ಆ್ಯಪ್ನಗರ

ಆಡಿಯೋ ಟೇಪ್‌: ರಾಜಕಾರಣಿಗಳ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ ಮೂಡಿದೆ ಎಂದ ಸಿದ್ದರಾಮಯ್ಯ

ರಾಜಕಾರಣಿಗಳ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ ಮೂಡುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೇವೆ. ಯಾವುದೇ ಘಟನೆಗಳು ನಡೆದಾಗ ಅದರ ತನಿಖೆಗಾಗಿ ಕೆಲ ವ್ಯವಸ್ಥೆಗಳಿವೆ.ನಿಜವಾದ ಸತ್ಯವನ್ನು ಜನರಿಗೆ ಗೊತ್ತು ಮಾಡಿಸುವ ಉದ್ದೇಶದಿಂದ ಎಸ್‌ಐಟಿಗೆ ವಹಿಸಲು ನಿರ್ಧರಿಸಲಾಗಿದೆ,

Vijaya Karnataka Web 12 Feb 2019, 9:29 pm
ಬೆಂಗಳೂರು: ಆಪರೇಷನ್ ಕಮಲ ಆಡಿಯೋ ವಿಷಯ ಮಂಗಳವಾರ ಎರಡನೇ ದಿನವೂ ಕೂಡ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು.
Vijaya Karnataka Web ಸಿದ್ದರಾಮಯ್ಯ
ಸಿದ್ದರಾಮಯ್ಯ


ಆಡಳಿತ ಪ್ರತಿಪಕ್ಷಗಳ ಸದಸ್ಯರ ವಾದ-ಪ್ರತಿವಾದಗಳು, ಗದ್ದಲ, ಕೋಲಾಹಲದಿಂದಾಗಿ ಕಲಾಪ ಕೆಲ ಬಾರಿ ಮುಂದೂಡಿದ ಪ್ರಸಂಗಗಳು ನಡೆಯಿತು.

ಈ ಕುರಿತ ಚರ್ಚೆಯಲ್ಲಿ ಮಾತನಾಡಿದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಪ್ರತಿಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

ರಾಜಕಾರಣಿಗಳ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ ಮೂಡುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೇವೆ. ಯಾವುದೇ ಘಟನೆಗಳು ನಡೆದಾಗ ಅದರ ತನಿಖೆಗಾಗಿ ಕೆಲ ವ್ಯವಸ್ಥೆಗಳಿವೆ.ನಿಜವಾದ ಸತ್ಯವನ್ನು ಜನರಿಗೆ ಗೊತ್ತು ಮಾಡಿಸುವ ಉದ್ದೇಶದಿಂದ ಎಸ್‌ಐಟಿಗೆ ವಹಿಸಲು ನಿರ್ಧರಿಸಲಾಗಿದೆ, ಯಾವುದೇ ಆರೋಪಪಟ್ಟಿಯನ್ನು ಸಿದ್ಧಪಡಿಸಲು ಸದನ ಸಮಿತಿ ಮತ್ತು ನ್ಯಾಯಾಂಗ ಸಮಿತಿಗೆ ಅವಕಾಶವಿಲ್ಲ ಎಂದು ಹೇಳಿದರು.

ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಪ್ರಕರಣದ ತನಿಖೆಯ ಬಗ್ಗೆ ಸರ್ಕಾರದ ನಿರ್ಧಾರ ಕುರಿತು ಅನುಮಾನ ವ್ಯಕ್ತಪಡಿಸುವುದು ಸೂಕ್ತವಲ್ಲ, ಈ ಬಗ್ಗೆ ವಿಶ್ವಾಸವಿಡಬೇಕು, ನಿನ್ನೆ ಈ ವಿಷಯದ ಬಗ್ಗೆ ತಾಸುಗಟ್ಟಲೆ ಮಾತನಾಡಲಾಗಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಯಾಗಿ ನಿನ್ನೆ ವಿಧಾನಸಭೆಯಲ್ಲಿ ಬಿಜೆಪಿ ನೀಡಿರುವ ಸಿಡಿ ವಿಷಯ ಕುರಿತಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಯಿಸಿ, ನಮ್ಮ ಮನೆಯ ಒಳಗಡೆ ಕಾರ‍್ಯಕರ್ತರ ನಡುವೆ ನಡೆದಿರುವ ಸಂಭಾಷಣೆ ಇದ್ದಾಗಿದ್ದು, ಈ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಲಿ ತಾವು ಸಿದ್ದರಿರುವುದಾಗಿ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೇ ಸಭಾಧ್ಯಕ್ಷರ ಹೆಸರನ್ನು ಬಹಿರಂಗವಾಗಿ ಪ್ರಸ್ತಾಪಿಸುವ ಮೂಲಕ ಚರ್ಚೆ ಮಾಡುವ ಮಟ್ಟಕ್ಕೆ ಎಳೆದು ತಂದರು, ಆದರೆ ಇಡೀ ಸದನ ತಮ್ಮ ಬಗ್ಗೆ ಅಪಾರ ಗೌರವ ವ್ಯಕ್ತಪಡಿಸಿದೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ