ಆ್ಯಪ್ನಗರ

ಎಲ್‌ಕೆಜಿಗೆ 50ಸಾವಿರ ಪಾವತಿಸುತ್ತಾರೆ, ಎಂಬಿಬಿಎಸ್‌ಗೆ ಯಾಕಾಗಲ್ಲ: ವೈದ್ಯಕೀಯ ಫೀಸು ಹೆಚ್ಚಳ ಸಮರ್ಥಿಸಿಕೊಂಡ ಡಿಕೆಶಿ

'' ಪೋಷಕರು ಎಲ್‌ಕೆಜಿ (ಲೋವರ್ ಕಿಂಡರ್ ಗಾರ್ಡನ್) ಸೀಟಿಗೆ 50ಸಾವಿರ ಪಾವತಿಸುತ್ತಾರೆ, ಎಂಬಿಬಿಎಸ್‌ಗೆ ಯಾಕೆ ಕೊಡಲಾರರು? '', ಈ ವರ್ಷದ ವೈದ್ಯಕೀಯ ಸೀಟಿಗೆ ಶುಲ್ಕ ಹೆಚ್ಚಿಸಿರುವ ನಿರ್ಧಾರವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ ಶಿವಕುಮಾರ್ ಸಮರ್ಥಿಸಿಕೊಂಡ ಪರಿ ಇದು.

TIMESOFINDIA.COM 25 Aug 2018, 3:43 pm
ಬೆಂಗಳೂರು: '' ಪೋಷಕರು ಎಲ್‌ಕೆಜಿ (ಲೋವರ್ ಕಿಂಡರ್ ಗಾರ್ಡನ್) ಸೀಟಿಗೆ 50ಸಾವಿರ ಪಾವತಿಸುತ್ತಾರೆ, ಎಂಬಿಬಿಎಸ್‌ಗೆ ಯಾಕೆ ಕೊಡಲಾರರು? '', ಈ ವರ್ಷದ ವೈದ್ಯಕೀಯ ಸೀಟಿಗೆ ಶುಲ್ಕ ಹೆಚ್ಚಿಸಿರುವ ನಿರ್ಧಾರವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ ಶಿವಕುಮಾರ್ ಸಮರ್ಥಿಸಿಕೊಂಡ ಪರಿ ಇದು.
Vijaya Karnataka Web DKS 1


ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ರಾಜ್ಯದ ಸರಕಾರಿ ಹಾಗೂ ಖಾಸಗಿ ವೈದ್ಯ ಕಾಲೇಜುಗಳಲ್ಲಿ ಲಭ್ಯವಿರುವ 1000 ವೈದ್ಯ ಸೀಟುಗಳ ಹಂಚಿಕೆಗಾಗಿ ಅಂತಿಮ ಮಾಪ್‌-ಅಪ್‌ ಸುತ್ತಿನ ಕೌನ್ಸೆಲಿಂಗ್‌ ನಡೆಸುತ್ತಿದ್ದಾಗ ದಿಢೀರ್ ಭೇಟಿ ಕೊಟ್ಟ ಶಿವಕುಮಾರ್, ವೈದ್ಯಕೀಯ ಕೋರ್ಸ್‌ಗೆ ಸರಕಾರ ಒದಗಿಸುವ ಸೌಲಭ್ಯ ಲೆಕ್ಕ ಹಾಕಿದರೆ, ಒಬ್ಬ ವಿದ್ಯಾರ್ಥಿಗೆ 10 ಲಕ್ಷವಾಗುತ್ತದೆ. ಅಷ್ಟೇ ಅಲ್ಲ ಕಳೆದ 16 ವರ್ಷಗಳಿಂದ ಶುಲ್ಕ(16,700)ವನ್ನು ಏರಿಕೆ ಮಾಡಿರಲಿಲ್ಲ, ಎಂದರು.

ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪದವಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ 16,700 ರೂಪಾಯಿಗಳಿಂದ ರೂ 50,000 ವರೆಗೆ ಶುಲ್ಕವನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ಶುಲ್ಕವನ್ನು ವರ್ಷಕ್ಕೆ ರೂ 77,000ರೂಪಾಯಿಯಿಂದ ವರ್ಷಕ್ಕೆ ರೂ 97,350 ರೂಗೆ ಹೆಚ್ಚಿಸಲಾಗಿದೆ.

ಹೆಚ್ಚಿದ ಆರ್ಥಿಕ ಹೊರೆಗೆ ಪೋಷಕರು ಅಸಮಾಧಾನಗೊಂಡಿದ್ದಾರೆ ಎಂದಿದ್ದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, " ಕಾಲೇಜುಗಳು ಕನಿಷ್ಠ ಗುಣಮಟ್ಟದ ಮೂಲಸೌಕರ್ಯ ಮತ್ತು ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿರುವುದರಿಂದ ಹೆಚ್ಚಳ ಸಮರ್ಥನೀಯವಾಗಿದೆ," ಎಂದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ 740 ಉಳಿಕೆ ವೈದ್ಯ ಸೀಟುಗಳ ಹಂಚಿಕೆಗಾಗಿ ಶುಕ್ರವಾರ ನಡೆಸಿದ ಮಾಪ್‌-ಅಪ್‌ ಸುತ್ತಿನ ಕೌನ್ಸೆಲಿಂಗ್‌ ಕೊನೆಯ ದಿನ ನಾನಾ ರಾಜ್ಯಗಳ ವಿದ್ಯಾರ್ಥಿಗಳು ಹಾಗೂ ಪೋಷಕರ ದಂಡೇ ಆಗಮಿಸಿತ್ತು.

ಒಂದೆಡೆ ರ‍್ಯಾಂಕಿಂಗ್‌ ಇಲ್ಲದಿದ್ದರೂ ಯಾರಾದರೂ ಬಿಟ್ಟು ಹೋದ ಸೀಟು ಸಿಗಬಹುದೆಂಬ ನಿರೀಕ್ಷೆಯಿಂದ ಅರ್ಧದಷ್ಟು ವಿದ್ಯಾರ್ಥಿಗಳು ಆಗಮಿಸಿದ್ದರೆ, ಇನ್ನೂ ಕೆಲವರಿಗೆ ಸೀಟು ಸಿಕ್ಕರೂ ವರ್ಷಕ್ಕೆ 25ರಿಂದ 45 ಲಕ್ಷ ರೂ. ದುಬಾರಿ ಶುಲ್ಕ ಪಾವತಿಸಲಾಗದೆ ಕೈಚೆಲ್ಲಿ ವಾಪಸ್ಸಾದರು.

ಕೊಡಗು ವಿದ್ಯಾರ್ಥಿಗಳಿಗಾಗಿ ಪ್ರವೇಶಾತಿ ಮುಂದೂಡಿಕೆ ಇಲ್ಲ

ಪ್ರವಾಹವನ್ನು ಗಮನದಲ್ಲಿಟ್ಟುಕೊಂಡು ಪ್ರವೇಶಾತಿ ಪ್ರಕ್ರಿಯೆಯನ್ನು ಮುಂದೂಡುವಂತೆ ಮಾಡಿದ ಮನವಿಯನ್ನು ತಿರಸ್ಕರಿಸುವ ಮೂಲಕ ಕೊಡಗು ವಿದ್ಯಾರ್ಥಿಗಳಿಗೆ ಡಿಕೆಶಿ ನಿರಾಸೆ ಮೂಡಿಸಿದರು.

"ಈ ವಿಷಯ ನಮ್ಮ ಕೈಯಲ್ಲಿಲ್ಲ, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ನಾವು ನಿಗದಿತ ಸಮಯದೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿದೆ. ಕೊಡಗು ವಿದ್ಯಾರ್ಥಿಗಳಿಗೆ ನಾವು ಪ್ರತ್ಯೇಕ ವೇಳಾಪಟ್ಟಿ ಮಾಡುವ ಹಾಗಿಲ್ಲ", ಎಂದು ಶಿವಕುಮಾರ್ ಹೇಳಿದರು. ಅಷ್ಟೇ ಅಲ್ಲ ಕೊಡಗು ವಿದ್ಯಾರ್ಥಿಗಳಿಂದ ಸರ್ಕಾರಕ್ಕೆ ಯಾವುದೇ ದೂರುಗಳು ಬಂದಿಲ್ಲ ", ಎಂದು ಅವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ