ಆ್ಯಪ್ನಗರ

Karnataka assembly Election 2023: ಮುಗಿದ ಗುಜರಾತ್‌ ಚುನಾವಣೆ, ಇನ್ನು ಕರ್ನಾಟಕದತ್ತ ಬಿಜೆಪಿ ಲಕ್ಷ್ಯ

Karnataka assembly Election 2023: ಗುಜರಾತ್ ಚುನಾವಣೆ ಬಳಿಕ, ಬಿಜೆಪಿ ಹೈಕಮಾಂಡ್ ಗೆ ಕರ್ನಾಟಕವೇ ಟಾರ್ಗೆಟ್ ಆಗಿದೆ. 2023 ರ ಚುನಾವಣೆ ಗೆಲ್ಲಲು ಯಾವ ರೀತಿಯ ತಂತ್ರಗಾರಿಕೆ, ಯಾವೆಲ್ಲ ಟಾಸ್ಕ್‌ ನೀಡಬಹುದು ಎಂಬುದರ ಬಗ್ಗೆ ರಾಜ್ಯ ಬಿಜೆಪಿ ಮುಖಂಡರೂ ಕುತೂಹಲದಿಂದಿದ್ದಾರೆ. ಪಾರ್ಲಿಮೆಂಟ್‌ ಎಲೆಕ್ಷನ್‌ ದೃಷ್ಟಿಯಿಂದ ಒಂದಾದ ಮೇಲೊಂದರಂತೆ ರಾಜ್ಯಗಳನ್ನು ಗೆಲ್ಲುತ್ತ ಹೋಗುವುದು ಬಿಜೆಪಿಯ ಗುರಿ.

Edited byಸೌಮ್ಯಶ್ರೀ ಮಾರ್ನಾಡ್ | Vijaya Karnataka Web 6 Dec 2022, 5:43 am

ಹೈಲೈಟ್ಸ್‌:

  • ಮುಂದಿನ ಪಾರ್ಲಿಮೆಂಟ್‌ ಎಲೆಕ್ಷನ್‌ ದೃಷ್ಟಿಯಿಂದ ಒಂದಾದ ಮೇಲೊಂದರಂತೆ ರಾಜ್ಯಗಳನ್ನು ಗೆಲ್ಲುತ್ತ ಹೋಗುವುದು ಬಿಜೆಪಿಯ ಗುರಿ.
  • ಮುಂದಿನ ವಾರದಿಂದಲೇ ಹೈಕಮಾಂಡ್‌ ನಿಯೋಜಿತ 'ಟಾಸ್ಕ್‌ ಮಾಸ್ಟರ್‌'ಗಳು ರಾಜ್ಯ ಬಿಜೆಪಿಗೆ ಕ್ಲಾಸ್‌ ತೆಗೆದುಕೊಳ್ಳುವ ನಿರೀಕ್ಷೆಯಿದೆ.
  • ಹಳೆ ಮೈಸೂರು ಪ್ರಾಂತ್ಯದಲ್ಲಿ ಕಮಲ ಅರಳಿಸಲು ವಿಶೇಷ ಲಕ್ಷ್ಯ ಕೊಡಬೇಕು ಎಂಬ ಆಲೋಚನೆಯೂ ಹೈಕಮಾಂಡ್‌ನಲ್ಲಿದೆ. ಹಾಗಾಗಿ ಮೋದಿ ಕಾರ್ಯಕ್ರಮಗಳಲ್ಲಿಈ ಭಾಗದಲ್ಲೇ ಹೆಚ್ಚಾಗಿ ನಡೆದಿದ್ದವು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web PM Narendhra modi
ಸಾಂಧರ್ಬಿಕ ಚಿತ್ರ
ಬೆಂಗಳೂರು: ಗುಜರಾತ್‌ ಚುನಾವಣೆಗೆ ತೆರೆ ಬಿದ್ದಿರುವ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಕರ್ನಾಟಕದತ್ತ ಮುಖ ಮಾಡುವುದು ಖಚಿತವಾಗಿದೆ.
ಬಿಜೆಪಿಗೆ ಅತ್ಯಂತ ಪ್ರಮುಖವಾಗಿರುವ ಗುಜರಾತ್‌ ಚುನಾವಣೆ ಫಲಿತಾಂಶ ಡಿಸೆಂಬರ್‌ 8ರಂದು ಪ್ರಕಟವಾಗಲಿದೆ. 2023ರ ಪ್ರಾರಂಭದಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಮುಂದಿನ ಪಾರ್ಲಿಮೆಂಟ್‌ ಎಲೆಕ್ಷನ್‌ ದೃಷ್ಟಿಯಿಂದ ಒಂದಾದ ಮೇಲೊಂದರಂತೆ ರಾಜ್ಯಗಳನ್ನು ಗೆಲ್ಲುತ್ತ ಹೋಗುವುದು ಬಿಜೆಪಿಯ ಗುರಿ. ಹಾಗಾಗಿ ಕರ್ನಾಟಕ ಚುನಾವಣೆಯನ್ನು ಕೂಡ ಬಿಜೆಪಿ ಹೈಕಮಾಂಡ್‌ ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳುವುದು ನಿಶ್ಚಿತ. ಈಗಾಗಲೇ ಇದರ ಸುಳಿವು ಸಿಕ್ಕಿದೆ.

ಮತದಾನೋತ್ತರ ಸಮೀಕ್ಷೆಗಳ ಪ್ರಕಾರ ಗುಜರಾತ್‌ನಲ್ಲಿ ಪುನಃ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಅದರಂತೆ ಬಿಜೆಪಿ ಗೆಲುವು ದಾಖಲಿಸಿದರೆ ಅಲ್ಲಿನ ಸರಕಾರ ರಚನೆಗೆ ಹೆಚ್ಚು ಸಮಯ ಹಿಡಿಯಲಾರದು. ಈ ಲೆಕ್ಕಾಚಾರದಂತೆ ನಡೆದರೆ ಮುಂದಿನ ವಾರದಿಂದಲೇ ಹೈಕಮಾಂಡ್‌ ನಿಯೋಜಿತ 'ಟಾಸ್ಕ್‌ ಮಾಸ್ಟರ್‌'ಗಳು ರಾಜ್ಯ ಬಿಜೆಪಿಗೆ ಕ್ಲಾಸ್‌ ತೆಗೆದುಕೊಳ್ಳುವ ನಿರೀಕ್ಷೆಯಿದೆ.

ಬಿಜೆಪಿಗೆ ತಲೆನೋವಾದ ‘ರೌಡಿ ರಾಜಕೀಯ’: ವೇದಿಕೆ ಹಂಚಿಕೆ, ಪಕ್ಷ ಸೇರ್ಪಡೆಗೆ ಸ್ವಪಕ್ಷೀಯರಿಂದಲೇ ಅಸಮಾಧಾನ!

ಟಫ್‌ ಟಾಸ್ಕ್‌
ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಜೋಡಿ ಕರ್ನಾಟಕ ಚುನಾವಣೆಯನ್ನು ಈಗಾಗಲೇ ಗಂಭೀರವಾಗಿ ಪರಿಗಣಿಸಿದೆ. ಇತ್ತೀಚೆಗೆ ಮೂರು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಹಳೆ ಮೈಸೂರು ಪ್ರಾಂತ್ಯದಲ್ಲಿ ಕಮಲ ಅರಳಿಸಲು ವಿಶೇಷ ಲಕ್ಷ್ಯ ಕೊಡಬೇಕು ಎಂಬ ಆಲೋಚನೆಯೂ ಹೈಕಮಾಂಡ್‌ನಲ್ಲಿದೆ.

ಹಾಗಾಗಿ ಮೋದಿ ಕಾರ್ಯಕ್ರಮಗಳಲ್ಲಿಈ ಭಾಗದಲ್ಲೇ ಹೆಚ್ಚಾಗಿ ನಡೆದಿದ್ದವು. ಇನ್ನು ಉತ್ತರ ಕರ್ನಾಟಕ, ಕರಾವಳಿ-ಮಲೆನಾಡು ಇನ್ನಿತರ ಭಾಗದಲ್ಲೂ ಸಂಘಟನೆಗೆ ಇನ್ನಷ್ಟು ಶಕ್ತಿ ತುಂಬುವ ಕಾರ್ಯ ನಡೆಯುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಜನ ಸಂಕಲ್ಪ ಯಾತ್ರೆ ಈ ನಿಟ್ಟಿನಲ್ಲಿಒಂದು ವಾತಾವರಣ ನಿರ್ಮಿಸುತ್ತಿದೆ. ಇದರ ಮುಂದುವರಿದ ಭಾಗವಾಗಿ ಗುಜರಾತ್‌ ಫಲಿತಾಂಶದ ಬಳಿಕ ಇನ್ನಷ್ಟು ಜನಾಕರ್ಷಣೆಯ ಸಮಾವೇಶಗಳು ನಡೆಯಲಿವೆ. ಪ್ರಮುಖವಾಗಿ ಮೋದಿ, ಅಮಿತ್‌ ಶಾ ಅವರೇ ಬಿಗಿ ಟಾಸ್ಕ್‌ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

Narendra Modi: ಕೆಂಪೇಗೌಡ, ಕನಕದಾಸ, ವಾಲ್ಮೀಕಿಗೆ 'ಮೋದಿ' ನಮನ; ಜಾತಿ ಲೆಕ್ಕಾಚಾರದಲ್ಲಿ ಪಾಸ್‌ ಆಯ್ತಾ ಬಿಜೆಪಿ?
ಭಾರಿ ನಿರೀಕ್ಷೆ
ಹೈಕಮಾಂಡ್‌ ನಿರ್ದೇಶಿತ ಚುನಾವಣಾ ರಣತಂತ್ರದ ಬಗ್ಗೆ ರಾಜ್ಯ ಬಿಜೆಪಿ ವಲಯದಲ್ಲೆ ನಾನಾ ರೀತಿಯ ಚರ್ಚೆಯಾಗುತ್ತಿದೆ. ಮುಖ್ಯವಾಗಿ ಹೈಕಮಾಂಡ್‌ ಎಲ್ಲವನ್ನೂ ಸರಿ ಮಾಡಿ ಬಿಡುತ್ತದೆ. ಗೆಲುವಿನ ಸೂತ್ರವನ್ನು ವರಿಷ್ಠರೇ ಸಿದ್ಧ ಪಡಿಸುತ್ತಾರೆ. ಅದರಂತೆ ಕಾರ್ಯ ನಿರ್ವಹಿಸಿದರೆ ಪಕ್ಷ ಪುನಃ ಅಧಿಕಾರಕ್ಕೆ ಬರುವುದು ನಿಶ್ಚಿತ. ಈ ಬಾರಿ ಸುಲಭವಾಗಿ ಸರಳ ಬಹುಮತದ ಗಡಿ ದಾಟಬಹುದು ಎಂದು ಪಕ್ಷದ ಮುಖಂಡರೇ ಹೇಳುತ್ತಾರೆ.

ಆದರೆ ಹೈಕಮಾಂಡ್‌ನದು ಯಾವ ರೀತಿಯ ತಂತ್ರಗಾರಿಕೆ, ಯಾವೆಲ್ಲ ಟಾಸ್ಕ್‌ ನೀಡಬಹುದು ಎಂಬುದರ ಬಗ್ಗೆ ರಾಜ್ಯ ಬಿಜೆಪಿಯ ಪ್ರಮುಖರಿಗೇ ಮಾಹಿತಿಯಿಲ್ಲ. ಡಿಸೆಂಬರ್‌ 8ರ ಬಳಿಕವೇ ಈ ಕುರಿತ ಸ್ಪಷ್ಟ ಚಿತ್ರಣ ದೊರಕುವ ನಿರೀಕ್ಷೆಯಿದೆ.
ಲೇಖಕರ ಬಗ್ಗೆ
ಸೌಮ್ಯಶ್ರೀ ಮಾರ್ನಾಡ್
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರರಾಗಿ 7 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ, ನಾಗರಿಕರ ಸಮಸ್ಯೆಗಳು, ಬೆಂಗಳೂರು ಸ್ಥಳೀಯ ಆಡಳಿತದ ಕುಂದುಕೊರತೆಗಳ ವರದಿ, ವಿಶೇಷ ವ್ಯಕ್ತಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ರಂಗಭೂಮಿ ಹಾಗೂ ಯಕ್ಷಗಾನ ಇವರ ಇತರ ಆಸಕ್ತಿಕರ ಕ್ಷೇತ್ರಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ