ಆ್ಯಪ್ನಗರ

ಪಬ್ಲಿಕ್‌ ಪರೀಕ್ಷೆಗೆ ಎಐಎಸ್‌ಇಸಿ ವಿರೋಧ

ಏಳನೇ ತರಗತಿಗೆ 'ಪಬ್ಲಿಕ್‌ ಪರೀಕ್ಷೆ' ನಡೆಸುವ ನಿರ್ಧಾರವನ್ನು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‌ಇಸಿ) ತೀವ್ರವಾಗಿ ಖಂಡಿಸಿದೆ...

Vijaya Karnataka 7 Oct 2019, 5:00 am
ಬೆಂಗಳೂರು: ಏಳನೇ ತರಗತಿಗೆ 'ಪಬ್ಲಿಕ್‌ ಪರೀಕ್ಷೆ' ನಡೆಸುವ ನಿರ್ಧಾರವನ್ನು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‌ಇಸಿ) ತೀವ್ರವಾಗಿ ಖಂಡಿಸಿದೆ.
Vijaya Karnataka Web oppos public exam
ಪಬ್ಲಿಕ್‌ ಪರೀಕ್ಷೆಗೆ ಎಐಎಸ್‌ಇಸಿ ವಿರೋಧ


''ಕಡ್ಡಾಯ ತೇರ್ಗಡೆ ನೀತಿಯಿಂದ ಮಕ್ಕಳಲ್ಲಿಪರೀಕ್ಷೆ ಕುರಿತು ಬದ್ಧತೆ ಇಲ್ಲವಾಗಿದ್ದು, ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ತಮಿಳುನಾಡಿನಲ್ಲಿಕಡ್ಡಾಯ ತೇರ್ಗಡೆ ಪದ್ಧತಿಯನ್ನು ರದ್ದು ಮಾಡಲಾಗಿದೆ,'' ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.

''ದೇಶಾದ್ಯಂತ ಕಡ್ಡಾಯ ತೇರ್ಗಡೆ ನೀತಿಯ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಕಡ್ಡಾಯ ತೇರ್ಗಡೆ ಪದ್ಧತಿಯಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂದು ಶಿಕ್ಷಣ ತಜ್ಞರು ಸಹ ಅಭಿಮತ ವ್ಯಕ್ತಪಡಿಸಿದ್ದಾರೆ. ಶಾಲಾ ಶಿಕ್ಷಣದ ಗುಣಮಟ್ಟದ ದೃಷ್ಟಿಯಂದ 'ಪಾಸ್‌-ಫೇಲ್‌' ಪದ್ಧತಿಯನ್ನು ಜಾರಿಗೆ ತರುವಂತೆ ಒತ್ತಾಯಿಸಿದ್ದಾರೆ. ಹಾಗಾಗಿ, ರಾಜ್ಯದಲ್ಲೂಕಡ್ಡಯಾ ತೇರ್ಗಡೆ ಪದ್ಧತಿಯನ್ನು ರದ್ದುಪಡಿಸಿ, ಪಾಸ್‌-ಪೇಲ್‌ ಪದ್ಧತಿಯನ್ನು ಜಾರಿ ಮಾಡದೆ, 7ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಡೆಸುವ ವಿಧಾನ ಸರಿಯಲ್ಲ. ಆದ್ದರಿಂದ ಶಿಕ್ಷಣ ಸಚಿವರು 7ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ಪದ್ಧತಿ ಜಾರಿಗೆ ತರುವ ನಿರ್ಧಾರದಿಂದ ಹಿಂದೆ ಸರಿಯಬೇಕು. ಮತ್ತು, ಪಾಸ್‌-ಫೇಲ್‌ ಪದ್ಧತಿಯನ್ನು ಜಾರಿಗೆ ತರುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬೇಕು,'' ಎಂದು ಸಮಿತಿ ಒತ್ತಾಯಿಸಿದೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ