ಧಾರವಾಡ: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ವಿರೋಧಿಸುವ ಬದಲಿಗೆ ಪಂಚಾಚಾರ್ಯರು ಮೊದಲು ಬಸವಣ್ಣನನ್ನು ಗುರು ಎಂದು ಒಪ್ಪಿಕೊಳ್ಳಲಿ. ನಮಗೆ ಪ್ರತ್ಯೇಕ ಧರ್ಮದ ಅಗತ್ಯವಿದೆ, ಇದನ್ನು ಸರಕಾರ ಕೊಡಲೇಬೇಕು. ಅದನ್ನು ನಾವು ಪಡೆದೇ ತೀರುತ್ತೇವೆ ಎಂದು ನಾಡೋಜ ಪಾಟೀಲ ಪುಟ್ಟಪ್ಪ ತಿಳಿಸಿದ್ದಾರೆ.
ಧಾರವಾಡದಲ್ಲಿ ಅವರು ಮಾತನಾಡಿದರು.
ಪಂಚಾಚಾರ್ಯರು ಬಸವಣ್ಣನ ಒಪ್ಪುವುದಿಲ್ಲ. ಬಸವಣ್ಣ ನಮ್ಮ ಭಕ್ತ ಎನ್ನುತ್ತಾರೆ. ರೇಣುಕಾಚಾರ್ಯರು ಕಲ್ಲಿನಲ್ಲಿ ಉದಯಿಸಿದರು ಅನ್ನುತ್ತಾರೆ, ಯಾರಾದರೂ ಕಲ್ಲಿನಲ್ಲಿ ಉದಯಿಸಲು ಸಾಧ್ಯವಾ? ಎಂದು ಪಾಪು ಪ್ರಶ್ನಿಸಿದರು.
ಅಲ್ಪಸಂಖ್ಯಾತ ಸ್ಥಾನಮಾನ ಎಂಬುದು ಆ ನಂತರದು. ಮೊದಲು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಅರ್ಹವಿದೆ. ಬಸವಣ್ಣ ವಿಶ್ವಮಾನ್ಯ ಗುರು. ಬಹಳ ಹಿಂದೆಯೇ ರಂಭಾಪುರಿ ಶ್ರೀಗಳು ಹುಬ್ಬಳ್ಳಿಯಲ್ಲಿ ಇದ್ದಾಗ ಅವರಿಗೆ ಈ ಬಗ್ಗೆ ಪ್ರಶ್ನಿಸಿದ್ದೆ. ಅವರು 15ನೇ ಶತಮಾನದಲ್ಲಿ ರೇಣುಕಾಚಾರ್ಯರು ಕೊಲ್ಲಿಪಾಕ ಎಂಬಲ್ಲಿ ಲಿಂಗೋದ್ಭವವಾಗಿದ್ದಾರೆ ಎಂದಿದ್ದರು. ಇದನ್ನು ನಾವು ನಂಬುವುದಿಲ್ಲ ಎಂದು ಅವರು ಕಿಡಿಕಾರಿದರು.
ಇದೇ ರಂಭಾಪುರಿ ಜಗದ್ದುರುಗಳು ರಂಭಾಪುರಿ ಪೀಠಕ್ಕೆ ಹೋಗುವ ಮೊದಲು ಬಸವ ಬಸವ ಎನ್ನುತ್ತಿದ್ದರು. ಆ ಪೀಠಕ್ಕೆ ಹೋದ ಮೇಲೆಯೇ ರೇಣುಕ ರೇಣುಕ ಎನ್ನುತ್ತಿದ್ದಾರೆ. ಬಸವಣ್ಣನವರನ್ನ ಮೆಚ್ಚಿಕೊಳ್ಳುವ ಮೂಲಕ ಪಂಚಾಚಾರ್ಯರು ದೊಡ್ಡತನ ತೋರಲಿ ಎಂದು ಪಾಟೀಲ ಪುಟ್ಟಪ್ಪ ತಿಳಿಸಿದರು.
ಧಾರವಾಡದಲ್ಲಿ ಅವರು ಮಾತನಾಡಿದರು.
ಪಂಚಾಚಾರ್ಯರು ಬಸವಣ್ಣನ ಒಪ್ಪುವುದಿಲ್ಲ. ಬಸವಣ್ಣ ನಮ್ಮ ಭಕ್ತ ಎನ್ನುತ್ತಾರೆ. ರೇಣುಕಾಚಾರ್ಯರು ಕಲ್ಲಿನಲ್ಲಿ ಉದಯಿಸಿದರು ಅನ್ನುತ್ತಾರೆ, ಯಾರಾದರೂ ಕಲ್ಲಿನಲ್ಲಿ ಉದಯಿಸಲು ಸಾಧ್ಯವಾ? ಎಂದು ಪಾಪು ಪ್ರಶ್ನಿಸಿದರು.
ಅಲ್ಪಸಂಖ್ಯಾತ ಸ್ಥಾನಮಾನ ಎಂಬುದು ಆ ನಂತರದು. ಮೊದಲು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಅರ್ಹವಿದೆ. ಬಸವಣ್ಣ ವಿಶ್ವಮಾನ್ಯ ಗುರು. ಬಹಳ ಹಿಂದೆಯೇ ರಂಭಾಪುರಿ ಶ್ರೀಗಳು ಹುಬ್ಬಳ್ಳಿಯಲ್ಲಿ ಇದ್ದಾಗ ಅವರಿಗೆ ಈ ಬಗ್ಗೆ ಪ್ರಶ್ನಿಸಿದ್ದೆ. ಅವರು 15ನೇ ಶತಮಾನದಲ್ಲಿ ರೇಣುಕಾಚಾರ್ಯರು ಕೊಲ್ಲಿಪಾಕ ಎಂಬಲ್ಲಿ ಲಿಂಗೋದ್ಭವವಾಗಿದ್ದಾರೆ ಎಂದಿದ್ದರು. ಇದನ್ನು ನಾವು ನಂಬುವುದಿಲ್ಲ ಎಂದು ಅವರು ಕಿಡಿಕಾರಿದರು.
ಇದೇ ರಂಭಾಪುರಿ ಜಗದ್ದುರುಗಳು ರಂಭಾಪುರಿ ಪೀಠಕ್ಕೆ ಹೋಗುವ ಮೊದಲು ಬಸವ ಬಸವ ಎನ್ನುತ್ತಿದ್ದರು. ಆ ಪೀಠಕ್ಕೆ ಹೋದ ಮೇಲೆಯೇ ರೇಣುಕ ರೇಣುಕ ಎನ್ನುತ್ತಿದ್ದಾರೆ. ಬಸವಣ್ಣನವರನ್ನ ಮೆಚ್ಚಿಕೊಳ್ಳುವ ಮೂಲಕ ಪಂಚಾಚಾರ್ಯರು ದೊಡ್ಡತನ ತೋರಲಿ ಎಂದು ಪಾಟೀಲ ಪುಟ್ಟಪ್ಪ ತಿಳಿಸಿದರು.