ಬೆಂಗಳೂರು: 'ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಎಐಸಿಸಿ ಮಾನದಂಡ ತಮಗೆ ಅನ್ವಯವಾಗುವುದಿಲ್ಲ,' ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
' ವಿಶೇಷ ಸಾಮರ್ಥ್ಯವಿದೆ ಎಂಬ ಕಾರಣಕ್ಕೆ ಕೆಪಿಸಿಸಿ ಸಾರಥ್ಯದ ಜತೆಗೆ, ಸಚಿವ ಸ್ಥಾನವನ್ನು ಹೈಕಮಾಂಡ್ ನೀಡಿದೆ. ಹೀಗಾಗಿ, ಒಂದೇ ಹುದ್ದೆ ಮಾನದಂಡ ನನಗೆ ಅನ್ವಯಿಸುವುದಿಲ್ಲ, ' ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಸಮರ್ಥನೆ ಮಾಡಿಕೊಂಡರು.
ಎರಡೂ ಹುದ್ದೆಗಳಿಗೆ ನ್ಯಾಯ ದೊರಕಿಸಿಕೊಡಲು ಪರಮೇಶ್ವರ್ ಅವರಿಗೆ ಸಾಧ್ಯವಾಗುತ್ತಿಲ್ಲ. ಹೈಕಮಾಂಡ್ ಸೂಚನೆಗಾಗಿ ಕಾಯದೆ ಪರಮೇಶ್ವರ್ ಒಂದು ಹುದ್ದೆಯನ್ನು ಬಿಟ್ಟುಕೊಡಬೇಕು,' ಎಂದು ಸಂಸದ ಕೆ.ಎಚ್.ಮುನಿಯಪ್ಪ ಒತ್ತಾಯಿಸಿರುವ ಬಗ್ಗೆ ಪರಮೇಶ್ವರ್ ಈ ಪ್ರತಿಕ್ರಿಯೆ ನೀಡಿದರು. ''ನನ್ನ ವಿಶೇಷ ಸಾಮರ್ಥ್ಯದ ಬಗ್ಗೆ ಬಹುಶಃ ಮುನಿಯಪ್ಪ ಅವರಿಗೆ ತಿಳುವಳಿಕೆ ಇಲ್ಲ, ' ಎಂದು ಟಾಂಗ್ ನೀಡಿದರು.