ಆ್ಯಪ್ನಗರ

ವಿಪಕ್ಷ ನಾಯಕ, ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಒಬ್ಬರೇ ಏಕೆ..? ಸಿದ್ದುಗೆ ಪರಂ ಗುದ್ದು..!

ಸಿಎಲ್ಪಿ ಹಾಗೂ ಎಲ್ಓಪಿ ಎರಡೂ ಸ್ಥಾನಗಳೂ ಸರಿ ಸಮಾನವಾದದ್ದು ಎಂದು ಹೇಳಿರುವ ಪರಂ, ಎರಡೂ ಸ್ಥಾನಗಳನ್ನು ಪ್ರತ್ಯೇಕಿಸಿ, ಇಬ್ಬರು ನಾಯಕರನ್ನು ತರಬೇಕು. ಅವರಿಬ್ಬರೂ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಎಂದು ಹೇಳಿದರು.

Vijaya Karnataka Web 20 Jan 2020, 1:21 pm
ಬೆಂಗಳೂರು: ವಿರೋಧ ಪಕ್ಷದ ನಾಯಕ ಸ್ಥಾನ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಗಳು ಪ್ರತ್ಯೇಕವಾಗಲಿ ಎಂದು ಮಾಜಿ ಡಿಸಿಎಂ ಜಿ. ಪರಮೇಶ್ವರ್ ಆಗ್ರಹಿಸಿದ್ದಾರೆ. ಈ ಮೂಲಕ ವಿಪಕ್ಷ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕ ಸ್ಥಾನವನ್ನು ತಮ್ಮಲ್ಲೇ ಉಳಿಸಿಕೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪರಂ ಗುದ್ದು ಕೊಟ್ಟಿದ್ದಾರೆ.
Vijaya Karnataka Web siddu sonia param
ವಿಪಕ್ಷ ನಾಯಕ, ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಒಬ್ಬರೇ ಏಕೆ..? ಸಿದ್ದುಗೆ ಪರಂ ಗುದ್ದು..!


ಬೆಂಗಳೂರಿನ ಸದಾಶಿವ ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಪರಮೇಶ್ವರ್, ಪಕ್ಷದ ಹಿತದೃ‍ಷ್ಟಿಯಿಂದ ಸಿಎಲ್‌ಪಿ ಹಾಗೂ ವಿಪಕ್ಷ ನಾಯಕ ಸ್ಥಾನಗಳು ಪ್ರತ್ಯೇಕವಾಗಬೇಕು ಎಂದು ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ.

ಸಿಎಲ್ಪಿ ಹಾಗೂ ಎಲ್ಓಪಿ ಎರಡೂ ಸ್ಥಾನಗಳೂ ಸರಿ ಸಮಾನವಾದದ್ದು ಎಂದು ಹೇಳಿರುವ ಪರಂ, ಎರಡೂ ಸ್ಥಾನಗಳನ್ನು ಪ್ರತ್ಯೇಕಿಸಿ, ಇಬ್ಬರು ನಾಯಕರನ್ನು ತರಬೇಕು. ಅವರಿಬ್ಬರೂ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಎಂದು ಹೇಳಿದರು. ಈ ಹೊಂದಾಣಿಕೆ ಅನ್ನೋದು ಆಯಾಯ ನಾಯಕರ ಮನಸ್ಥಿತಿ ಮೇಲೆ ಅವಲಂಬಿತವಾಗಿರುತ್ತೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಬಗೆಹರಿದಿಲ್ಲ ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆ ಕಸರತ್ತು; ಗೊಂದಲದಲ್ಲಿ ‘ಕೈ’ ಹೈಕಮಾಂಡ್

ಒಂದು ವೇಳೆ ವಿಪಕ್ಷ ನಾಯಕ ಸ್ಥಾನ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕ ಮಾಡಿದರೆ ರಾಜೀನಾಮೆ ಕೊಡ್ತೀನಿ ಅನ್ನೋ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪರಂ, ಅದು ಕೇವಲ ಅವರ ವೈಯಕ್ತಿಕ ಅಭಿಪ್ರಾಯ ಇರಬಹುದು ಎಂದರು. ಸಿದ್ದರಾಮಯ್ಯಗೆ ಅವರದೇ ಆದ ಕಾರಣಗಳಿರಬಹುದು ಎಂದ ಪರಮೇಶ್ವರ್, ಮಹಾರಾಷ್ಟ್ರದಲ್ಲೂ ಇದನ್ನೇ ಮಾಡಿದರೆ, ನಮ್ಮಲ್ಲೂ ಹಾಗೇ ಮಾಡಿದರೆ ತಪ್ಪೇನಿಲ್ಲ ಎಂದರು. ಇದು ನನ್ನ ಅಭಿಪ್ರಾಯವಷ್ಟೇ ಎಂದ ಪರಮೇಶ್ವರ್, ಹಾಗಂತ ನಮ್ಮಲ್ಲೇನೂ ಗುಂಪಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆಪಿಸಿಸಿ ಸ್ಥಾನದ ಬಗ್ಗೆ ಗೊಂದಲವಿದೆ: ಪರಂ

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಗೊಂದಲ ಇರುವುದು ನಿಜ ಎಂದು ಹೇಳಿದ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ದಿನೇಶ್ ಗುಂಡೂರಾವ್ ಯಾವುದೇ ಕಾರ್ಯಕ್ರಮಕ್ಕೂ ಹೋಗದೆ ತಟಸ್ಥವಾಗಿದ್ದಾರೆ. ಹೀಗಾಗಿ, ಆದಷ್ಟು ಬೇಗ ಘೋಷಣೆ ಮಾಡಿದ್ರೆ ಒಳ್ಳೆಯದು ಎಂದು ಪರಮೇಶ್ವರ್ ಹೇಳಿದರು. ಡಿಕೆ ಶಿವಕುಮಾರ್ ಹಾಗೂ ಎಂ ಬಿ ಪಾಟೀಲ್ ಹೆಸರುಗಳು ಮಾಧ್ಯಮಗಳಲ್ಲಿ ಓಡಾಡುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ಒಬ್ಬ ಅಧ್ಯಕ್ಷ ಇದ್ರೆ ಒಳ್ಳೆಯದು ನಾಲ್ಕು ಜನ ಕಾರ್ಯಾಧ್ಯಕ್ಷರು ಇದ್ದರೆ ಒಳ್ಳೆಯದಲ್ಲ ಎಂದರು. ನನ್ನ ದೃಷ್ಟಿಯಿಂದ ಒಂದೂ ಕೂಡ ವೈಸ್ ಪ್ರೆಸಿಡೆಂಡ್ ಹುದ್ದೆ ಸೃಷ್ಟಿ ಮಾಡಬಾರದು. ಒಂದು ವೇಳೆ ಮಾಡಿದರೆ ಗುಂಪುಗಾರಿಗೆ ಪ್ರಾರಂಭವಾಗುತ್ತದೆ ಎಂದು ಪರಮೇಶ್ವರ್ ಅಭಿಪ್ರಾಯಪಟ್ಟರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆಗೆ ಜಮೀರ್‌ ಅಹ್ಮದ್‌: ಸಿದ್ದು ನಡೆಗೆ ಮುಸ್ಲಿಂ ಮುಖಂಡರಿಂದಲೇ ವಿರೋಧ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ