ಆ್ಯಪ್ನಗರ

ಕ್ಷೀಣಗೊಂಡ ಮೀಸಲಾತಿ ಹೋರಾಟದ ಕಾವು

ಮೀಸಲಿಗೆ ಒತ್ತಾಯಿಸಿ ಫೆ.22ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆರಂಭಗೊಂಡಿರುವ ಪಂಚಮಸಾಲಿ ಹೋರಾಟವು 5ನೇ ದಿನವಾದ ಶುಕ್ರವಾರ ತೀವ್ರತೆ ಕಳೆದುಕೊಂಡಂತೆ ಕಾಣುತ್ತಿದೆ. ಸರಕಾರ ಮತ್ತು ಹೋರಾಟಗಾರರ ನಡುವೆ ಸಂಬಂಧ ಬಿರುಕು ಹೆಚ್ಚಿದೆ.

Vijaya Karnataka Web 27 Feb 2021, 8:58 am
ಬೆಂಗಳೂರು: ಮೀಸಲಾತಿಗೆ ಒತ್ತಾಯಿಸಿ ಫೆ.22ರಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಆರಂಭಗೊಂಡಿರುವ ಪಂಚಮಸಾಲಿ ಹೋರಾಟವು 5ನೇ ದಿನವಾದ ಶುಕ್ರವಾರ ತೀವ್ರತೆ ಕಳೆದುಕೊಂಡಂತೆ ಕಾಣುತ್ತಿದೆ. 'ಕಾಲಾವಕಾಶ ಕೊಡಿ' ಎಂದು ಶಾಂತಿದೂತರ ಮೂಲಕ ಬಸವಜಯಮೃತ್ಯುಂಜಯ ಶ್ರೀಗಳನ್ನು ಸರಕಾರ ಒತ್ತಾಯಿಸುತ್ತಲೇ ಇದೆ.
Vijaya Karnataka Web Bengaluru: Sri Jaya Mruthyunjaya Swami speaks during the Panchamasali conventio...


ಆದರೆ, ಮೀಸಲು ನೀಡುವುದು ಸಿಎಂ ಪರಮಾಧಿಕಾರ ಎಂದು ಧರಣಿ ನಿರತರು ಸ್ಪಷ್ಟ ಸಂದೇಶ ನೀಡಿದ್ದಾರೆ. ಇದರಿಂದ ಸರಕಾರ ಮತ್ತು ಹೋರಾಟಗಾರರ ನಡುವೆ ಸಂಬಂಧ ಬಿರುಕು ಹೆಚ್ಚಿದೆ. ನಿರಂತರ ಧರಣಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿಉತ್ತರ ಕರ್ನಾಟಕದಿಂದ ಜನರನ್ನು ಕರೆತರಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನಲ್ಲಿ ಜನರಿಗೆ ಊಟ ವಸತಿ ನೀಡುವುದು ಅಸಾಧ್ಯವಾಗುತ್ತಿದೆ. ನಿರೀಕ್ಷಿತ ಜನರ ಬೆಂಬಲ ಹುಸಿಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಹೋರಾಟದಲ್ಲಿ ಸುಸ್ಥಿರತೆ ಕಾಯ್ದುಕೊಳ್ಳಬೇಕಿದೆ. ಸರಕಾರದ ವಿಳಂಬ ನೀತಿಯು ಹೋರಾಟಗಾರರು ಮತ್ತು ಪಂಚಮಸಾಲಿ ಸಮುದಾಯವನ್ನು ಗೊಂದಲಕ್ಕೀಡು ಮಾಡಿದೆ.

2ಎ ಮೀಸಲು: ಕಾಲಮಿತಿ ಸಾಧ್ಯವೇ ಇಲ್ಲ ಎಂದ ಸರಕಾರ; ಹೋರಾಟ ಮುಂದುವರಿಸಲು ಪಂಚಮಸಾಲಿಗಳ ನಿರ್ಧಾರ
ಆಮರಣಾಂತ ಉಪವಾಸ:
2ಎ ಪ್ರವರ್ಗಕ್ಕೆ ಸೇರಿಸಲು 'ಕಾಲ ಮಿತಿ' ಸಾಧ್ಯವೇ ಇಲ್ಲ ಎಂಬ ಸರಕಾರದ ಸಂದೇಶದ ಬೆನ್ನಲ್ಲೇ ಸಭೆ ನಡೆಸಿದ ಪಂಚಮಸಾಲಿ ಸಮುದಾಯದ ಮುಖಂಡರು, ಮಾರ್ಚ್ 4 ರವರೆಗೂ ತಮ್ಮ ಹೋರಾಟವನ್ನು ಮುಂದುವರಿಸಲು ನಿರ್ಧರಿಸಿದ್ದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ನಿರ್ಣಾಯಕ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿತ್ತು. ಮಾ.4ರ ಸಂಜೆ 4ರವರೆಗೂ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸ್ಪಷ್ಟ ಭರವಸೆ ನೀಡದಿದ್ದರೆ 'ಆಮರಣಾಂತ ಉಪವಾಸ ಸತ್ಯಾಗ್ರಹ' ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ