ನಾಗರಾಜು ಅಶ್ವತ್ಥ್, ಬೆಂಗಳೂರು ಗ್ರಾಮಾಂತರ
ಬೆಂಗಳೂರು: ನೆರೆಯ ರಾಜ್ಯಗಳಲ್ಲಿ ನಿಯಮಗಳನ್ನು ಕೇಳೋರಿಲ್ಲದಂತಿದೆ. ಸಂಕ್ರಾಂತಿಗೆ ರೈಲುಗಳಲ್ಲಿ ಊರಿಗೆ ಬರುವವರು ಸೋಂಕನ್ನು ತವರಿಗೂ ತರುತ್ತಿದ್ದಾರೆ. ಇದು ರಾಜ್ಯದಲ್ಲಿ ಮತ್ತಷ್ಟು ಕೊರೊನಾ ಹರಡಲು ಕಾರಣವಾಗುತ್ತಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಿಂದ ಬೆಂಗಳೂರಿಗೆ ನಿತ್ಯ ಕನಿಷ್ಠ 10 ರೈಲುಗಳು ಆಗಮಿಸುತ್ತಿದ್ದು, ಸೋಂಕಿನ ಲಕ್ಷಣಗಳಿದ್ದರೂ ರಾಜ್ಯಕ್ಕೆ ನಿರಾತಂಕವಾಗಿ ಪ್ರವೇಶ ಪಡೆಯುತ್ತಿದ್ದಾರೆ. ರಾಜ್ಯದ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ಅಥವಾ ರ್ಯಾಪಿಡ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆ ಅಥವಾ ರೈಲ್ವೆ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ಹೀಗಾಗಿ, ಪ್ರಯಾಣಿಕರು ರೈಲುಗಳ ಮೊರೆ ಹೋಗುತ್ತಿದ್ದು, ಅಂತಾರಾಜ್ಯ ರೈಲುಗಳು ರಶ್ ಆಗುತ್ತಿವೆ.
ಆನ್ಲೈನ್ ಬುಕ್ಕಿಂಗ್ ನಿರಾತಂಕ
ಸೋಂಕಿನ ತೀವ್ರತೆ ಹೆಚ್ಚಿರುವ ಚೆನೈ, ಹೈದರಾಬಾದ್, ಮುಂಬೈ ಸೇರಿದಂತೆ ದೇಶದ ನಾನಾ ನಗರಗಳಿಂದ ಬೆಂಗಳೂರಿಗೆ ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಲಾಗುತ್ತಿದ್ದು, ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿಲ್ಲ. ಈ ಹಿಂದೆ ಬುಕ್ಕಿಂಗ್ಗೆ ನಾನಾ ನಿಯಮಗಳನ್ನು ಹೇರಲಾಗಿತ್ತು. ಕೊರೊನಾ ನೆಗಟಿವ್ ಪ್ರಮಾಣ ಪತ್ರ ಇರಬೇಕಿತ್ತು.
ಪ್ರಮುಖಾಂಶಗಳು
ಮಾಸ್ಕ್, ಡಬಲ್ಡೋಸ್ ಕೇಳೋರಿಲ್ಲ
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ ಕಡ್ಡಾಯವಾಗಿ ದಂಡ ವಿಧಿಸಲು ಕೊರೊನಾ ಮಾರ್ಗಸೂಚಿ ತಿಳಿಸುತ್ತದೆ. ಆದರೆ, ರೈಲ್ವೆ ನಿಲ್ದಾಣಗಳಲ್ಲಿ ಮಾಸ್ಕ್ ಕೇಳೋರಿಲ್ಲವೆಂಬಂತಾಗಿದೆ. ಜತೆಗೆ, ವಿಮಾನ ನಿಲ್ದಾಣ, ಮಾಲ್, ಸಿನಿಮಾ ಸೇರಿದಂತೆ ಕೆಲ ಪ್ರದೇಶಗಳ ಪ್ರವೇಶಕ್ಕೆ ಡಬಲ್ಡೋಸ್ ಕಡ್ಡಾಯ ಆದೇಶ ರೈಲಿನ ಪ್ರಯಾಣಕ್ಕೆ ಮಾತ್ರ ಈ ನಿಯಮವನ್ನು ವಿಸ್ತರಿಸಿಲ್ಲ. ಹೀಗಾಗಿ, ರೈಲ್ವೆ ಪ್ರಯಾಣಿಕರಲ್ಲಿ ಲಸಿಕೆ ಪಡೆಯದವರಿಗೆ ಸೋಂಕು ಶೀಘ್ರ ಹರಡುವ ಭೀತಿಯಿದೆ.
ದೇಶದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಕೊರೊನಾ ಸ್ಥಿತಿ ಬದಲಾವಣೆಯಿರುವ ಹಿನ್ನೆಲೆ ಕೇಂದ್ರದಿಂದ ಯಾವುದೇ ನಿಯಮಾವಳಿ ನೀಡಿಲ್ಲ. ರಾಜ್ಯ ಸರಕಾರಗಳು ಹೊರಡಿಸಿರುವ ಮಾರ್ಗಸೂಚಿಗಳನ್ನೇ ರೈಲ್ವೆ ಇಲಾಖೆ ಅನುಸರಿಸುತ್ತಿದ್ದು, ಸೋಂಕಿನ ತಪಾಸಣೆಗೆ ಆರೋಗ್ಯ ಇಲಾಖೆ ವ್ಯವಸ್ಥೆ ಮಾಡಿಕೊಳ್ಳಬಹುದಾಗಿದೆ. ನಿಲ್ದಾಣಗಳಲ್ಲಿ ಶೀಘ್ರ ಮಾಸ್ಕ್ ಕಡ್ಡಾಯಗೊಳಿಸಿ, ಸಿಬ್ಬಂದಿಗೆ ಸೂಚನೆ ನೀಡಲಾಗುತ್ತದೆ.
ವಿಜಯ
ಪಿಆರ್ಒ, ನೈರುತ್ಯ ರೈಲ್ವೆ. ಹುಬ್ಬಳ್ಳಿ
ರೈಲ್ವೆ ಇಲಾಖೆ ಕೇಂದ್ರ ಸರಕಾರದ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ನಿಯಮಾವಳಿ ಪಾಲಿಸಲು ಶೀಘ್ರ ಮನವಿ ಮಾಡಲಾಗುತ್ತದೆ.
ಡಾ.ರಣದೀಪ್ ,ಆಯುಕ್ತರು, ಆರೋಗ್ಯ ಇಲಾಖೆ
ಬೆಂಗಳೂರು: ನೆರೆಯ ರಾಜ್ಯಗಳಲ್ಲಿ ನಿಯಮಗಳನ್ನು ಕೇಳೋರಿಲ್ಲದಂತಿದೆ. ಸಂಕ್ರಾಂತಿಗೆ ರೈಲುಗಳಲ್ಲಿ ಊರಿಗೆ ಬರುವವರು ಸೋಂಕನ್ನು ತವರಿಗೂ ತರುತ್ತಿದ್ದಾರೆ. ಇದು ರಾಜ್ಯದಲ್ಲಿ ಮತ್ತಷ್ಟು ಕೊರೊನಾ ಹರಡಲು ಕಾರಣವಾಗುತ್ತಿದೆ.
ಆನ್ಲೈನ್ ಬುಕ್ಕಿಂಗ್ ನಿರಾತಂಕ
ಸೋಂಕಿನ ತೀವ್ರತೆ ಹೆಚ್ಚಿರುವ ಚೆನೈ, ಹೈದರಾಬಾದ್, ಮುಂಬೈ ಸೇರಿದಂತೆ ದೇಶದ ನಾನಾ ನಗರಗಳಿಂದ ಬೆಂಗಳೂರಿಗೆ ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಲಾಗುತ್ತಿದ್ದು, ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿಲ್ಲ. ಈ ಹಿಂದೆ ಬುಕ್ಕಿಂಗ್ಗೆ ನಾನಾ ನಿಯಮಗಳನ್ನು ಹೇರಲಾಗಿತ್ತು. ಕೊರೊನಾ ನೆಗಟಿವ್ ಪ್ರಮಾಣ ಪತ್ರ ಇರಬೇಕಿತ್ತು.
ಪ್ರಮುಖಾಂಶಗಳು
- ನೆರೆ ರಾಜ್ಯದಿಂದ ಬರುವ ಪ್ರಯಾಣಿಕರಿಗಿಲ್ಲ ತಪಾಸಣೆ
- ಡಬಲ್ಡೋಸ್, ಮಾಸ್ಕ್, ಅಂತರ ನಿಯಮಗಳನ್ನು ಕೇಳೋರಿಲ್ಲ
- ಆರೋಗ್ಯ ಇಲಾಖೆ, ರೈಲ್ವೆ ಇಲಾಖೆ ನಡುವೆ ಸಮನ್ವಯ ಇಲ್ಲ
ಮಾಸ್ಕ್, ಡಬಲ್ಡೋಸ್ ಕೇಳೋರಿಲ್ಲ
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ ಕಡ್ಡಾಯವಾಗಿ ದಂಡ ವಿಧಿಸಲು ಕೊರೊನಾ ಮಾರ್ಗಸೂಚಿ ತಿಳಿಸುತ್ತದೆ. ಆದರೆ, ರೈಲ್ವೆ ನಿಲ್ದಾಣಗಳಲ್ಲಿ ಮಾಸ್ಕ್ ಕೇಳೋರಿಲ್ಲವೆಂಬಂತಾಗಿದೆ. ಜತೆಗೆ, ವಿಮಾನ ನಿಲ್ದಾಣ, ಮಾಲ್, ಸಿನಿಮಾ ಸೇರಿದಂತೆ ಕೆಲ ಪ್ರದೇಶಗಳ ಪ್ರವೇಶಕ್ಕೆ ಡಬಲ್ಡೋಸ್ ಕಡ್ಡಾಯ ಆದೇಶ ರೈಲಿನ ಪ್ರಯಾಣಕ್ಕೆ ಮಾತ್ರ ಈ ನಿಯಮವನ್ನು ವಿಸ್ತರಿಸಿಲ್ಲ. ಹೀಗಾಗಿ, ರೈಲ್ವೆ ಪ್ರಯಾಣಿಕರಲ್ಲಿ ಲಸಿಕೆ ಪಡೆಯದವರಿಗೆ ಸೋಂಕು ಶೀಘ್ರ ಹರಡುವ ಭೀತಿಯಿದೆ.
ದೇಶದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಕೊರೊನಾ ಸ್ಥಿತಿ ಬದಲಾವಣೆಯಿರುವ ಹಿನ್ನೆಲೆ ಕೇಂದ್ರದಿಂದ ಯಾವುದೇ ನಿಯಮಾವಳಿ ನೀಡಿಲ್ಲ. ರಾಜ್ಯ ಸರಕಾರಗಳು ಹೊರಡಿಸಿರುವ ಮಾರ್ಗಸೂಚಿಗಳನ್ನೇ ರೈಲ್ವೆ ಇಲಾಖೆ ಅನುಸರಿಸುತ್ತಿದ್ದು, ಸೋಂಕಿನ ತಪಾಸಣೆಗೆ ಆರೋಗ್ಯ ಇಲಾಖೆ ವ್ಯವಸ್ಥೆ ಮಾಡಿಕೊಳ್ಳಬಹುದಾಗಿದೆ. ನಿಲ್ದಾಣಗಳಲ್ಲಿ ಶೀಘ್ರ ಮಾಸ್ಕ್ ಕಡ್ಡಾಯಗೊಳಿಸಿ, ಸಿಬ್ಬಂದಿಗೆ ಸೂಚನೆ ನೀಡಲಾಗುತ್ತದೆ.
ವಿಜಯ
ಪಿಆರ್ಒ, ನೈರುತ್ಯ ರೈಲ್ವೆ. ಹುಬ್ಬಳ್ಳಿ
ರೈಲ್ವೆ ಇಲಾಖೆ ಕೇಂದ್ರ ಸರಕಾರದ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ನಿಯಮಾವಳಿ ಪಾಲಿಸಲು ಶೀಘ್ರ ಮನವಿ ಮಾಡಲಾಗುತ್ತದೆ.
ಡಾ.ರಣದೀಪ್ ,ಆಯುಕ್ತರು, ಆರೋಗ್ಯ ಇಲಾಖೆ