ಆ್ಯಪ್ನಗರ

ಪಾಕಿಸ್ತಾನದ ಗುಪ್ತಚರ ಇಲಾಖೆಗೆ ಮಾಹಿತಿ ರವಾನಿಸುತ್ತಿದ್ದವ ಬೆಂಗಳೂರಿನಲ್ಲಿ ಬಂಧನ

ಆರೋಪಿಯು ವಾಟ್ಸ್‌ಆ್ಯಪ್‌ ವಿಡಿಯೊ, ಮೆಸೇಜ್‌ ಮತ್ತು ಕಾಲ್‌ ಮುಖಾಂತರ ಬಾರ್ಮೆರ್‌ ಮಿಲಿಟರಿ ಸ್ಟೇಷನ್‌​​ ಮತ್ತು ಮಿಲಿಟರಿ ವಾಹನಗಳ ಓಡಾಟದ ಬಗ್ಗೆ ಮಾಹಿತಿ ರವಾನಿಸುತ್ತಿದ್ದ. ದೇಶದ ಆಯಕಟ್ಟಿನ ಸ್ಥಳಗಳು, ಕಟ್ಟಡ, ರಕ್ಷಣಾ ಸಂಸ್ಥೆಯ ಫೋಟೊಗಳು, ಆರ್ಮಿಗೆ ಸಂಬಂಧಿಸಿದ ಮತ್ತು ಬಾರ್ಮೆರ್‌​ನ ಅಂತಾರಾಷ್ಟ್ರೀಯ ಗಡಿ ಪ್ರದೇಶದ ಫೋಟೊಗಳನ್ನು ಕಳುಹಿಸಿದ್ದ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

Vijaya Karnataka 21 Sep 2021, 2:12 pm
ಬೆಂಗಳೂರು: ಭಾರತೀಯ ಸೇನಾ ಸಿಬ್ಬಂದಿಯ ವಸ್ತ್ರ ಧರಿಸಿ ದೇಶದ ನಾನಾ ಪ್ರಮುಖ ಸ್ಥಳಗಳಲ್ಲಿ ಸುತ್ತಾಡಿ ಫೋಟೊಗಳು ಮತ್ತು ವಿವರಗಳನ್ನು ಸಂಗ್ರಹಿಸಿದ್ದ ಪಾಕಿಸ್ತಾನದ ಗೂಢಚಾರಿಯನ್ನು ಬಂಧಿಸಲಾಗಿದೆ.
Vijaya Karnataka Web arrest
Representational image


ಮಾಹಿತಿಯನ್ನು ಈತ ಗುಪ್ತಚರ ಸಂಸ್ಥೆಯಾದ ಇಂಟರ್‌ ಸವೀರ್‍ಸಸ್‌ ಇಂಟೆಲಿಜೆನ್ಸ್‌ಗೆ (ಐಎಸ್‌ಐ) ಹಂಚಿಕೊಳ್ಳುತ್ತಿದ್ದ ಎನ್ನಲಾಗಿದ್ದು, ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಬಾರ್ಮೆರ್‌ನ ಜಿತೇಂದ್ರ ಸಿಂಗ್‌ ಬಂಧಿತ ಆರೋಪಿ. ದಕ್ಷಿಣ ಕಮಾಂಡ್‌ ಮಿಲಿಟರಿ ಇಂಟೆಲಿಜೆನ್ಸ್‌, ಬೆಂಗಳೂರು ಮತ್ತು ಕೇಂದ್ರೀಯ ಅಪರಾಧ ವಿಭಾಗ ಜಂಟಿ ಕಾರ್ಯಾಚರಣೆ ನಡೆಸಿ ನಗರದ ಕಾಟನ್‌ ಪೇಟೆಯ ಜಾಲಿ ಮೊಹಲ್ಲಾದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ದೇಶದಲ್ಲಿ ಬಾಂಬ್‌ ಸ್ಪೋಟಕ್ಕೆ ಸಂಚು ಹೆಣೆದಿದ್ದ 6 ಶಂಕಿತ ಉಗ್ರರ ಬಂಧನ: ಪಾಕ್‌ನಿಂದ ಸಿಕ್ಕಿತ್ತು ತರಬೇತಿ
ಆರೋಪಿ 2 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಕಾಟನ್‌ ಪೇಟೆಯ ಜಾಲಿ ಮೊಹಲ್ಲಾದಲ್ಲಿ ಬಟ್ಟೆ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದ. ಜತೆಗೆ ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳೊಂದಿಗೆ(ಐಎಸ್‌ಐ) ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ವಾಟ್ಸ್‌ಆ್ಯಪ್‌ ವಿಡಿಯೊ ಕರೆ ಮಾಡುವ ಮೂಲಕ ದೇಶದ ಆಯಕಟ್ಟಿನ ಸ್ಥಳಗಳು, ಕಟ್ಟಡ, ರಕ್ಷಣಾ ಸಂಸ್ಥೆಯ ಫೋಟೋಗಳನ್ನು ರವಾನಿಸುತ್ತಿದ್ದ ಎಂದು ತಿಳಿದುಬಂದಿದೆ. ಆರ್ಮಿ ಕಮ್ಯಾಂಡೊ ವೇಷ ಧರಿಸಿ ರಾಜಸ್ಥಾನದ ಬಾರ್ಮೆರ್‌ ಮಿಲಿಟರಿ ಸ್ಟೇಷನ್‌ಗೆ ತೆರಳಿ ಅಲ್ಲಿನ ಮಾಹಿತಿಗಳನ್ನು ಪಾಕಿಸ್ತಾನದ ಐಎಸ್‌ಐ ಅಧಿಕಾರಿಗಳಿಗೆ ರವಾನಿಸುತ್ತಿದ್ದ.

ವಾಟ್ಸ್‌ಆ್ಯಪ್‌ ವಿಡಿಯೊ, ಮೆಸೇಜ್‌ ಮತ್ತು ಕಾಲ್‌ ಮುಖಾಂತರ ಬಾರ್ಮೆರ್‌ ಮಿಲಿಟರಿ ಸ್ಟೇಷನ್‌ ಮತ್ತು ಮಿಲಿಟರಿ ವಾಹನಗಳ ಓಡಾಟದ ಬಗ್ಗೆ ಮಾಹಿತಿ ರವಾನಿಸುತ್ತಿದ್ದ. ದೇಶದ ಆಯಕಟ್ಟಿನ ಸ್ಥಳಗಳು, ಕಟ್ಟಡ, ರಕ್ಷಣಾ ಸಂಸ್ಥೆಯ ಫೋಟೊಗಳು, ಆರ್ಮಿಗೆ ಸಂಬಂಧಿಸಿದ ಮತ್ತು ಬಾರ್ಮೆರ್‌ನ ಅಂತಾರಾಷ್ಟ್ರೀಯ ಗಡಿ ಪ್ರದೇಶದ ಫೋಟೊಗಳನ್ನು ಕಳುಹಿಸಿದ್ದ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ನಗ್ನ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್‌ಮೇಲ್! ದೇಶಾದ್ಯಂತ 3951 ಪ್ರಕರಣ ಪತ್ತೆ; 3 ಬಂಧನ
ಭಾರತ ದೇಶದಲ್ಲಿದ್ದು ಇಲ್ಲಿನ ಅನ್ನ ತಿಂದು ನೆಲ ಜಲದ ಬಗ್ಗೆ ಗೌರವ ಇರದೆ ವಿರೋಧಿಗಳೊಂದಿಗೆ ದೇಶದ ಸೂಕ್ಷ್ಮ ವಿಚಾರಗಳನ್ನು ವಿನಿಮಯ ಮಾಡುವ ಅನೇಕ ದುಷ್ಕರ್ಮಿಗಳು ಈ ಹಿಂದೆಯೂ ಸಿಕ್ಕಿ ಬಿದ್ದಿದ್ದು, ನೆಲದ ಕಾನೂನಿನ ಪ್ರಕಾರ ಶಿಕ್ಷೆಯೂ ಕೊಡಲಾಗಿದೆ. ಇಂತಹ ಕೃತ್ಯಗಳು ಕಾನೂನು ಪ್ರಕಾರ ಅಪರಾಧ ಎಂದು ಗೊತ್ತಿದ್ದರೂ ಕೂಡ ಕೆಲವು ಕಿಡಿಗೇಡಿಗಳು ಇನ್ನೂ ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದು ಪೊಲೀಸರು ಮತ್ತು ಸೇನೆ, ಗುಪ್ತಚರ ಇಲಾಖೆ ಕೂಡ ಇಂತಹ ಕಿಡಿಗೇಡಿಗಳ ಮೇಲೆ ಕಣ್ಣಿಟ್ಟಿದೆ. ಇದರ ಭಾಗವಾಗಿ ಬೆಂಗಳೂರಿನಲ್ಲಿ ರಾಜಸ್ಥಾನದ ಬಾರ್ಮೆರ್‌ನ ಜಿತೇಂದ್ರ ಸಿಂಗ್‌ ಎಂಬಾತನನ್ನು ಬಂಧಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ