ಆ್ಯಪ್ನಗರ

ಲೋಕಸಭೆ ಫಲಿತಾಂಶ: ಕುಟುಂಬ ರಾಜಕಾರಣಕ್ಕೆ ಶಿಕ್ಷೆ ಎಂದ ದೇವೇಗೌಡ

17ನೇ ಸಾರ್ವತ್ರಿಕ ಚುನಾವಣೆ ಫಲಿತಾಂಶ ತಮ್ಮ ಕುಟುಂಬ ರಾಜಕೀಯಕ್ಕೆ ಜನ ಕೊಟ್ಟ ಶಿಕ್ಷೆ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಒಪ್ಪಿಕೊಂಡಿದ್ದಾರೆ.

Vijaya Karnataka Web 30 Jun 2019, 10:04 am
ಬೆಂಗಳೂರು: 'ಲೋಕಸಭೆ ಚುನಾವಣೆ ಫಲಿತಾಂಶ ತಮ್ಮ ಕುಟುಂಬ ರಾಜಕಾರಣಕ್ಕೆ ಜನರು ಕೊಟ್ಟ ಶಿಕ್ಷೆ' ಎಂಬುದನ್ನು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಒಪ್ಪಿಕೊಂಡು ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ
Vijaya Karnataka Web hdd


ಪಾದಯಾತ್ರೆ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ''ಕುಟುಂಬ ರಾಜಕಾರಣ ಬಯಸಿದವ ನಾನಲ್ಲ. ಆದರೆ, ಕಳೆದ ಚುನಾವಣೆಯಲ್ಲಿ ಕುಟುಂಬದ ಮೂವರು ನಿಲ್ಲುವ ಪರಿಸ್ಥಿತಿ ಬಂತು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿದ್ದನ್ನೂ ಗಮನಿಸಿದ್ದೇನೆ. ಇದಕ್ಕೆ ಜನರು ತಕ್ಕ ಶಿಕ್ಷೆ ಕೊಟ್ಟಿದ್ದಾರೆ,'' ಎಂದರು.

''ವಯಸ್ಸಾಯ್ತು ಎಂಬ ಕಾರಣಕ್ಕೆ ಪ್ರಜ್ವಲ್‌ಗೆ ಮೂರು ವರ್ಷಗಳ ಹಿಂದೆಯೇ ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದೆ. ಆದರೆ, ನಿಖಿಲ್‌ ರಾಜಕೀಯಕ್ಕೆ ಬರುತ್ತಾನೆ ಎಂದು ಕನಸಿನಲ್ಲೂ ಎಣಿಸಿರಲಿಲ್ಲ,'' ಎಂದರು.

ಗೌಡರ ಹಿಂದಿನ ಪಾದಯಾತ್ರೆ...

* 1989ರಲ್ಲಿ ಪತ್ರಕರ್ತ ಕೆಂಚನಹಳ್ಳಿ ಗಂಗಾಧರಮೂರ್ತಿ ಕೊಲೆ ಪ್ರಕರಣ ಖಂಡಿಸಿ ಪತ್ರಕರ್ತ ಪಿ.ಲಂಕೇಶ್‌ ಜತೆ ದೇವೇಗೌಡರು ಮೊದಲ ಬಾರಿಗೆ ಪಾದಯಾತ್ರೆ ನಡೆಸಿದ್ದರು.

* 1991ರಲ್ಲಿ ಕುಣಿಗಲ್‌ನಲ್ಲಿ ಅಂದಿನ ಸಚಿವ ರಮೇಶ್‌ ಗನ್‌ಮ್ಯಾನ್‌ ಗುಂಡಿಗೆ ಜನತಾ ದಳದ ಕಾರ್ಯಕರ್ತ ಬಲಿಯಾದಾಗ, ಬೆಂಗಳೂರಿನಿಂದ ಕುಣಿಗಲ್‌ವರೆಗೆ ಪಾದಯಾತ್ರೆ ಮಾಡಿದ್ದರು.

* ಎಸ್‌.ಎಂ.ಕೃಷ್ಣ ಅವಧಿಯಲ್ಲಿ ನೀರಾಗೆ ನಿರ್ಬಂಧ ವಿರೋಧಿಸಿ ಚನ್ನಪಟ್ಟಣದ ವಿಠಲೇನಹಳ್ಳಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದಾಗ ಗೋಲಿಬಾರ್‌ನಲ್ಲಿ ನಡೆದು ರೈತರೊಬ್ಬರು ಮೃತಪಟ್ಟಿದ್ದರು. ಆಗ ಬೆಂಗಳೂರಿನಿಂದ ವಿಠಲೇನಹಳ್ಳಿಗೆ ದೇವೇಗೌಡರು ಪಾದಯಾತ್ರೆ ನಡೆಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ