ಆ್ಯಪ್ನಗರ

ಆಪರೇಷನ್‌ ಕಲಿಗಳು ದೂರ

ಒಂದೆಡೆ ಅನರ್ಹ ಶಾಸಕರ ವಿಚಾರದಲ್ಲಿಬಿಜೆಪಿ ತಲೆಕೆಡಿಸಿಕೊಂಡಿದ್ದರೆ ಇನ್ನೊಂದೆಡೆ ಆಪರೇಷನ್‌ ಕಮಲದ ರೂವಾರಿಗಳು ಮಾತ್ರ ಈ ಎಲ್ಲಬೆಳವಣಿಗೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ.

Vijaya Karnataka 23 Sep 2019, 5:00 am
ಬೆಂಗಳೂರು : ಒಂದೆಡೆ ಅನರ್ಹ ಶಾಸಕರ ವಿಚಾರದಲ್ಲಿಬಿಜೆಪಿ ತಲೆಕೆಡಿಸಿಕೊಂಡಿದ್ದರೆ ಇನ್ನೊಂದೆಡೆ ಆಪರೇಷನ್‌ ಕಮಲದ ರೂವಾರಿಗಳು ಮಾತ್ರ ಈ ಎಲ್ಲಬೆಳವಣಿಗೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ.
Vijaya Karnataka Web operation leaders mantained distance
ಆಪರೇಷನ್‌ ಕಲಿಗಳು ದೂರ


ಆಪರೇಷನ್‌ ಕಮಲ ಸಂದರ್ಭದಲ್ಲಿಮುಂಚೂಣಿಯಲ್ಲಿದ್ದ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಸಿ.ಪಿ.ಯೋಗೀಶ್ವರ್‌ ಹಾಗೂ ಸಿಎಂ ಬಿಎಸ್‌ವೈ ಆಪ್ತ ಸಹಾಯಕ ಎನ್‌.ಆರ್‌.ಸಂತೋಷ್‌ ಈಗಿನ ಬೆಳವಣಿಗೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಸರಕಾರ ಬಂದ ನಂತರ ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂಬ ಕಾರಣಕ್ಕೆ ಈ ಮೂವರು ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.

ಚುನಾವಣೆ ನಿಗದಿಯಾಗುತ್ತಿದ್ದಂತೆ ಕೆಲ ಅನರ್ಹ ಶಾಸಕರು ಅರವಿಂದ ಲಿಂಬಾವಳಿ ಅವರನ್ನು ಸಂಪರ್ಕಿಸಿದ್ದರೂ ನಿರೀಕ್ಷಿತ ಪ್ರತಿಕ್ರಿಯೆ ಲಭಿಸಿಲ್ಲ. ಲಿಂಬಾವಳಿ ಹಾಗೂ ಯೋಗೀಶ್ವರ ಬಿಎಸ್‌ವೈ ಜತೆ ದಿಲ್ಲಿಗೆ ತೆರಳಿಲ್ಲ. ಭಾನುವಾರ ಅರಮನೆ ಮೈದಾನದಲ್ಲಿನಡೆದ ಕಾರ್ಯಕ್ರಮದಲ್ಲಿಭಾಗಿಯಾಗಿದ್ದ ಲಿಂಬಾವಳಿ ಮಾಧ್ಯಮದ ಜತೆಗೂ ಮಾತನಾಡಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ