ಆ್ಯಪ್ನಗರ

ಲಸಿಕೆ ಪಡೆಯದವರ ಮೇಲಷ್ಟೇ ಓಮಿಕ್ರಾನ್‌ ಪರಿಣಾಮ! ಡಾ. ಕೆ. ಸುಧಾಕರ್

ಲಸಿಕೆ ಪಡೆಯದವರ ಮೇಲಷ್ಟೇ ಓಮಿಕ್ರಾನ್ ಪರಿಣಾಮ ಬೀರುತ್ತಿದೆ. ಇಡೀ ವಿಶ್ವದಲ್ಲಿ ಗಮನಿಸಿರುವ ಅಂಶ ಇದಾಗಿದೆ. ಎರಡನೇ ಡೋಸ್ ಪಡೆಯದವರು ಇನ್ನೂ 45ಲಕ್ಷ ಜನ ಇದ್ದಾರೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಹೇಳಿದರು.

Vijaya Karnataka Web 13 Jan 2022, 4:07 pm
ಬೆಂಗಳೂರು: ಲಸಿಕೆ ಪಡೆಯದವರ ಮೇಲಷ್ಟೇ ಓಮಿಕ್ರಾನ್ ಪರಿಣಾಮ ಬೀರುತ್ತಿದೆ. ಇಡೀ ವಿಶ್ವದಲ್ಲಿ ಗಮನಿಸಿರುವ ಅಂಶ ಇದಾಗಿದೆ. ಎರಡನೇ ಡೋಸ್ ಪಡೆಯದವರು 45ಲಕ್ಷ ಜನ ಇದ್ದಾರೆ.ಇವರಿಗೆ ಸಲಹೆ ನೀಡುವುದೇನೆಂದರೆ, ಶೀಘ್ರವೇ ಲಸಿಕೆ ಪಡೆಯಿರಿ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಹೇಳಿದರು.
Vijaya Karnataka Web k sudhakar


ಮಕ್ಕಳಿಗೆ ಲಸಿಕೆ ಕೊಟ್ಟಿಲ್ಲ, ಅವರಲ್ಲೂ ಕಾಣಿಸಿಕೊಳ್ತಿದೆ.15-18 ವರ್ಷದ ಮಕ್ಕಳಿಗೆ ಲಸಿಕೆ ಕೊಡಲು ಆರಂಭಿಸಿದ್ದೇವೆ. 0-15 ವರ್ಷದವರು ಲಸಿಕೆ ಪಡೆಯದ ಮಕ್ಕಳ ಮೇಲೆ ಹೆಚ್ಚು ಗಮನ ವಹಿಸಬೇಕಿದೆ. ಮೊದಲ ಎರಡು ಅಲೆಯ ಸಂದರ್ಭದಲ್ಲಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಆಗಿರಲಿಲ್ಲ. ಈಗಲೂ ಕೂಡ ಆರೋಗ್ಯವಾಗಿದ್ದಾರೆ ಅಂದುಕೊಂಡಿದ್ದೇವೆ. ಮಕ್ಕಳ ಬಗ್ಗೆ ಜಾಗೃತಿ ಇರಲಿ ಅನ್ನೋದು ನಮ್ಮ ಸಲಹೆ ಎಂದರು.

ಡಿಸೆಂಬರ್ ಮೂರನೇ ವಾರದ ವರೆಗೂ ನಮ್ಮಲ್ಲಿ ಕೊರೊನಾ ಕಡಿಮೆ ಇತ್ತು. ರಾಜ್ಯದಲ್ಲಿ 10.33% ಇತ್ತು ಜನವರಿಯಲ್ಲಿ. ಹೆಚ್ಚಾಗಿರೋ ಕಾರಣ ಸರ್ಕಾರವೀಗ ತೆಗೆದುಕೊಂಡಿದೆ. 2021 ಡಿಸೆಂಬರ್‌ 28ರಂದು 356 ಕೇಸ್ ಮಾತ್ರ ಇತ್ತು. ಇದಾದ ಬಳಿಕ ಒಂದು ವಾರದಲ್ಲಿ 2022 ಜನವರಿ 5 ರಲ್ಲಿ 3,605 ಪ್ರಕರಣ ಕಂಡುಬಂದಿದೆ. ರಾಜ್ಯದ ಉಳಿದ ಭಾಗದಲ್ಲಿ 651 ಪ್ರಕರಣ ಇವೆ. 2022ರ ಜ.11ರಲ್ಲಿ ಬೆಂಗಳೂರು ಒಂದರಲ್ಲೇ 10,800 ಕೇಸ್ ಆಗಿದೆ. ರಾಜ್ಯದ ಇತರೆ ಭಾಗದಲ್ಲಿ 3,671 ಪ್ರಕರಣಗಳು ಇವೆ‌. ಶೇ.32.64 ರಷ್ಟು ಬೆಂಗಳೂರಿನಲ್ಲಿ ಹೆಚ್ಚಳ ಆಗಿದೆ ಎಂದರು‌.

ಮೇಕೆದಾಟು ಪಾದಯಾತ್ರೆ: ಸರ್ಕಾರ ಬದುಕಿದ್ಯಾ ಎಂಬುವುದನ್ನು ತೋರಿಸುತ್ತೇವೆ! ಕೆ ಸುಧಾಕರ್

ಒಟ್ಟಾರೆ ಪ್ರಕರಣ ನೋಡಿದಾಗ ಬೆಂಗಳೂರು ಒಂದರಲ್ಲೇ 75% ಕೇಸ್ ಇದೆ. 25% ಉಳಿದ ಜಿಲ್ಲೆಯದ್ದಾಗಿದೆ.
ಮೂರನೇ ಅಲೆ ಬೆಂಗಳೂರು ಎಪಿಕ್ ಸೆಂಟರ್ ಆಗಿದೆ. ಇತರೆ ಮಹಾನಗರ ದೆಹಲಿ, ಚೆನೈ ಕೂಡ ಆಗಿದೆ ಎಂದರು.

ಮೊದಲು, ಎರಡು, ಮೂರನೇ ಅಲೆ ನೋಡಿದಾಗ. ಮೊದಲ‌ ಅಲೆ ಡಬ್ಲಿಂಗ್ ನೋಡಿದಾಗ ಪೀಕ್ ನಲ್ಲಿ ನಾಲ್ಕು ದಿನ ಇತ್ತು. ಹತ್ತರಿಂದ ಹದಿನೈದು ದಿನಕ್ಕೆ ಡಬ್ಲಿಂಗ್ ಆಗ್ತಿತ್ತು.ಎರಡನೇ ಅಲೆಯಲ್ಲಿ 8 ದಿನಕ್ಕೆ ಡಬ್ಲಿಂಗ್ ಆಗ್ತಿತ್ತು. ಮೂರನೇ ಅಲೆ ಎರಡು ಮೂರು ದಿನಗಳಲ್ಲಿ ಡಬ್ಲಿಂಗ್ ಆಗ್ತಿದೆ. WHO ಹೇಳಿದಂತೆ ವೇಗವಾಗಿ ಹರಡೋ ವೈರಸ್ ಆಗಿದೆ.ಇದು ಮೈಲ್ಡ್ ಡಿಸೀಸ್ ಅಂತ ಕರೆಯದಂತೆ ಸೂಚಿಸಿದ್ದಾರೆ. ಯಾರ ಮೇಲೆ ಹೆಚ್ಚು ಪ್ರಭಾವ ಬೀರ್ತಿದೆ ಅಂತ ಗಮನಿಸಬೇಕಿದೆ ಎಂದು ತಿಳಿಸಿದರು.

ಲಸಿಕೆ ಪಡೆದು ರೋಗ ನಿರೋಧಕ ಶಕ್ತಿ (ಶುಗರ್, ಕಿಡ್ನಿ ವೈಫಲ್ಯ ಇರುವವರು) ಕಡಿಮೆ ಇರಲಿದೆ. ಅಂತವರಿಗೆ ಎರಡು ಡೋಸ್ ಪಡೆದಿದ್ರೂ ಕಾಳಜಿ ವಹಿಸಬೇಕು.ಹಾಗಾಗಿ ಪ್ರಧಾನಿ ಹಾಗೂ ಸಿಎಂ ಸಲಹೆಯಂತೆ ಮೂರನೇ ಡೋಸ್ ನೀಡಲು ಪ್ರಾರಂಭಿಸಿದ್ದೇವೆ. ಕೇಂದ್ರ ಸರ್ಕಾರ ನಮಗೆ ಹೆಚ್ಚು ಡೋಸ್ ನೀಡಿದೆ. 65 ಲಕ್ಷ ಡೋಸ್ ನಮಗೆ ಕಳಿಸಿದ್ದಾರೆ.ಅದರ ಸದುಪಯೋಗ ಪಡೆದುಕೊಳ್ಳೋಣ ಎಂದು ಮನವಿ ಮಾಡಿದರು.

ಓಮಿಕ್ರಾನ್ ಪ್ರಮಾಣ ಹೆಚ್ಚಾಗುವ ಮುನ್ನ ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳಿ; ಡಾ. ಕೆ ಸುಧಾಕರ್ ಮನವಿ

ಹಾಸ್ಪಿಟಲ್ ದಾಖಲಾಗಿರೋರ ಸಂಖ್ಯೆಯ ಬಗ್ಗೆ ಮಾಹಿತಿ ನೀಡಿ, ಡಿಸೆಂಬರ್ ಒಂದರಿಂದ ಆಕ್ಟೀವ್ ಕೇಸ್ 151 ಕೇಸ್ ಇತ್ತು. ಜನವರಿ 1-11 ರ ವರೆಗೂ 62,000 ಕೇಸ್ , 6% ಆಸ್ಪತ್ರೆಗೆ ದಾಖಲಾಗಿದ್ದಾರೆ. 93% ಹೋಮ್ ಐಸೋಲೇಟ್ ಆಗಿದ್ದಾರೆ. ಟೆಸ್ಟಿಂಗ್ ಪ್ರತೀ ದಿನ 2ಲಕ್ಷ ಮಾಡಲು ಮುಂದಾಗಿದ್ದು, 2.5 ಲಕ್ಷಕ್ಕೆ ಹೆಚ್ಚಳ ಮಾಡಲು ನಿರ್ಧಾರ ಮಾಡಲಾಗಿದೆ. 5-T ಸೂತ್ರ ತರಲು ನಿರ್ಧರಿಸಲಾಗಿದೆ. ಅತಿ ಹೆಚ್ಚು ಟೆಸ್ಟಿಂಗ್ ಗುರಿ ಇದೆ. ಪ್ರತಿ ದಿನ2 ರಿಂದ 2.5 ಲಕ್ಷ ಗುರಿ ಇದೆ.ಬೆಂಗಳೂರು ಒಂದರಲ್ಲೇ 1.2 ಲಕ್ಷ ಟೆಸ್ಟಿಂಗ್ ಗುರಿ ಇದೆ. 24ಗಂಟೆಯಲ್ಲಿ ಟೆಸ್ಟಿಂಗ್ ರಿಪೋರ್ಟ್ ನೀಡುವ ಗುರಿ ಇಟ್ಟುಕೊಂಡಿದ್ದೇವೆ ಎಂದರು‌

ಐದು ಜಿನೋಮಿಕ್ ಸೀಕ್ವೆನ್ಸ್ ಟೆಸ್ಟ್ ಸೆಂಟರ್ ಇದೆ. ಕೇಂದ್ರದ ನಾಲ್ಕು ಸೆಂಟರ್ ಇದೆ. ಒಟ್ಟು 9 ಜಿನೋಮ್ ಸೀಕ್ವೆನ್ಸ್ ಸೆಂಟರ್ ಇದೆ. 24-36ಗಂಟೆಯಲ್ಲಿ ಎಲ್ಲಾ ರಿಪೋರ್ಟ್ ಬರಲು ನಿರ್ಧಾರ ಮಾಡಲಾಗಿದೆ.ಹೊರ ರಾಜ್ಯದಗಳಿಂದ ಬರುವವರಿಗೆ RTPCR ಕಡ್ಡಾಯ. 74ಗಂಟೆಯೊಳಗಿನ ನೆಗೆಟಿವ್ ವರದಿ ತರಬೇಕಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ