಲೆ ಉಳಿಸಲು ವಿಶೇಷ ಕ್ರಮ ಕೈಗೊಳ್ಳಲಾಗುವುದು. ಈ ಸಮಸ್ಯೆಗೆ ಸ್ಪಷ್ಟ ಪರಿಹಾರ ಒದಗಿಸಲು ನನ್ನದೇ ಆದ ಚಿಂತನೆಯನ್ನು ಕಾರ್ಯರೂಪಕ್ಕಿಳಿಸುವೆ. ಆರ್ಟಿಇ ವಿಚಾರದಲ್ಲಿ ಖಾಸಗಿ ಶಾಲೆಗಳ ಮೇಲೆ ಅಧಿಕಾರಿಗಳಿಗೆ ನಿಯಂತ್ರಣ ಇಲ್ಲದೆ ಜನ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಗಂಬೀರವಾಗಿ ಪರಿಗಣಿಸಲಾಗುವುದು,'' ಎಂದು ಕುಮಾರಸ್ವಾಮಿ ಅಭಯ ನೀಡಿದರು.
ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಗಾಂಧಿಧಿವಾದಿಗಳಾದ ಎಚ್.ಹನುಮಂತಪ್ಪ, ಪಿ.ರಾಮಯ್ಯ, ಚನ್ನಮ್ಮ ಹಳ್ಳಿಕೇರಿ, ಗಾಂಧಿಧಿ ಭವನದ ಅಧ್ಯಕ್ಷ ವೋಡೆ ಪಿ.ಕೃಷ್ಣ ಮತ್ತಿತರರಿದ್ದರು.
ಜಿಲ್ಲಾ ಭವನಗಳಿಗೆ ಭೂ ಮಂಜೂರು
ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಿಸುವ ಯೋಜನೆ ಚಾಲ್ತಿಯಲ್ಲಿದೆ. ಇವುಗಳ ಪೈಕಿ ಜಮೀನಿನ ತೊಂದರೆ ಇರುವ ಸ್ಥಳಗಳಲ್ಲಿ ಭೂ ಮಂಜೂರಾತಿ ಹಾಗೂ ಅನುದಾನ ನೀಡಲಾಗುವುದು. ಗಾಂಧೀಜಿ ತತ್ತ್ವಗಳನ್ನು ಸರಕಾರದ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಳ್ಳಲಾಗುವುದು. ಗಾಂಧಿ ಹಾಗೂ ಬಸವ ಹೆಸರಿನಲ್ಲಿ ಆಡಳಿತ ನಡೆಸುವೆ ಎಂದು ಸಿಎಂ ತಿಳಿಸಿದರು.
ದೇವೇಗೌಡರನ್ನು ಮನೆಯಲ್ಲೇ ಇರುವಂತೆ ತಾಕೀತು ಮಾಡಿದ್ದೇನೆಂಬ ಮಾಧ್ಯಮಗಳ ವರದಿ ಸುಳ್ಳು. ಅವರನ್ನು ಮನೆಯಲ್ಲಿ ಕೂರಿಸಿ ನಾನೊಬ್ಬನೇ ಆಡಳಿತ ನಡೆಸುವ ಪ್ರಶ್ನೆಯೇ ಇಲ್ಲ. ಉತ್ತಮ ಆಡಳಿತ ನೀಡಲು ಅವರ ಸಲಹೆ ಪಡೆಯುತ್ತೇನೆ.
- ಎಚ್.ಡಿ.ಕುಮಾರಸ್ವಾಮಿ, ಸಿಎಂ